--Ads--

ಆಧ್ಯಾತ್ಮಿಕ ವಿಜ್ಞಾನಿ ರಶ್ಮಿ ಅಯ್ಯಪ್ಪಗೆ ಜೀವಮಾನ ಸಾಧನೆ ಪ್ರಶಸ್ತಿ

On: March 30, 2026 2:49 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಆಧ್ಯಾತ್ಮಿಕ ವಿಜ್ಞಾನಿ ರಶ್ಮಿ ಅಯ್ಯಪ್ಪಗೆ ಜೀವಮಾನ ಸಾಧನೆ ಪ್ರಶಸ್ತಿ

·ಭಾರತದ ಸ್ವಾಸ್ಥ್ಯ ಉದ್ಯಮದಲ್ಲಿನ ಸಾಧನೆಗಾಗಿ ಗೌರವ | ಉದ್ಯೋಗ ಯೋಗದಾನ್‌ ಪುರಸ್ಕಾರ 2026ರಲ್ಲಿ ಶಿಲ್ಪಾ ಶೆಟ್ಟಿ ಕುಂದ್ರಾರಿಂದ ಪ್ರಶಸ್ತಿ ಪ್ರದಾನ

ಬೆಂಗಳೂರು, ಮಾರ್ಚ್ 30, 2026 : ಆಧ್ಯಾತ್ಮಿಕ ವಿಜ್ಞಾನಿ, ಸಂಶೋಧಕಿ ಹಾಗೂ ಆಶ್ವಾಸನ್‌ ಸಂಸ್ಥಾಪಕಿ ರಶ್ಮಿ ಅಯ್ಯಪ್ಪ ಅವರಿಗೆ ಭಾರತದ ಸ್ವಾಸ್ಥ್ಯ (ವೆಲ್‌ನೆಸ್‌) ಉದ್ಯಮದ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ ಮಾರ್ಚ್‌ 28ರಂದು ಆಯೋಜಿಸಿದ್ದ ಉದ್ಯೋಗ ಯೋಗದಾನ ಪುರಸ್ಕಾರ 2026ರಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಉದ್ಯೋಗ್ ಯೋಗದಾನ್ ಪುರಸ್ಕಾರವು ಕೈಗಾರಿಕಾ ವಲಯದ ಅತ್ಯುನ್ನತ ಮನ್ನಣೆಯಾಗಿದ್ದು, ತಮ್ಮ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆಗಳನ್ನು ನೀಡಿ ಶಾಶ್ವತ ಹೆಜ್ಜೆಗುರುತು ಮೂಡಿಸಿದ ವ್ಯಕ್ತಿಗಳನ್ನು ಗೌರವಿಸುವ ಪ್ರಶಸ್ತಿಯಾಗಿದೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಟಿ, ಉದ್ಯಮಿ ಮತ್ತು ಸ್ವಾಸ್ಥ್ಯ ಪ್ರತಿಪಾದಕಿಯಾದ ಶಿಲ್ಪಾ ಶೆಟ್ಟಿ ಕುಂದ್ರಾ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಆರೋಗ್ಯ ಮತ್ತು ಸ್ವಾಸ್ಥ್ಯ ಕ್ಷೇತ್ರಗಳಲ್ಲಿನ ಅವರ ಅಸಾಧಾರಣ ಕೊಡುಗೆಗಳಿಗಾಗಿ ರಶ್ಮಿ ಅಯ್ಯಪ್ಪ ಅವರನ್ನು ಗೌರವಿಸಲಾಯಿತು. ರಶ್ಮಿ ಅಯ್ಯಪ್ಪ ಅವರು ಆಶ್ವಾಸನ್ ಸೈನ್ಸ್ ಮೂಲಕ, ಅವರು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಆರೋಗ್ಯದಲ್ಲಿ ಸಮಗ್ರ ಯೋಗಕ್ಷೇಮವನ್ನು ತರುವ ಪರಿವರ್ತಕ ವಿಧಾನವನ್ನು ಪರಿಚಯಿಸಿದ್ದಾರೆ.

