--Ads--

ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನಕ್ಕೆ ಸಹಕಾರ: ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ

On: December 16, 2024 9:48 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಗೆ ಪಟ್ಟಾಧಿಕಾರ

ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನಕ್ಕೆ ಸಹಕಾರ: ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ

ವಿಶ್ವ ಒಕ್ಕಲಿಗರ ಮಠ ಹಾಗೂ ಆದಿಚುಂಚನಗಿರಿ ಮಠ ಎರಡು ಒಂದೇ. ನಾಥ ಪರಂಪರೆ ಮೂಲಕ ನಾವೆಲ್ಲರೂ ಸಮಾಜ ಸೇವೆಯಲ್ಲಿ ತೊಡಗಿದ್ದೇವೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದ್ದಾರೆ.

ಕೆಂಗೇರಿ ರಸ್ತೆಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದಲ್ಲಿ ಭಾನುವಾರ ಆಯೋಜಿಸಿದ್ದ ‘ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಗೆ ನೂತನ ಪಟ್ಟಾಧಿಕಾರ ಮಹೋತ್ಸವ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ಮಠಕ್ಕೆ ಆದಿಚುಂಚನಗಿರಿ ಮಠದ ಸಹಕಾರ ಹಿಂದೆಯೂ ಇತ್ತು, ಮುಂದೆಯೂ ಇರುತ್ತದೆ. ನೂತನ ಗುರುಗಳು ನಮ್ಮ ಮಠದಲ್ಲಿ ಬೆಳೆದಿದ್ದವರು. ಅವರಿಗೆ ಸದಾ ಪ್ರೋತ್ಸಾಹ ಇರಲಿದೆ. ಗುರು ಪರಂಪರೆ ಮತ್ತು ಸಂಪ್ರದಾಯ ಒಂದೇ ಇರುವುದರಿಂದ ಮೂರನೇ ವ್ಯಕ್ತಿ ಬರಲ್ಲ. 1974ರಿಂದ ಹಿರಿಯ ಶ್ರೀಗಳ ನೇತೃತ್ವದಲ್ಲಿ ವಿಶ್ವ ಒಕ್ಕಲಿಗರ ಮಠ ನಡೆಯುತ್ತಿದೆ. ಇದು ಹಳೆಯ ಮಠವಾಗಿದೆ. ನೂತನ ಉತ್ತರಾಧಿಕಾರಿಯಾದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, ಮಠವನ್ನು ಇನ್ನಷ್ಟು ಬೆಳೆಸಲು ಸಂಕಲ್ಪ ತೊಟ್ಟಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದರು.

ನೂತನ ಸ್ವಾಮೀಜಿಗೆ ರುದ್ರಾಕ್ಷಿ ಮುಕುಟಧಾರಣೆ ನೆರವೇರಿಸಲಾಯಿತು. ಆರೋ ಹಣ ಪುಸ್ತಕ ಲೋಕಾರ್ಪಣೆ ಮಾಡಲಾಯಿತು. ಇದಕ್ಕೂ ಮುನ್ನ ಗಂಗೆಪೂಜೆ, ಶಿವಪಾರ್ವತಿ, ಗಣಪತಿ ಪೂಜೆ ನೆರವೇರಿತು. ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಶ್ರೀ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ, ಸ್ಥಟಿಕಪುರಿ ಮಠದ ಶ್ರೀ ಶ್ರೀ ಶ್ರೀ ನಂಜಾವಧೂತ ಸ್ವಾಮೀಜಿ. ವಿಜಯನಗರ ಶಾಖಾ ಮಠದ ಶ್ರೀ ಸೌಮ್ಯನಾಥ ಸ್ವಾಮೀಜಿ ಸೇರಿ 50ಕ್ಕೂ ಅಧಿಕ ಸ್ವಾಮೀಜಿಗಳು ಉಪಸ್ಥಿತರಿದ್ದರು.

