ವಿಜಯ ದರ್ಪಣ ನ್ಯೂಸ್…
ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಗ್ರಾಮ ಪಂಚಾಯತಿ ಸದ್ಯಸರ ಒಕ್ಕೂಟದ ಪದಾಧಿಕಾರಿಗಳ ಸಭೆ

ತಾಂಡವಪುರ ಜುಲೈ 20ಮೈಸೂರು ಮತ್ತು ಚಾಮರಾಜನಗರ ಜಿಲ್ಲೆ ಮೈಸೂರಿನ ಹೋಟೆಲ್ ಗೋವರ್ಧನ್ ನ ಸತ್ಯಭಾಮ ಸಭಾಂಗಣದಲ್ಲಿ ಪೀಪಲ್ ಟ್ರೀ ಮತ್ತು ಅಬ್ದುಲ್ ನಜೀರ್ ಸಬ್ ಫೌಂಡೆಶನ್ ಸಹಕಾರದೊಂದಿಗೆ ಸಭೆ ನಡೆಯಿತು
ಸಭೆಯಲ್ಲಿ ಮುಂಬರುವ ಗ್ರಾಮ ಪಂಚಾಯತಿ ಚುನಾವಣೆ ಗೆ ಪೂರ್ವಭಾವಿಯಾಗಿ ಎರಡು ಜಿಲ್ಲೆಗಳ ಎಲ್ಲಾ ತಾಲೂಕುಗಳಲ್ಲಿನಮ್ಮ ಮಕ್ಕಳ ಭವಿಷ್ಯಕ್ಕಾಗಿ ನಮ್ಮ ಹಳ್ಳಿಯನ್ನು ಉಳಿಸೋಣ ಅಭಿಯಾನ ದ ಮೂಲಕ ಪಂಚಾಯತ್ ಸೇನಾನಿಗಳ ಕಾರ್ಯಪಡೆಯನ್ನು ವ್ಯವಸ್ಥಿತ ವಾಗಿ ಸಂಘಟಿಸಲು ತೀರ್ಮಾನಿಸಲಾಯಿತು
ಜೊತೆಗೆ ಒಕ್ಕೂಟದ ಪದಾಧಿಕಾರಿಗಳು ಸೇರಿದಂತೆ ಕನಿಷ್ಠ 10 ಜನ ರನ್ನು ತಾಲೂಕುವಾರು ವಿಷಯ ತಜ್ಞ ರನ್ನಾಗಿ ರೂಪಿಸುವ ಎರಡು ದಿನಗಳ ತರಬೇತಿ ಕಾರ್ಯಾಗಾರವನ್ನುಪೀಪಲ್ ಟ್ರೀ ಹಾಗೂ ನಮ್ಮ ಫೌಂಡೇಶನ್ ವತಿಯಿಂದ ಆಯೋಜಿಸಲು ನಿರ್ಣಯ ಮಾಡಲಾಯಿತು
ಈ ಸಂದರ್ಭದಲ್ಲಿ ರಾಜ್ಯದ್ಯಕ್ಷ ಹುಣಸೂರು ಮತ್ತು ಪೀಪಲ್ ಟ್ರೀ ಸಂಸ್ಥೆಯ ಜವರೇಗೌಡರು ರಾಜ್ಯ ಗ್ರಾಮ ಪಂಚಾಯತಿ ಒಕ್ಕೂಟಗಳ ಜಿಲ್ಲಾಧ್ಯಕ್ಷ ಹಾಗೂ ಅಬ್ದುಲ್ ನಜೀರ್ ಸಾಬ್ ಫೌಂಡೇಶನ್ ಸಂಸ್ಥೆಯ ಅಧ್ಯಕ್ಷ ಎದುನಾಡು ನಾಗರಾಜು ಹಾಗೂ ಒಕ್ಕೂಟದ ರಾಜ್ಯ ಜಿಲ್ಲಾ ,ತಾಲೋಕು,ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ತಮ್ಮ ತಮ್ಮ ಸಲಹೆ ಸೂಚನೆಗಳನ್ನು ಸವಿಯಲ್ಲಿ ತಿಳಿಸಿದರು