ಇದು ಸ್ವಾಸ್ಥ್ಯವನ್ನು ಹೇಗೆ ಅರ್ಥಮಾಡಿಕೊಳ್ಳಲಾಗುತ್ತದೆ ಮತ್ತು ಅನುಭವಿಸಲಾಗುತ್ತದೆ ಎಂಬುದರ ಮೂಲಕ ಗಮನಾರ್ಹ ಪ್ರಗತಿಯನ್ನು ಸಾಧಿಸುತ್ತದೆ. ಇವುಗಳನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಮಾರ್ಗದರ್ಶಕಿ ಮತ್ತು ಕ್ರಾಂತಿಕಾರಿ ಉದ್ಯಮಿಯಾಗಿರುವ ರಶ್ಮಿ ಅಯ್ಯಪ್ಪ ಅವರು ಪ್ರಕೃತಿಯ ವಿಸ್ಮಯಗಳಾದ ಲೈಫ್‌ಫೋರ್ಸ್ ಮೆಕ್ಯಾನಿಸಂ ಮತ್ತು ಟೈಮ್‌ಲೆಸ್ ಫೆನಾಮಿನನ್ ಅನುಭವಗಳೊಂದಿಗೆ ಜನಿಸಿದರು. ಇವುಗಳು ಜೀವವಿಧಾನದ (ಲೈಫ್‌ಸ್ಟೈಲ್‌ನ) ಕಾರ್ಯವಿಧಾನಗಳು ಮತ್ತು ಪ್ರಕೃತಿಯ ಕಾರಣ ಮತ್ತು ಪರಿಣಾಮದ ಚಕ್ರದ ಜ್ಞಾನವನ್ನು ಒಳಗೊಂಡಿವೆ.

ಈ ಎರಡು ವಿದ್ಯಮಾನಗಳ ಮೂಲಕ, ಅವರು ಆಶ್ವಾಸನ್ ಸೈನ್ಸ್ ಎಂಬ ಅದ್ಭುತ ಆಧ್ಯಾತ್ಮಿಕ ತಂತ್ರಜ್ಞಾನವನ್ನು ಹೊರತಂದರು. ಈ ವಿಜ್ಞಾನವು ಬ್ರಹ್ಮಾಂಡದ ಎಲ್ಲಾ ಕಾರ್ಯವಿಧಾನಗಳಿಗೆ ಆಧಾರವಾಗಿರುವ ಕ್ವಾಂಟಮ್ ವಿದ್ಯಮಾನಗಳನ್ನು ಬೆಂಬಲಿಸುತ್ತದೆ. ಇದು ಸಾರ್ವತ್ರಿಕ ವಿಜ್ಞಾನ ಮತ್ತು ಭೌತಿಕ ವಿಜ್ಞಾನಗಳ ನಡುವಿನ ಸೇತುವೆಯಾಗಿದೆ. ಈ ವಿಜ್ಞಾನವು ಎಲ್ಲಾ ಜೀವರಾಶಿಗಳ ಕಾರ್ಯವಿಧಾನಗಳನ್ನು ಒಂದೇ ಕ್ರಿಯಾತ್ಮಕ ಸ್ವರೂಪದಲ್ಲಿ ಒಳಗೊಂಡಿದೆ.

ಅದು ರೋಗ, ಜೀವನದ ಸನ್ನಿವೇಶಗಳು, ಸಂಬಂಧಗಳು ಅಥವಾ ತನ್ನನ್ನು ತಾನು ಅರಿಯದಿರುವುದು, ಹೀಗೆ ಪ್ರತಿಯೊಂದು ಅಜ್ಞಾತ ಸಮಸ್ಯೆಗಳ ಮೂಲ ಕಾರಣವನ್ನು ಹುಡುಕಿ, ಪರಿಹರಿಸುತ್ತದೆ. ಆಶ್ವಾಸನ್ ಸೈನ್ಸ್ ಮೂಲತಃ ಆಧ್ಯಾತ್ಮಿಕವಾಗಿದ್ದು, ವೈಜ್ಞಾನಿಕ ವಿಧಾನವನ್ನು ಹೊಂದಿದೆ. ಅದಲ್ಲದೇ ಪ್ರಾಯೋಗಿಕ ಸ್ವರೂಪದ್ದಾಗಿದೆ.

