ಶಾಸಕ ಆರ್ ಕೃಷ್ಣಮೂರ್ತಿ ಅವರಿಗೆ ಸಚಿವ ಸ್ಥಾನಕ್ಕೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ
ತಾಂಡವಪುರ ಜೂನ್ 13 ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಸೇರುವ ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ ಆರ್ ಕೃಷ್ಣ ಮೂರ್ತಿ ಅಭಿಮಾನಿ ಬಳಗದ ವತಿಯಿಂದ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಸಂತೇಮರಹಳ್ಳಿ ವೃತ್ತದಲ್ಲಿ ಜಮಾಯಸಿ ಘೋಷಣೆ ಕೂಗುತ್ತ ಈ ಬಾರಿ ಸಚಿವ ಸಂಪುಟದಲ್ಲಿ ಎ ಆರ್ ಕೃಷ್ಣ ಮೂರ್ತಿಯವರಿಗೆ ಸಚಿವ ಸ್ಥಾನ ನೀಡಬೇಕೆಂದು ಕಾಂಗ್ರೆಸ್ ಪಕ್ಷದ ವರಿಷ್ಠರನ್ನು ಅಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನಾ ಅಧ್ಯಕ್ಷ ಎಚ್ ವಿ ಚಂದ್ರು ಮಾತನಾಡಿ ವಿವಿಧ ಸಮುದಾಯದ ಶಾಸಕರಿಗೆ ಸಚಿವ ಸ್ಥಾನ ಲಭಿಸಿದೆ ಜಿಲ್ಲೆಯಲ್ಲಿ ಲಭಿಸಿದೆ ಆದರೆ ಜಿಲ್ಲೆಯ ದಲಿತ ಶಾಸಕರಿಗೆ ಒಮ್ಮೆಯೂ ಸಚಿವ ಸ್ಥಾನ ಲಭಿಸಿಲ್ಲಿ ಹಾಗಾಗಿ ಬಾರಿ ಶಾಸಕ ಎ ಆರ್ ಕೃಷ್ಣ ಮೂರ್ತಿಯವರಿಗೆ ಮಾನ್ಯ ಮುಖ್ಯ ಮಂತ್ರಿ ಡಿ ಕೆ ಶಿವಕುಮಾರ್ ಹಾಗೂ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಪರಿಗಣಿಸಿ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯ ಮಾಡಿದ್ದಾರೆ.
ನಂತರ ಕೊಳ್ಳೇಗಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್ ಮಾತನಾಡಿ ಈ ಕ್ಷೇತ್ರ ಕಂಡ ಅಪ್ರತಿಮ ರಾಜಕಾರಣಿ ಗುರುತಿಸಿಕೊಂಡು ಕ್ಷೇತ್ರಕ್ಕೆ 500 ಕೋಟಿಗೂ ಅಧಿಕ ಅನುದಾನ ತಂದು ಕ್ಷತ್ರದ ಅಭಿವೃದ್ಧಿಯಾಗಲು ಸಾಕ್ಷಿಯಾಗಿದ್ದರೆ .ಹಾಗಾಗಿ ಈ ಬಾರಿ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯ ಮಾಡಿದ್ದಾರೆ.
ನಂತರ ಕಾಂಗ್ರೆಸ್ ಮುಖಂಡ ಮಹಾದೇವ ಪ್ರಸಾದ್ ಮಾತನಾಡಿ ಚಾಮರಾಜನಗರ ಜಿಲ್ಲೆಗೆ ಬೇರೆ ಯಾವುದೋ ಜಿಲ್ಲೆಯ ಸಚಿವರನ್ನು ನೇಮಕ ಮಾಡಿದರೆ ನಮ್ಮ ಜಿಲ್ಲೆಯ ನಾಡಿ ಮಿಡಿತ ತಿಳಿಯುವುದೇ ಹಾಗಾಗಿ ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ ಆರ್ ಕೃಷ್ಣಮೂರ್ತಿ ರವರನ್ನು ಚಾಮರಾಜನಗರ ಜಿಲ್ಲೆ ಉಸ್ತುವಾರಿ ಸಚಿವರನ್ನಾಗಿ ಪರಿಗಣಿಸಬೇಕೆಂದು ಮುಖ್ಯ ಮಂತ್ರಿ ಡಿ ಕೆ ಶಿವಕುಮಾರ ರವರಿಗೆ ಒತ್ತಾಯ ಮಾಡಲಾಗಿದೆ.
ಸಂದರ್ಭದಲ್ಲಿ ಯಳಂದೂರು ತಾಲ್ಲೂಕು ಜಿಲ್ಲಾ ಗ್ಯಾರಂಟಿ ಯೋಜನೆ ಅಧ್ಯಕ್ಷ ಪ್ರಭು ಪ್ರಸಾದ್, ಚಾಮುಲ್ ನಾಮ ನಿರ್ದೇಶಕ ಕಮರವಾಡಿ ರೇವಣ್ಣ,ಕಂದಹಳ್ಳಿ ನಂಜುಂಡಸ್ವಾಮಿ,
ಸಿದ್ದಲಿಂಗ ಸ್ವಾಮಿ,ಡಿ ಪಿ ಪ್ರಕಾಶ್, ಕಣ್ಣೇಗಾಲ ಮಾದೇಶ್, ಲಕ್ಷ್ಮಣ, ರವಿಶಂಕರ್ ಮೂರ್ತಿ, ದುಗ್ಗಹಟ್ಟಿ ಮಾದೇಶ್, ರಾಘವೇಂದ್ರ, ರಾಮಚಂದ್ರ, ಪುಟ್ಟಸ್ವಾಮಿ, ಅಶೋಕ್, ಲಕ್ಷ್ಮಿ, ಪ್ರಭಾವತಿ, ಚೇತನ್, ಬಿ ಕೆ ರಾಜಣ್ಣ, ಸಿದ್ದರಾಜು, ಶಿವಕುಮಾರ್ ಡಿ ಕೆ, ಕೆಂಪರಾಜು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.