ವಿಜಯ ದರ್ಪಣ ನ್ಯೂಸ್…..
ನಂಜನಗೂಡು ವಿಧಾನಸಭಾ ಕ್ಷೇತ್ರದ ಹುರ ಗ್ರಾಮದಲ್ಲಿ ಪೋಲಿಸ್ ಔಟ್ ಪೋಸ್ಟ್ ಮಂಜೂರು ಮಾಡುವಂತೆ ಸರ್ಕಾರಕ್ಕೆ ಮನವಿ
ತಾಂಡವಪುರ ಆಗಸ್ಟ್ 18 ಮೈಸೂರು ಜಿಲ್ಲೆ, ನಂಜನಗೂಡು ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಹುರ ಗ್ರಾಮದಲ್ಲಿ ಈ ಹಿಂದೆ 2017ರಲ್ಲಿ ಸರ್ಕಾರದಿಂದ ಪೊಲೀಸ್ ಔಟ್ಪೋಸ್ಟ್ ಮಂಜೂರು ಮಾಡಲಾಗಿತ್ತು. ಆದರೆ ಪ್ರಸ್ತುತ ಔಟ್ಪೋಸ್ಟ್ ಕಾರ್ಯನಿರ್ವಹಿಸುತ್ತಿಲ್ಲ. ಆದ್ದರಿಂದ ಅದನ್ನು ಪುನಃ ಮಂಜೂರು ಮಾಡಿಕೊಡುವಂತೆ ಶಾಸಕ ದರ್ಶನ ಧ್ರುವನಾರಾಯಣ ರವರು ವಿಧಾನಸಭೆಯಲ್ಲಿ ಸರ್ಕಾರದ ಗಮನ ಸೆಳೆದು ಮನವಿ ಮನವಿ ಮಾಡಿದರು









