ವಿಜಯ ದರ್ಪಣ ನ್ಯೂಸ್…..
ಕಾಂಗ್ರೆಸ್ ಪಕ್ಷ ಬಿಟ್ಟು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದ ವಸಂತ್

ಮಾಗಡಿ: ಪಟ್ಟಣದ ಯುವ ವಕೀಲರು ಹಾಗೂ ಕಾಂಗ್ರೆಸ್ ಪಕ್ಷದ ಎನ್.ಎಸ್.ಯು.ಐ ಘಟಕದ ಮಾಜಿ ಅಧ್ಯಕ್ಷ ವಸಂತ್ ಹಾಗೂ ಸಂಗಡಿಗರು ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿ ಮಾಜಿ ಶಾಸಕ ಎ.ಮಂಜುನಾಥ್ ಅವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಪಟ್ಟಣದ ಜೆಡಿಎಸ್ ಭವನದಲ್ಲಿ ವಸಂತ್ ಹಾಗೂ ಸಂಗಡಿಗರನ್ನು ಪಕ್ಷಕ್ಕೆ ಬರಮಾಡಿಕೊಂಡ ಮಾಜಿ ಶಾಸಕ ಎ.ಮಂಜುನಾಥ್ ಅವರು ಮಾತನಾಡಿ ನೂತನವಾಗಿ ನಮ್ಮ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವ ಇವರುಗಳನ್ನು ಗೌರವಾಯುತವಾಗಿ ನಡೆಸಿಕೊಳ್ಳುತ್ತೇನೆ ಎಂದು ಹೇಳಿದರು.
ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡ ಯುವ ವಕೀಲ ವಸಂತ್ ಮಾತನಾಡಿ ಯುವಕರನ್ನು ಮುಖ್ಯವೇದಿಕೆಗೆ ನಾಯಕರು ಇದ್ದರೆ ಅದು ಗುರುತಿಸಿ ತರುವಂತವರು ತಾಲ್ಲೂಕಿನಲ್ಲಿ ಯಾರಾದರೂ ಎ.ಮಂಜುನಾಥ್ ಅವರಾಗಿದ್ದು, ಅವರ ಜಾತ್ಯಾತೀತ ನಾಯಕತ್ವದ ಗುಣಗಳನ್ನು ಮೆಚ್ಚಿ ನನ್ನ ಸ್ನೇಹಿತರೊಂದಿಗೆ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವುದಾಗಿ ತಿಳಿಸಿದರು.





