ಸರ್ಕಾರವು ಕಳೆದ 10 ವರ್ಷಗಳಲ್ಲಿ 50 ದಶಕಗಳಿಗೂ ಮಿಗಿಲಾದ ಸುಧಾರಣಾ ಕಾರ್ಯಗಳನ್ನು ಕೈಗೊಂಡಿದೆ:ಅಮಿತ್ ಶಾ

ವಿಜಯ ದರ್ಪಣ ನ್ಯೂಸ್

ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ (ಎನ್ಎಫ್ಎಸ್ಯು) ಮಂಗಳವಾರ ನಡೆದ 5ನೇ ಅಂತಾರಾಷ್ಟ್ರೀಯ ಮತ್ತು 44ನೇ ಅಖಿಲ ಭಾರತ ಅಪರಾಧ ವಿಜ್ಞಾನ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ, “ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ , ಕಳೆದ 10 ವರ್ಷಗಳಲ್ಲಿ ಸರ್ಕಾರವು 50 ದಶಕಗಳಿಗೂ ಹೆಚ್ಚಿನ ಸುಧಾರಣಾ ಕಾರ್ಯಗಳನ್ನು ಕೈಗೊಂಡಿದೆ. ಹೊಸ ಕಾನೂನುಗಳಲ್ಲಿ ತಂತ್ರಜ್ಞಾನದ ಬಳಕೆಯಿಂದ, ನವ ಭಾರತದಲ್ಲಿ ನ್ಯಾಯವು ಈಗ ಎಲ್ಲರಿಗೂ ಸುಲಭವಾಗಿ ಕೈಗುಟವಂತಾಗಿದೆ” ಎಂದರು.

ದೂರದೃಷ್ಟಿಯ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ಗೃಹ ವ್ಯವಹಾರ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಹಿಂದೆ ಬ್ರಿಟಿಷರು ಮಾಡಿದ್ದ ಕಾನೂನುಗಳನ್ನು ತಿದ್ದುಪಡಿ ಮಾಡಿ ಹೊಸ ಕಾನೂನುಗಳನ್ನು ಪ್ರಸ್ತಾಪಿಸಿದರು. ಹಿಂದಿನ ಕಾನೂನುಗಳು ಬ್ರಿಟಿಷ್ ಆಳ್ವಿಕೆಯನ್ನು ಭದ್ರಪಡಿಸಲು ಭಾರತೀಯರನ್ನು ಶಿಕ್ಷಿಸುವ ಗುರಿಯನ್ನು ಹೊಂದಿದ್ದವು, ಆದರೆ ಹೊಸ ಕಾನೂನುಗಳು ನ್ಯಾಯದ ಮೂಲಭೂತ ತತ್ತ್ವದೊಂದಿಗೆ ರಚಿಸಲ್ಪಟ್ಟಿವೆ. ಹಿಂದಿನ ಕಾನೂನುಗಳಲ್ಲಿ ‘ಶಿಕ್ಷೆ’ ಎಂಬ ಪದವು ಗಮನಾರ್ಹವಾದ ಮಹತ್ವವನ್ನು ಪಡೆದರೆ, ಹೊಸ ಕಾನೂನುಗಳಲ್ಲಿ ‘ನ್ಯಾಯ’ ಎಂಬ ಪದವು ಮಹತ್ವ ಪಡೆದಿದೆ. ಏಳು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷೆ ವಿಧಿಸಬಹುದಾದ ಅಪರಾಧಗಳಲ್ಲಿ, ಅಪರಾಧ ಸ್ಥಳಕ್ಕೆ ವಿಧಿ ವಿಜ್ಞಾನ (ಫೋರೆನ್ಸಿಕ್ ಸೈನ್ಸ್) ಅಧಿಕಾರಿಯ ಕಡ್ಡಾಯ ಭೇಟಿಯು, ತನಿಖೆಗಳನ್ನು ಸರಳಗೊಳಿಸಿ, ನ್ಯಾಯಾಧೀಶರ ಕೆಲಸವನ್ನು ಸುಲಭಗೊಳಿಸುತ್ತದೆ ಎಂಬುದು ಶಾರ ನಂಬಿಕೆ. ತಂತ್ರಜ್ಞಾನದ ನೆರವಿನೊಂದಿಗೆ, ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ಸವಾಲುಗಳನ್ನು ನಿವಾರಿಸಿಕೊಂಡು, ಭಾರತದ ಕಾನೂನು ವ್ಯವಸ್ಥೆಯು ಮುಂದಿನ 5 ವರ್ಷಗಳಲ್ಲಿ ವಿಶ್ವದ ಅತ್ಯಂತ ಆಧುನಿಕ ನ್ಯಾಯ ವ್ಯವಸ್ಥೆಯಾಗಲಿದೆ.