ಆಶ್ವಾಸನ್ ವಿಜ್ಞಾನವನ್ನು ಜಗತ್ತಿಗೆ ಪರಿಚಯಿಸಲು ರಶ್ಮಿ ಅಯ್ಯಪ್ಪ ಅವರು ಮೇ 23, 2005 ರಂದು ಆಶ್ವಾಸನ್ ಎಂಬ ಆಧ್ಯಾತ್ಮಿಕ ವಿಜ್ಞಾನ ಸಂಸ್ಥೆಯನ್ನು ಸ್ಥಾಪಿಸಿದರು. ಕಳೆದ ಎರಡು ದಶಕಗಳಲ್ಲಿ, ಅವರ ಆವಿಷ್ಕಾರಗಳು ಆರೋಗ್ಯ ಮತ್ತು ಸ್ವಾಸ್ಥ್ಯ ಕ್ಷೇತ್ರದಲ್ಲಿ 100 ಕ್ಕೂ ಹೆಚ್ಚು ಮಹತ್ವದ ಪ್ರಗತಿಗಳನ್ನು ತಂದಿವೆ. 30 ಕ್ಕೂ ಹೆಚ್ಚು ದೇಶಗಳಲ್ಲಿ ಲಕ್ಷಾಂತರ ಜನರ ಜೀವನದ ಮೇಲೆ ಸಕಾರಾತ್ಮಕ ಪ್ರಭಾವ ಬೀರಿವೆ.

ಅವರ ಪ್ರವರ್ತಕ ಕಾರ್ಯವು ಪ್ರಪಂಚದಾದ್ಯಂತದ ಜನರಿಗೆ ತಮ್ಮ ಅನಂತ ಗುರುತನ್ನು ಕಂಡುಕೊಳ್ಳಲು ಮತ್ತು ಸಂಸ್ಥೆಗಳಿಗೆ ಆಳವಾದ ಬದಲಾವಣೆಯನ್ನು ಹೊಂದಲು ಅನುವು ಮಾಡಿಕೊಟ್ಟಿದೆ. 2005 ರಿಂದ 2012 ರವರೆಗೆ, ರಶ್ಮಿ ಮತ್ತು ಅವರ ಕಾರ್ಯಗಳನ್ನು ಪ್ರಪಂಚದಾದ್ಯಂತದ ಅನೇಕ ಮಾಧ್ಯಮ ಸಂಸ್ಥೆಗಳು, ಸುದ್ದಿ ವಾಹಿನಿಗಳು, ರೇಡಿಯೋ ಚಾನೆಲ್‌ಗಳು ಮತ್ತು 250ಕ್ಕೂ ಸಂಸ್ಥೆಗಳು ಪ್ರಕಟಿಸಿವೆ, ಪ್ರಸಾರ ಮಾಡಿವೆ.

ರಶ್ಮಿ ಅಯ್ಯಪ್ಪ ಅವರು ಆಶ್ವಾಸನ್ ಅನ್ನು ತಮ್ಮ ಜೀವನದ ಉದ್ದೇಶವನ್ನಾಗಿ ಮಾಡಿಕೊಂಡಿದ್ದಾರೆ. ಜೀವನದಲ್ಲಿ ಭರವಸೆ ಕಳೆದುಕೊಂಡವರು ಜೀವನವನ್ನು ಹುಡುಕಿಕೊಂಡು ಬರುವ, ಜೀವನವನ್ನು ಸಂಪೂರ್ಣ ರೂಪದಲ್ಲಿ ಸಂಭ್ರಮಿಸುವ ತಾಣವಾಗಿ ಆಶ್ವಾಸನ್‌ ರೂಪುಗೊಂಡಿದೆ. ಅವರದ್ದೇ ಮಾತುಗಳಲ್ಲಿ ಹೇಳುವುದಾದರೆ, ಆಶ್ವಾಸನ್ ಅನ್ನೋದು ಪ್ರಕೃತಿಯದ್ದೇ ಸೃಷ್ಟಿ. ಇದು ಜೀವಮಾನವಿಡೀ ಮುಂದುವರಿಯುವ ಮತ್ತು ಶಾಶ್ವತವಾಗಿ ಉಳಿಯುವ ಕ್ರಾಂತಿಯಾಗಿದೆ. ಜೀವನವನ್ನು ಗುರುತಿಸುವ ಏಕೈಕ ಸಾರವೆಂದರೆ ಪ್ರೀತಿ. ಪ್ರೀತಿಯೇ ಎಲ್ಲದರ ಆರಂಭ… ಎನ್ನುತ್ತಾರೆ ರಶ್ಮಿ ಅಯ್ಯಪ್ಪ.

WhatsApp

Join Now

Telegram

Join Now

Instagram

Join Now