ವಿಜಯ ದರ್ಪಣ ನ್ಯೂಸ್….
ಅಕ್ಷಯ ವಿಪ್ರ ಮಹಾ ಸಭಾದ ವತಿಯಿಂದ ಯಶಸ್ವಿಅರೋಗ್ಯ ಶಿಬಿರ

ಬೆಂಗಳೂರು : ಅಕ್ಷಯ ವಿಪ್ರ ಮಹಾ ಸಭಾದ ವತಿಯಿಂದ ಉಚಿತವಾಗಿ ಅರೋಗ್ಯ ಶಿಭಿರವು ಸಂಘದ ಕಚೇರಿಯಲ್ಲಿ ಯಶಸ್ವಿಯಾಗಿ ನಡೆಯಿತು.
ಸಾಗರ್ ಹಾಸ್ಪಿಟಲ್ ವತಿಯಿಂದ ನ್ಯೂರೋ ಮತ್ತು ಜನರಲ್ ಮೆಡಿಕಲ್ ತಪಾಸಣೆ, ಅಗರವಾಲ್ ಹಾಸ್ಪಿಟಲ್ ವತಿಯಿಂದ ನೇತ್ರ ಪರೀಕ್ಷೆ ಹಾಗು ರಾಸ್ಟ್ರೋತ್ತಾಣ ರಕ್ತ ನಿಧಿ ವತಿಯಿಂದ ರಕ್ತದಾನ ಶಿಬಿರವನ್ನು ನೆಡಸಲಾಯಿತು.
ಸಕ್ಷಾಮ ಬೆಂಗಳೂರು ವತಿಯಿಂದ ನೇತ್ರಾದಾನದ ನೋಂದಾವಣಿಯನ್ನು ಮಾಡಲಾಯಿತು, ಯೂನಿಟ್ ಆಫ್ ರಾಯರ ಕಿರಣ ಚಾರಿಟೇಬಲ್ ಮತ್ತು ಕಲ್ಚರಲ್ ಟ್ರಸ್ಟ್ ಸಹಯೋಗದೊಂದಿಗೆ ನಡೆಯಿತು,ಸಂಘದ ಸದಸ್ಯರು ಹಾಗೂ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡರು.

ಈ ಸಂದರ್ಭದಲ್ಲಿ ಅಕ್ಷಯ ವಿಪ್ರ ಮಹಾಸಭಾದ ಅಧ್ಯಕ್ಷ ಎನ್ ಕೆ ರಾಮಚಂದ್ರ ರಾವ್, ಗೌರವಾದ್ಯಕ್ಷ ಡಾ, ಎನ್ ಕೀರ್ತಿರಾಜ್, ಕಾರ್ಯದರ್ಶಿ ರಾಘವೇಂದ್ರ ರಾವ್ ಮತ್ತು ಸುಧೀಂದ್ರ ರಾವ್, ಉಪಾಧ್ಯಕ್ಷರಾದ ಡಾ, ಕಿರಣ್ ಎಸ್ ಮೂರ್ತಿ, ಶ್ರೀ ಪ್ರಕಾಶ್, ಸಕ್ಷಾಮ ಅಧ್ಯಕ್ಷ ವೆಂಕಟಕೃಷ್ಣ ಸೇರಿದಂತೆ ಸಂಘದ ಪಧಾಧಿಕಾರಿಗಳು ಹಾಗು ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.