ಗುಲಾಮಗಿರಿಯ ಮನಸ್ಥಿತಿಯನ್ನು ತೊಡೆದುಹಾಕುವಲ್ಲಿ ಸಿದ್ಧಹಸ್ತರಾಗಿರುವ ಮತ್ತು ಭಾರತದ ರಾಜಕೀಯ ರಂಗದಲ್ಲಿ ಚಾಣಕ್ಯನೆಂದೇ ಗುರಿತಿಸಿಕೊಂಡಿರುವ ಅಮಿತ್ ಶಾ ಅವರು ಮುಂದಿನ 5 ವರ್ಷಗಳಲ್ಲಿ, ಪ್ರತಿ ವರ್ಷಕ್ಕೆ 9,000 ಕ್ಕೂ ಹೆಚ್ಚು ವಿಧಿ ವಿಜ್ಞಾನ ಅಧಿಕಾರಿಗಳಿಗೆ ತರಬೇತಿ ನೀಡುವ ವ್ಯವಸ್ಥೆಯನ್ನು ಸ್ಥಾಪಿಸಿದ್ದಾರೆ. ಹೊಸ ಕಾನೂನುಗಳಲ್ಲಿ ತಂತ್ರಜ್ಞಾನದ ಬಳಕೆಯಿಂದ, ನ್ಯಾಯವು ಈಗ ಎಲ್ಲರಿಗೂ ಸುಲಭವಾಗಿ ಲಭ್ಯವಾಗಲಿದ್ದು, ಮುಂಬರುವ ವರ್ಷಗಳಲ್ಲಿ ಮೂರು ಹೊಸ ಕಾನೂನುಗಳು ಆರಕ್ಷಣೆ ಮತ್ತು ನ್ಯಾಯದ ಯುಗಕ್ಕೆ ನಾಂದಿ ಹಾಡಲಿವೆ. ಮುಂದಿನ ವರ್ಷದಲ್ಲಿ, ಓಈ SU ನ 9 ಕ್ಯಾಂಪಸ್ಗಳು ದೇಶದಾದ್ಯಂತ ತೆರೆಯಲ್ಪಟ್ಟು, ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ವಿಧಿ ವಿಜ್ಞಾನಕ್ಕೆ ಸಂಪನ್ಮೂಲಗಳನ್ನು ಸಿದ್ಧಪಡಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಲಿವೆ.

ನ್ಯಾಯದೆಡೆಗೆ ಬದ್ಧತೆ ಹೊಂದಿರುವ ಭಾರತೀಯ ರಾಜಕೀಯದ ವಾಸ್ತುಶಿಲ್ಪಿ ಶಾ, ಮುಂದಿನ ಐದು ವರ್ಷಗಳಲ್ಲಿ ವಾರ್ಷಿಕವಾಗಿ 9,000 ಕ್ಕೂ ಹೆಚ್ಚು ವಿಧಿವಿಜ್ಞಾನ ಅಧಿಕಾರಿಗಳನ್ನು ಸಿದ್ಧ ಮಾಡುವ ವ್ಯವಸ್ಥೆಯನ್ನು ಸೃಷ್ಟಿಸಿದ್ದಾರೆ. ಈ ಬೆಳವಣಿಗೆಯಿಂದ ಭಾರತದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯು ಮುಂದಿನ 5 ವರ್ಷಗಳಲ್ಲಿ ವಿಶ್ವದಲ್ಲೇ ಅತ್ಯಂತ ಆಧುನಿಕ ವ್ಯವಸ್ಥೆಯಾಗಲಿದೆ.

