ವಿಜಯ ದರ್ಪಣ ನ್ಯೂಸ್….
ಸಿದ್ದರಾಮಯ್ಯ ಶಾಶ್ವತ ಸಿಎಂ ಎಂದು ಮೈಸೂರಿನಲ್ಲಿ ಘೋಷಣೆ ಕೂಗಿದ ಕಾಂಗ್ರೆಸ್ ಕಾರ್ಯಕರ್ತರು

ತಾಂಡವಪುರ ಸೆಪ್ಟೆಂಬರ್ 15ಸಿದ್ದರಾಮಯ್ಯ ರವರು ಶಾಶ್ವತ ಮುಖ್ಯಮಂತ್ರಿ. ಎಂದು ಮೈಸೂರಿನಲ್ಲಿ ಘೋಷಣೆ ಕೂಗಿದ ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು
ಅವರು ಇಂದು ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಮೈಸೂರು ನಗರದಲ್ಲಿರುವ ಕಾಂಗ್ರೆಸ್ ಭವನ ಕಟ್ಟಡ ನಿರ್ಮಾಣ ವೀಕ್ಷಣೆಗೆ ಭೇಟಿ ನೀಡಿ, ರೈಲ್ವೆ ನಿಲ್ದಾಣದ ಬಳಿ ಅತ್ಯಂತ ಪ್ರತಿಷ್ಠಿತವಾಗಿ ನಿರ್ಮಾಣವಾಗುತ್ತಿರುವ ನೂತನ ಕಾಂಗ್ರೆಸ್ ಕಚೇರಿ (ಇಂದಿರಾ ಕಾಂಗ್ರೆಸ್ ಭವನ) ಕಟ್ಟಡದ ಕಾಮಗಾರಿಯನ್ನು ನೇರವಾಗಿ ಸ್ಥಳದಲ್ಲೇ ಪರಿಶೀಲಿಸಿ ಕಾಮಗಾರಿ ಪ್ರಗತಿಯ ಬಗ್ಗೆ ಮಾಹಿತಿ ಪಡೆದುಕೊಂಡರು.
ಮೈಸೂರಿನಲ್ಲಿ ಕಾಂಗ್ರೆಸ್ಗೆ ದೀರ್ಘಕಾಲದ ಬಳಿಕ ತನ್ನದೇ ಆದ ಸ್ವಂತ ಕಚೇರಿ ರೂಪುಗೊಳ್ಳುತ್ತಿದ್ದು, ಕಾಮಗಾರಿಯ ಪ್ರಗತಿ ಹಾಗೂ ಗುಣಮಟ್ಟದ ಬಗ್ಗೆ ಸ್ಥಳದಲ್ಲಿದ್ದ ಇಂಜಿನಿಯರ್ಗಳು ಹಾಗೂ ಪಕ್ಷದ ಪ್ರಮುಖರೊಂದಿಗೆ ಸಿದ್ದರಾಮಯ್ಯ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಮೈಸೂರು ನಗರ ಹಾಗೂ ಗ್ರಾಮಾಂತರ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಡಾ. ಬಿಜೆ ವಿಜಯಕುಮಾರ್ ಬೀರಿಗುಂಡಿ ಬಸವಣ್ಣ ಆರ್ ಮೂರ್ತಿ ಶಾಸಕರಾದ ತನ್ವೀರ್ ಸೆಟ್, ಕೆ ಹರೀಶ್ ಗೌಡ ಡಾ ಡಿ ತಿಮ್ಮಯ್ಯ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮುಖಂಡರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಅದ್ಧೂರಿ ಸ್ವಾಗತ ಕೋರಿದರು.
ಈ ವೇಳೆ ಮೈಸೂರು ಜಿಲ್ಲಾ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಬಿ.ಜೆ. ವಿಜಯಕುಮಾರ್ ನೂತನ ಜಿಲ್ಲಾಧ್ಯಕ್ಷ ಬೀರಿಹುಂಡಿ ಬಸವಣ್ಣ ಶಾಸಕರಾದ ಕೆ ಹರೀಶ್ ಗೌಡ ತನ್ವೀರ್ ಸೆಟ್ ಆರ್ ಮೂರ್ತಿ ಮುಖಂಡರಾದ ಶಿವಣ್ಣ ಮಾಜಿ ಶಾಸಕ ಎಂ ಕ ಸೋಮಶೇಖರ್ ಕಾಂಗ್ರೆಸ್ ಮುಖಂಡರಾದ ಎಂ ಸಿ ಹುಂಡಿ ಶಿವಪ್ರಸಾದ್ ಸಕಳ್ಳಿ ಬಸವರಾಜು ಗೋಪಿ ಸೇರಿದಂತೆ ನೂರಾರು ಅಭಿಮಾನಿಗಳು ಹಾಗೂ ಕಾರ್ಯಕರ್ತರು ಹಾಜರಿದ್ದು ಸಿದ್ದರಾಮಯ್ಯ ಅವರಿಗೆ ಸನ್ಮಾನ ಮಾಡುವ ವೇಳೆ ‘ಶಾಶ್ವತ ಮುಖ್ಯಮಂತ್ರಿ ಸಿದ್ದರಾಮಯ್ಯ’ ಎಂದು ಜೋರಾಗಿ ಘೋಷಣೆಗಳನ್ನು ಕೂಗುವ ಮೂಲಕ ತಮ್ಮ ಅಭಿಮಾನವನ್ನು ಮೆರೆದರು.
ಮೈಸೂರಿನಲ್ಲಿ ನಡೆದ ಕಾಂಗ್ರೆಸ್ ಕಚೇರಿ ಕಾಮಗಾರಿ ಪರಿಶೀಲನೆ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಿ ಗೌರವಿಸಿ ಸಂಭ್ರಮಿಸಿದರು
ನಿಧನ ವಾರ್ತೆ

ತಾಂಡವಪುರ ಸೆಪ್ಟೆಂಬರ್ 15 ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ತಾಂಡವಪುರ ಗ್ರಾಮದ ಕಾಂಗ್ರೆಸ್ ಮುಖಂಡ ಗುತ್ತಿಗೆದಾರ ಮಾಲಯ್ಯ ರವರ ತಂದೆ ಹಳೆಹಟ್ಟಿ ದೊಡ್ಡ ಮಾಲೆಗೌಡ ರವರಿಗೆ 102 ವಯಸ್ಸು ಆಗಿತ್ತು ಅನಾರೋಗ್ಯ ನಿಮಿತ್ತ ನಿನ್ನೆ ಸ್ವಾಗ್ರಾಮ ತಾಂಡವಪುರದಲ್ಲಿ ನಿಧನ ಹೊಂದಿದರು.
ಮಾಲೆಗೌಡರಿಗೆ ಇಬ್ಬರು ಪತ್ನಿಯರು ನಾಲ್ವರು ಪುತ್ರರು ಮೂವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಆಗಲಿದ್ದು ಇವರ ಅಂತ್ಯಕ್ರಿಯೆಯನ್ನು ಗ್ರಾಮದ ರುದ್ರ ಭೂಮಿಯಲ್ಲಿ ನೆರವೇರಿಸಲಾಯಿತು











