ರೈತರು ಚಿಕ್ಕಬಳ್ಳಾಪುರ ವರದಹಳ್ಳಿಯ ರಾಜ್ಯ ಉಗ್ರಾಣ ನಿಗಮದ ರಾಗಿ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಿ : ತಹಸೀಲ್ದಾರ್ ಎನ್.ಗಗನಸಿಂಧು
ವಿಜಯ ದರ್ಪಣ ನ್ಯೂಸ್….
ರೈತರು ಚಿಕ್ಕಬಳ್ಳಾಪುರ ವರದಹಳ್ಳಿಯ ರಾಜ್ಯ ಉಗ್ರಾಣ ನಿಗಮದ ರಾಗಿ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಿ : ತಹಸೀಲ್ದಾರ್ ಎನ್.ಗಗನಸಿಂಧು

ಶಿಡ್ಲಘಟ್ಟ : ರೈತರ ಪ್ರತಿ ಕ್ವಿಂಟಾಲ್ ರಾಗಿಗೆ 4866 ರೂ.ಗಳ ದರ ನಿಗದಿಪಡಿಸಲಾಗಿದ್ದು, ತಾಲ್ಲೂಕಿನ 2055 ನೊಂದಾಯಿತ ರೈತರು ಚಿಕ್ಕಬಳ್ಳಾಪುರ ವರದಹಳ್ಳಿಯ ರಾಜ್ಯ ಉಗ್ರಾಣ ನಿಗಮದ ರಾಗಿ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಿ ಎಂದು ತಹಸೀಲ್ದಾರ್ ಎನ್.ಗಗನಸಿಂಧು ಮನವಿ ಮಾಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಬೆಂಬಲ ಬೆಲೆ ಯೋಜನೆಯಡಿ ರಾಗಿ, ಭತ್ತ, ಬಿಳಿಜೋಳ ಮಾರಾಟ ಮಾಡಲು ಈಗಾಗಲೇ ತಾಲ್ಲೂಕಿನಿಂದ ನೋಂದಣಿ ಮಾಡಿಕೊಂಡ ರೈತರಿಂದ ರಾಗಿ ಖರೀದಿ ಮಾಡಲು ಸಿದ್ಧತೆ ಮಾಡಿಕೊಂಡಿದ್ದು ನೋಂದಾಯಿತ ರೈತರು ರಾಗಿ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಿ ಎಂದು ಹೇಳಿದರು.
ರೈತರಿಗೆ ಅನುಕೂಲವಾಗುವಂತೆ ತಾಲ್ಲೂಕಿನ ನೋಂದಾಯಿತ ಬ್ರಿಡ್ಜ್ಗಳಾದ 2 ವೇ ಹನುಮಂತಪುರ ಬಳಿಯ ಸುಮುಖ ವೇ ಬ್ರಿಡ್ಜ್, ನಗರದ ಬೈಪಾಸ್ ಮಾರುತಿ ವೇ ಬ್ರಿಡ್ಜ್ ಳನ್ನು ಗುರುತಿಸಲಾಗಿದ್ದು ಇಲ್ಲಿ ತೂಕ ಮಾಡಿಸಿಕೊಂಡು ಖಾತ್ರಿ ಪಡೆಯಬಹುದು ಎಂದು ಮಾಹಿತಿ ನೀಡಿದರು.