ಹೊಸ ಕಾನೂನುಗಳು ತನಿಖೆಗಳಲ್ಲಿ, ಕಾನೂನು ಕ್ರಮಗಳಲ್ಲಿ ಮತ್ತು ನ್ಯಾಯಾಂಗ ಪ್ರಕ್ರಿಯೆಗಳಲ್ಲಿ ವಿಧಿ ವಿಜ್ಞಾನದ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತಾ, ಯುವಕರಿಗೆ ಗಮನಾರ್ಹವಾದ ಉದ್ಯೋಗಾವಕಾಶಗಳ ಬಾಗಿಲನ್ನು ತೆರೆಯಲಿವೆ.

ಸ್ವಾತಂತ್ರ್ಯಾನಂತರ ನಾಲ್ಕೈದು ದಶಕಗಳಿಗೊಮ್ಮೆ ಒಂದು ಸರ್ಕಾರ ಪರಿವರ್ತನಾಶೀಲವಾಗಿ ಕೆಲಸ ಮಾಡುವುದನ್ನು ಜನ ನೋಡಿದ್ದರೆ, ಮೋದಿ ಸರ್ಕಾರವು ಕೇವಲ 10 ವರ್ಷಗಳಲ್ಲಿ 50 ದಶಕಗಳಿಗೂ ಹೆಚ್ಚಿನ ಸುಧಾರಣಾ ಕಾರ್ಯಗಳನ್ನು ಸಾಧಿಸಿದ್ದಕ್ಕೆ ಸಾರ್ವಜನಿಕರು ಸಾಕ್ಷಿಯಾಗಿದ್ದಾರೆ. ನ್ಯಾಯದೆಡೆಗೆ ಬದ್ಧತೆ ಹೊಂದಿರುವ ಶಾ, ವಿಧಿ ವಿಜ್ಞಾನವನ್ನು ತನಿಖೆಗಳಲ್ಲಿ ಮಾತ್ರ ಬಳಸದೇ, ಅದು ನ್ಯಾಯ ವಿತರಣಾ ಪ್ರಕ್ರಿಯೆಯ ಅವಿಭಾಜ್ಯ ಅಂಗವಾಗಿರಬೇಕು ಎಂದು ಒತ್ತಿ ಹೇಳಿದರು. ಕ್ರಿಮಿನಲ್ ನ್ಯಾಯ ವ್ಯವಸ್ಥೆಯು ಅಪರಾಧಿಗಳಿಗಿಂತ ಎರಡು ತಲೆಮಾರುಗಳಷ್ಟು ಮುಂದಿರಬೇಕಾದ ಅಗತ್ಯವನ್ನು ಅವರು ಒಪ್ಪಿಕೊಳ್ಳುತ್ತಾರೆ. ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯದಲ್ಲಿನ 5ನೇ ಅಂತಾರಾಷ್ಟ್ರೀಯ ಮತ್ತು 44ನೇ ಅಖಿಲ ಭಾರತ ಅಪರಾಧ ವಿಜ್ಞಾನ ಸಮ್ಮೇಳನದ ಉದ್ಘಾಟನೆಯು, ಭಾರತದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯು ಹೊಸ ಯುಗವನ್ನು ಪ್ರವೇಶಿಸುತ್ತಿರುವ ಸಮಯದಲ್ಲಿಯೇ ಘಟಿಸಿದ್ದು ಕಾಕತಾಳೀಯವೇ ಸರಿ.