ವಿಜಯ ದರ್ಪಣ ನ್ಯೂಸ್…..
ತಾಂಡವಪುರ ಗ್ರಾಮದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿ ಪೂಜಾ ಮಹೋತ್ಸವ

ತಾಂಡವಪುರ ಆಗಸ್ಟ್ 4 ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ತಾಂಡವಪುರ ಗ್ರಾಮದಲ್ಲಿ ಆದಿಶಕ್ತಿ ನಾಡದೇವತೆ ಚಾಮುಂಡೇಶ್ವರಿಯ ಹುಟ್ಟು ಹಬ್ಬದ ಪ್ರಯುಕ್ತ ಚಾಮುಂಡೇಶ್ವರಿ ಪೂಜೆ ಮಹೋತ್ಸವ ಕಾರ್ಯಕ್ರಮವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು
ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಬಿಎಂ ರಾಮು ಅವರ ನೇತೃತ್ವದಲ್ಲಿ ಗ್ರಾಮದ ಅವರ ನಿವಾಸದ ಬಸ್ ನಿಲ್ದಾಣದ ಬಳಿ ತಾಯಿ ಚಾಮುಂಡೇಶ್ವರಿಯ ಭಾವಚಿತ್ರವನ್ನು ಇರಿಸಿ ವಿಶೇಷ ಪೂಜಿಸಲ್ಲಿ ಸಿ ಪ್ರಸಾದ ವಿನಿಯೋಗ ಮಾಡಲಾಯಿತು
ಇದೇ ವೇಳೆ ಮಾತನಾಡಿದ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಬಿಎಂ ರಾಮು ರವರು ನಾವು ನಮ್ಮ ತಂದೆ ಕಾಲದಿಂದಲೂ ಪ್ರತಿವರ್ಷವು ಶ್ರೀ ಚಾಮುಂಡೇಶ್ವರಿ ದೇವಿಯ ವರದಂತಿ ಪೂಜಾ ಮಹೋತ್ಸವವನ್ನು ನಿರ್ವಹಿಸಿಕೊಂಡು ಬರುತ್ತಿದ್ದೇವೆ ಅದೇ ರೀತಿ ಯುವಸವೂ ಕೂಡ ತಾಂಡವಪುರ ಗ್ರಾಮದಲ್ಲಿ ತಾಯಿ ಚಾಮುಂಡೇಶ್ವರಿಯ ವರ್ಧಂತಿ ಪೂಜಾ ಮಹೋತ್ಸವದ ಪ್ರಯುಕ್ತ ದೇವಿಗೆ ಪೂಜೆ ಸಲ್ಲಿಸಿ ನಾಡಿನ ಎಲ್ಲ ಭಕ್ತರಿಗೂ ಒಳ್ಳೆಯದು ಆಗಲಿ ಎಂದು ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದರು.
ಒಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಎಂ ಮಹದೇವ್ ಮುಖಂಡರಾದ ಎಂ ಹುಚ್ಚೇಗೌಡ ಕಾಂಗ್ರೆಸ್ ಯುವ ಮುಖಂಡ ಬಿ ಆರ್ ರಾಕೇಶ್ ಅಣ್ಣಯ್ಯ ಆರ್ಕೆಶ್ ಬಿಬಿ ಕುಮಾರ್ ನಟರಾಜು ಪುಟ್ಟರಾಜು ರವಿ ಕಾರ್ಮಿಕ ಮುಖಂಡ ಶಂಕರ್ ಜವನೇಗೌಡ ಪಚ್ಚೆಯ ಸೇರಿದಂತೆ ಇನ್ನೂ ಅನೇಕ ಮುಖಂಡರುಗಳು ಈ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು











