--Ads--

ಸದ್ಗುರು ಸನ್ನಿಧಿ ಬೆಂಗಳೂರಿನಲ್ಲಿ ವಿಜೃಂಭಣೆಯ ನಾಗರ ಪಂಚಮಿಯ ಆಚರಣೆ

On: August 18, 2026 5:22 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಸದ್ಗುರು ಸನ್ನಿಧಿ ಬೆಂಗಳೂರಿನಲ್ಲಿ ವಿಜೃಂಭಣೆಯ ನಾಗರ ಪಂಚಮಿಯ ಆಚರಣೆ

ಬೆಂಗಳೂರು: ಆಗಸ್ಟ್  2026 : ಸದ್ಗುರು ಸನ್ನಿಧಿ ಬೆಂಗಳೂರಿನಲ್ಲಿ ಇಂದು ನಾಗರ ಪಂಚಮಿಯನ್ನು, ವಿವಿಧ ಅರ್ಪಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಈ ಪವಿತ್ರ ಸಂದರ್ಭದಲ್ಲಿ ಪ್ರಾಣ ಪ್ರತಿಷ್ಠಾಪಿತ ನಾಗನ  ದರ್ಶನ ಪಡೆಯಲು ಅಪಾರ ಸಂಖ್ಯೆಯ ಭಕ್ತರು ಆಗಮಿಸಿದ್ದರು.

ಈ ಆಚರಣೆಯ ಭಾಗವಾಗಿ ನಾಗನಿಗೆ ‘ನಾಗ ಅಭಿಷೇಕ’, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಭಕ್ತರಿಗೆ ನಾಗರ ಪಂಚಮಿಗೆ ಸಂಬಂಧಿಸಿದ ವಿವಿಧ ಅರ್ಪಣೆ ಮತ್ತು ಸೇವೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿತ್ತು.

ಆಗಸ್ಟ್ 15 ರಿಂದ 17 ರವರೆಗೆ ಸದ್ಗುರು ಸನ್ನಿಧಿಯಲ್ಲಿ ನಡೆದ ಮೂರು ದಿನಗಳ ‘ಜಾತ್ರೆ’ಯ ಭಾಗವಾಗಿ ಈ ಸಂಭ್ರಮದ ಆಚರಣೆಗಳು ಜರುಗಿದವು.
ಭಕ್ತರು ‘ಅನನ್ಯ ಬೆಣ್ಣೆ ಸೇವೆ’ ಹಾಗೂ ‘ಅನನ್ಯ ಸರ್ಪ ಸೇವೆ’ಯಂತಹ ಹಲವಾರು ಪವಿತ್ರ ಅರ್ಪಣೆಗಳಿಗೆ ಸಾಕ್ಷಿಯಾದರು. ಅಲ್ಲದೆ, ನಾಗದೋಷ ನಿವಾರಣೆಗೆ ನೆರವಾಗುವ ‘ನಾಗದೋಷ ನಿವಾರಣ ಕ್ರಿಯೆ’ಯಲ್ಲೂ ಅನೇಕ ಭಕ್ತರು ಭಾಗವಹಿಸಿದ್ದರು. ಈ ಸೇವೆಯಲ್ಲಿ  ಭಾಗವಹಿಸಿದವರಿಗೆ ಪವಿತ್ರ ‘ನಾಗ ಸೂತ್ರ’ವನ್ನು ನೀಡಲಾಯಿತು. ಇದರೊಂದಿಗೆ ಭಕ್ತಿ ಮತ್ತು ಗ್ರಹಣಶೀಲತೆಯನ್ನು ಹೆಚ್ಚಿಸಲು ಯೋಗೇಶ್ವರ ಲಿಂಗಕ್ಕೆ ‘ಕ್ಷೀರ ಸೇವೆ’ಯನ್ನೂ ಸಮರ್ಪಿಸಲಾಯಿತು.

ನಾಗನ ಮಹತ್ವದ ಕುರಿತು ಮಾತನಾಡಿದ ಸದ್ಗುರುಗಳು, “ಎಲ್ಲಾ ಮಿತಿಗಳನ್ನು ಮೀರಿ ಬೆಳೆಯಬೇಕೆಂಬ ಸಹಜ ಹಂಬಲ ಪ್ರತಿಯೊಬ್ಬ ಮನುಷ್ಯನಲ್ಲೂ ಇರುತ್ತದೆ. ಬದುಕನ್ನು ವಿಶಾಲವಾದ ಆಯಾಮದಲ್ಲಿ ಗ್ರಹಿಸಲು ಒಂದು ಪ್ರವೇಶ ದ್ವಾರದಂತೆ ಸೃಷ್ಟಿಸಲಾದ ಜೀವಂತ ದೈವವೇ ನಾಗ,” ಎಂದು ತಿಳಿಸಿದ್ದಾರೆ.

ಸಂಜೆ 6:15 ಕ್ಕೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ, ‘ಸೌಂಡ್ಸ್ ಆಫ್ ಈಶ’ದಿಂದ ಸಂಗೀತ ಸಮರ್ಪಣೆ ಹಾಗೂ ನಾಗರ ಪಂಚಮಿಯ ವಿಶೇಷ ಪೂಜಾವಿಧಿಗಳು ನಡೆದವು. ಕೊನೆಯಲ್ಲಿ, ಯೋಗ ವಿಜ್ಞಾನವನ್ನು ಬಿಂಬಿಸುವ ಅದ್ಭುತ  ಪ್ರದರ್ಶನವಾದ ಆದಿಯೋಗಿ ದಿವ್ಯ ದರ್ಶನದೊಂದಿಗೆ ಸಂಭ್ರಮಾಚರಣೆಯು ಮುಕ್ತಾಯಗೊಂಡಿತು.

ಯೋಗ ಪರಂಪರೆಯಲ್ಲಿ ಶಕ್ತಿಯುತ ಜೀವಿಗಳು ಎಂದು ಪರಿಗಣಿಸಲಾಗುವ ನಾಗನನ್ನು ಗೌರವಿಸಲು ಸಾಂಪ್ರದಾಯಿಕವಾಗಿ ನಾಗರ ಪಂಚಮಿಯನ್ನು ಆಚರಿಸಲಾಗುತ್ತದೆ. ಸದ್ಗುರು ಸನ್ನಿಧಿಯಲ್ಲಿ ನಡೆದ ಈ ಕಾರ್ಯಕ್ರಮವು ಭಕ್ತರಿಗೆ ಪೂಜೆ, ಸೇವೆ ಹಾಗೂ ಸಾಂಸ್ಕೃತಿಕ ಆಚರಣೆಗಳ ಮೂಲಕ ಈ ಆಧ್ಯಾತ್ಮಿಕ ಮಹತ್ವದೊಂದಿಗೆ ಒಂದಾಗುವ ಉತ್ತಮ ಅವಕಾಶವನ್ನು ಒದಗಿಸಿತು.

ಸದ್ಗುರು ಸನ್ನಿಧಿ ಬೆಂಗಳೂರಿನಲ್ಲಿ ನಡೆದ ಈ ಆಚರಣೆಗಳು ಭಕ್ತರಿಗೆ ಖುದ್ದಾಗಿ ಅರ್ಪಣೆಗಳಲ್ಲಿ ಪಾಲ್ಗೊಳ್ಳುವ ಜೊತೆಗೆ ಜಾತ್ರೆಯ ವೈವಿಧ್ಯಮಯ ವಾತಾವರಣವನ್ನು ಅನುಭವಿಸುವ ಅವಕಾಶವನ್ನು ನೀಡಿತು. ಕಾರ್ಯಕ್ರಮಕ್ಕೆ ಖುದ್ದಾಗಿ ಬರಲಾಗದ ಭಕ್ತರಿಗಾಗಿ ಈ ಇಡೀ ಕಾರ್ಯಕ್ರಮದ ನೇರ ಪ್ರಸಾರ ಮಾಡಲಾಗಿದ್ದು, ಜನರು ಆನ್‌ಲೈನ್ ಮೂಲಕ ಈ ಸಂಭ್ರಮದ ಭಾಗವಾಗಲು ಸಾಧ್ಯವಾಯಿತು.

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ಅಪೋಲೋ ಹಾಸ್ಪಿಟಲ್ಸ್‌ ನಿಂದ ‘ಆಲ್ವೇಸ್ ಓಪನ್. ಆಲ್ವೇಸ್ ಹಿಯರ್’ ಭಾರತದಿಂದ ಜಾಗತಿಕ ಆರೋಗ್ಯಸೇವೆಯಲ್ಲಿ ಪ್ರಥಮ ಉಪಕ್ರಮ ಅಪೋಲೋ ಹಾಸ್ಪಿಟಲ್ಸ್‌ ಗಳಾದ್ಯಂತ ಭಾನುವಾರದಂದೂ ವೈದ್ಯಕೀಯ ಸಮಾಲೋಚನೆಗಳು, ರೋಗನಿರ್ಣಯ ಪರೀಕ್ಷೆಗಳು, ರೋಗತಡೆಯ ಆರೋಗ್ಯ ತಪಾಸಣೆಗಳು ಮತ್ತು ನಿಗದಿತ ಚಿಕಿತ್ಸಾ ಸೇವೆಗಳನ್ನು ವಿಸ್ತರಿಸುವ ತನ್ನ ಮೊದಲ ಉಪಕ್ರಮ ಪ್ರಾರಂಭಿಸಿದೆ

ನಂಜನಗೂಡು ವಿಧಾನಸಭಾ ಕ್ಷೇತ್ರದ  ಹುರ ಗ್ರಾಮದಲ್ಲಿ ಪೋಲಿಸ್ ಔಟ್ ಪೋಸ್ಟ್ ಮಂಜೂರು ಮಾಡುವಂತೆ ಸರ್ಕಾರಕ್ಕೆ ಮನವಿ

ವಿಪ್ರೋ ಕನ್ಸ್ಯೂಮರ್ ಕೇರ್ ಡರ್ಮಟಚ್ ಅನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಡಿಜಿಟಲ್ ಬ್ರಾಂಡ್ ಪ್ರವೇಶವನ್ನು ಆರಂಭಿಸಿದೆ

ಶ್ರೀ ಅಮ್ಮನಾಗಮ್ಮ ದೇವಾಲಯದಲ್ಲಿ ನಾಗರಪಂಚಮಿ ಹಬ್ಬ, ಭಕ್ತಾಧಿಗಳಿಂದ ಹಾಲಿನ ಅಭಿಷೇಕ

ಸ್ಯಾಮ್‌ಸಂಗ್ ಭಾರತದ ಟಾಪ್ 40 ಯುವ ಆವಿಷ್ಕಾರಕರನ್ನು ಘೋಷಿಸಿದೆ

ಪ್ರತಿಭೆಗೆ ಮಾನದಂಡ ಜಾತಿಯಾಗಬಾರದು : ‌ಪ್ರಾಧ್ಯಾಪಕ ಡಾ ಸಿಸಿರಾ