ವಜವವಯ ದರ್ಪಣ ನ್ಯೂಸ್…. ವಿಜಯ ದರ್ಪಣ ನ್ಯೂಸ್….
ನೂತನ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರಿಗೆ ಸನ್ಮಾನ

ತಾಂಡವಪುರ ಜೂನ್ 4 ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸಂಪುಟದಲ್ಲಿ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಡಾಕ್ಟರ್ ಯತೀಂದ್ರ ಸಿದ್ದರಾಮಯ್ಯನವರನ್ನು ಚಿಕ್ಕಯ್ಯನ ಛತ್ರ ಹೋಬಳಿಯ ಕಾಂಗ್ರೆಸ್ ಮುಖಂಡರಿಂದ ಅದ್ದೂರಿ ಸ್ವಾಗತ ಕೊರಲಾಯಿತು
ಸನ್ಮಾನ ಸ್ವೀಕರಿಸಿದ ಬಳಿಕ ನೂತನ ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ ಮಾತನಾಡಿ
ನಿಮ್ಮ ಪ್ರೀತಿಯ ಅಭಿಮಾನಕ್ಕೆ ನಾವು ಸದಾ ಚಿರಋಣಿ ಯಾಗಿರುತ್ತೇವೆ ಎಂದು ಹೇಳಿದರು
ನಂಜನಗೂಡು ತಾಲ್ಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಕೆಂಪಿ ಸಿದ್ದನ ಹುಂಡಿ ತಾಂಡವಪುರ ಬಂಚಳ್ಳಿ ಹುಂಡಿ ಹಾಗೂ ಬಿಳಿಗೆರೆ ತಿರುಗುಂದ ಮರಳೂರು ಗ್ರಾಮವು ಸೇರಿದಂತೆ ಮುಂತಾದ ಗ್ರಾಮಗಳ ಮುಖಂಡರಗಳು ಬೆಂಗಳೂರಿನ ಅವರ ನಿವಾಸದಲ್ಲಿ ಭೇಟಿ ಮಾಡಿ ಸನ್ಮಾನಿಸಿದರು ಗೌರವಿಸಿದ್ದರು
ಈ ಸಂದರ್ಭದಲ್ಲಿ ಕೆಂಪಿಸಿದ್ರ ಹುಂಡಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಕೆ ಎಸ್ ರವಿ ಶೃತಿ ಬೀರಯ್ಯ ತಾಂಡವಪುರದ ಕಾಂಗ್ರೆಸ್ ಮುಖಂಡ ಎಂ ದಕ್ಷಿಣ ಮೂರ್ತಿ ಧರ್ಮರಾಜು ಕಿರುಗುಂದ ಶಿವ ನಾಗ ಬಿಳಿಗೆರೆ ಗುಂಡಪ್ಪ ರವಿ ಮರಳೂರು ಗೊದ್ದನಪುರ ದೊರೆ ಸ್ವಾಮಿ ಸೇರಿದಂತೆ ಮುಂತಾದವರು ಈ ಸಂದರ್ಭದಲ್ಲಿ ನೂತನ ಸಚಿವರನ್ನು ಸನ್ಮಾನಿಸಿ ಗೌರವಿಸಿದರು










