ವಿಜಯ ದರ್ಪಣ ನ್ಯೂಸ್….
ಸಾಗರಕಟ್ಟೆ ಹತ್ತಿರ ಲೆವಲ್ ಕ್ರಾಸಿಂಗ್ ಸೇತುವೆ ನಿರ್ಮಾಣಕ್ಕೆ ಕೇಂದ್ರ ರೈಲ್ವೆ ಸಚಿವರಿಗೆ ಶಾಸಕರ ಮನವಿ

ತಾಂಡವಪುರ ಏಪ್ರಿಲ್11 ಮೈಸೂರು ಜಿಲ್ಲೆ ಕೆ.ಆರ್.ನಗರ ಮಧ್ಯದಲ್ಲಿರುವ ಸಾಗರಕಟ್ಟೆ ಹತ್ತಿರ 23/200-300 ಕಿ.ಮಿ.ನಲ್ಲಿರುವ ಲೆವಲ್ ಕ್ರಾಸಿಂಗ್ ಗೇಟ್ ಎಲ್.ಸಿ.-19ನ್ನು ಮೇಲ್ ಸೇತುವೆ ಮಾಡುವಂತೆ ಶಾಸಕ ಜಿ.ಟಿ.ದೇವೇಗೌಡ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣರಿಗೆ ಮನವಿ ಮಾಡಿದರು.
ಕ್ಷೇತ್ರ ವ್ಯಾಪ್ತಿಯಲ್ಲಿ ಮೈಸೂರು-ಕೆ.ಆರ್.ನಗರ ರೈಲ್ವೆ ಹಳಿಗಳು ಹಾದು ಹೋಗಿದ್ದು, ಕಾವೇರಿ ನದಿಗೆ ಹೊಂದಿಕೊಂಡಂತೆ ಇರುವ ಸಾಗರಕಟ್ಟೆ ರೈಲ್ವೆ ಸ್ಟೇಷನ್ ಹತ್ತಿರ 24/200-300 ಕಿ.ಮೀ.ನಲ್ಲಿ ಈಗಾಗಲೇ ಒಂದು ಕೆಳ ಸೇತುವೆಯನ್ನು ರೈಲ್ವೆ ಇಲಾಖೆವತಿಯಿಂದ ನಿರ್ಮಾಣ ಮಾಡಿದ್ದು, ಕಾವೇರಿ ನದಿಗೆ ನೀರು ಬಂದಾಗ ನೀರು ಕೆಳ ಸೇತುವೆಯಲ್ಲಿ ತುಂಬಿಕೊಂಡಿರುತ್ತದೆ.
ಕೆ.ಆರ್.ಎಸ್.ನಲ್ಲಿ ಸುಮಾರು 9 ತಿಂಗಳುಗಳ ಕಾಲ ನೀರು ತುಂಬಿರುತ್ತದೆ. ಇದರಿಂದ ಕೆಳ ಸೇತುವೆಯಾವುದೇ ಉಪಯೋಗಕ್ಕೆ ಬಂದಿರುವುದಿಲ್ಲ. ಆದರೆ, ಇತ್ತೀಚಿಗೆ ಸಾಗರಕಟ್ಟೆ-ರಾಮನಹಳ್ಳಿಗೆ ಹೋಗುವ ರಸ್ತೆಯಲ್ಲಿರುವ 23/200-300 ಲೆವಲ್ ಕ್ರಾಸಿಂಗ್ ಗೇಟ್ ಎಲ್.ಸಿ.-19ನಲ್ಲಿ ಕೆಳ ಸೇತುವೆ ನಿರ್ಮಾಣ ಮಾಡಲು ಅಂದಾಜು ತಯಾರಿಸಿರುವುದಾಗಿ ಲೆವೆಲ್ ಕ್ರಾಸಿಂಗ್-17ನಲ್ಲಿ ಕೆ.ಆರ್.ಎಸ್.ನ ತಿಳಿದುಬಂದಿರುತ್ತದೆ.
ಕೆಳ ನಿರ್ಮಾಣ ಸೇತುವೆ ಹಿನ್ನೀರಿನಲ್ಲಿರುವ ಸದರಿ ಮಾಡಿದರೆ ರೈತರಿಗೆ ಬಹಳ ತೊಂದರೆಯಾಗಲಿದೆ. ಆದ್ದರಿಂದ ತಾವು ಸಾಗರಕಟ್ಟೆ-ರಾಮನಹಳ್ಳಿಗೆ ಹೋಗುವ ರಸ್ತೆಯಲ್ಲಿರುವ 23/200-300 ಲೆವಲ್ ಕ್ರಾಸಿಂಗ್ ಗೇಟ್ ಎಲ್.ಸಿ.-19ನಲ್ಲಿ ಕೆಳ ಸೇತುವೆಯ ಬದಲಾಗಿ ಮೇಲ್ ಸೇತುವೆ ನಿರ್ಮಾಣ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಡಾಕ್ಟರ್ ಡಿ ತಿಮಯ್ಯ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಬಿಎಂ ರಾಮು ಸೇರಿದಂತೆ ಮುಂತಾದವರು ಹಾಜರಿದ್ದರು