ಸಿದ್ಧಗಂಗಾ ಮಠ, ಬೇಲಿ ಮಠ ಸೇರಿ ರಾಜ್ಯದ 50ಕ್ಕೂ ಅಧಿಕ ಮಠದ ಶ್ರೀಗಳು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠಕ್ಕೆ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಅವರನ್ನು ನೂತನ ಉತ್ತಾಧಿಕಾರಿಯಾಗಿ ನೆರವೇರಿಸಿರುವುದು ಚಾರಿತ್ರಿಕವಾದದ್ದು. ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಮೌನತಪಸ್ವಿ. ಹಿರಿಯ ಗುರುಗಳ ಸೇವೆಯನ್ನು ಈ ಸಮಾಜ ಬಳಸಿಕೊಂಡಿದೆ ಎಂದು ಶ್ರೀ ನಿಡುಮಾಮಿಡಿ ಮಠದ ಪೀಠಾಧ್ಯಕ್ಷ ಶ್ರೀ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಹೇಳಿದರು. ಅಧಿಕಾರ ವರ್ಗದಲ್ಲಿ ಸನ್ಯಾಸತ್ವ ಸ್ವೀಕರಿಸುವುದು ವಿರಾಳ. ಇಂತಹ ಸಂದರ್ಭದಲ್ಲಿ ನಾಗರಾಜು ಸನ್ಯಾಸತ್ವ ಸ್ವೀಕರಿಸಿ ಗುರು ಸ್ಥಾನ ಪಡೆದಿರುವುದು ವಿಶೇಷವಾದದ್ದು. ಪ್ರಾಮಾಣಿಕ, ಬದ್ಧತೆಯಿಂದ ಕಿರಿಯ ಶ್ರೀಗಳು ಮಠವನ್ನು ಇನ್ನಷ್ಟು ಬೆಳೆಸುವಂತಾಗಬೇಕು ಎಂದು ಆಶಿಸಿದರು.

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ಭದ್ರಕಾಳಿ ಶಕ್ತಿ ಪೀಠದಲ್ಲಿ ಭೀಮನ ಅಮಾವಾಸ್ಯೆ 2ನೇ ದಿನದ ವಿಶೇಷ ಪೂಜೆ

ದಿನಾಂಕ: 17-07-2026 ಶುಕ್ರವಾರ *ದಕ್ಷಿಣಾಯಣ ಪುಣ್ಯಕಾಲ* : ಸೂರ್ಯನು ನಾಳೆ ಬೆಳಗ್ಗೆ 11.45ಕ್ಕೆ ಮಘಾ ನಕ್ಷತ್ರದಲ್ಲಿ ಕರ್ಕಾಟಕರಾಶಿ ಪ್ರವೇಶ

ಛಲ ಬಿಡದ ಲಕ್ಷ್ಮವ್ವ: 116ರ ಹರೆಯದಲ್ಲೂ ಅಲಿಪಿರಿ ಮಾರ್ಗದ 3,550 ಮೆಟ್ಟಿಲು ಹತ್ತಿ ತಿರುಮಲ ತಲುಪಿದ ಕರ್ನಾಟಕದ ಶತಾಯುಷಿ!

ಚೌಡಪ್ಪನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಗೊಳ್ಳುತ್ತಿರುವ ಶ್ರೀ ಗಂಗಾದೇವಿ ದೇವಾಲಯದ ಅಭಿವೃದ್ಧಿಗೆ  ಧನಸಹಾಯ  ಮಾಡಿದ  ಶ್ರೀ ನಿಸರ್ಗ ನಾರಾಯಣಸ್ವಾಮಿ 

ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ  ಬ್ರಹ್ಮ ರಥೋತ್ಸವಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ : ಜಿಲ್ಲಾಧಿಕಾರಿ ಎಬಿ ಬಸವರಾಜು 

ಶ್ರೀಸೋಮೇಶ್ವರಸ್ವಾಮಿ ಜೀರ್ಣೋದ್ದಾರ ಮತ್ತು ಪುನ‌ರ್ ಪ್ರತಿಷ್ಠಾಪನಾ ಮಹೋತ್ಸವಕ್ಕೆ ಸಕಲ ಸಿದ್ಧತೆ