ವಿಜಯ ದರ್ಪಣ ನ್ಯೂಸ್…
ಕೈಕೊಟ್ಟ ಮುಂಗಾರು ನುಗು ಜಲಾಶಯಕ್ಕೆ ಶಾಸಕ ದರ್ಶನ್ ಧ್ರುವನಾರಾಯಣ್ ಭೇಟಿ ನೀಡಿ ಪರಿಶೀಲನೆ

ತಾಂಡವಪುರ ಜುಲೈ ಏಳು ಸರಗೂರು ತಾಲ್ಲೂಕಿನ ನುಗು ಡ್ಯಾಮ್ಗೆ ಜಲಾಶಯಕ್ಕೆ ಶಾಸಕ ದರ್ಶನ್ ಧ್ರುವ ನಾರಾಯಣ್ ಅಧಿಕಾರಿಗಳ ಜೊತೆಗೂಡಿ ಭೇಟಿ ನೀಡಿ ಜಲಾಶಯದ ನೀರಿನ ಮಟ್ಟವನ್ನು ಅವಲೋಕಿಸಿದ ಶಾಸಕರು ಈ ಬಾರಿ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ನಮ್ಮ ಭಾಗದ ಕಬಿನಿ ನಗು ಜಲಾಶಯಗಳ ನೀರಿನ ಮಟ್ಟ ಕಡಿಮೆಯಾಗಿರುವುದರಿಂದ ಆತಂಕ ವ್ಯಕ್ತಪಡಿಸಿದರು.
ಈಗ ಕೇರಳ ವೈನಾಡಿನಲ್ಲಿ ಮಳೆ ಬೀಳುತ್ತಿರುವುದರಿಂದ ಕಬಿನಿ ಜಲಸಾಯಕ್ಕೆ ಒಳಹರಿವಿನ ಮಟ್ಟ ಹೆಚ್ಚಾಗಿರುವುದರಿಂದ ಸ್ವಲ್ಪಮಟ್ಟಿಗೆ ಈ ಭಾಗದ ರೈತರು ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ ಎಂದು ನೀರಿನ ಮಟ್ಟ ವೀಕ್ಷಿಸಿದ ಬಳಿಕ ಶಾಸಕರು ಸಂತಸವನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಕಡಲೆ ಕೇಶವಮೂರ್ತಿ, ಮುಖಂಡ ಕೆ ಮಾರುತಿ ಸೇರಿದಂತೆ ಇನ್ನೂ ಅನೇಕ ಮುಖಂಡರು ಅಧಿಕಾರಿ ವರ್ಗದವರು ಹಾಜರಿದ್ದರು











