ಗೃಹಲಕ್ಷ್ಮಿ ಹಣ ಮೃತರ ಖಾತೆಗೆ ಜಮೆ ಆಗುವುದನ್ನು ಸ್ಥಗಿತಗೊಳಿಸಿ:ಅಧ್ಯಕ್ಷ ಬಿ. ರಾಜಣ್ಣ

ವಿಜಯ ದರ್ಪಣ ನ್ಯೂಸ್…. ಗೃಹಲಕ್ಷ್ಮಿ ಹಣ ಮೃತರ ಖಾತೆಗೆ ಜಮೆ ಆಗುವುದನ್ನು ಸ್ಥಗಿತಗೊಳಿಸಿ :ಅಧ್ಯಕ್ಷ ಬಿ. ರಾಜಣ್ಣ ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ  ಮೇ 29 : ಗೃಹಲಕ್ಷ್ಮಿ ಹಣ ಮೃತರ ಬ್ಯಾಂಕ್ ಖಾತೆಗಳಿಗೆ ಜಮೆ ಆಗುತ್ತಿರುವುದನ್ನು ಪತ್ತೆ ಹಚ್ಚಿ ಅಂತಹ ಖಾತೆಗಳಿಗೆ ಹಣ ಜಮೆ ಆಗುವುದನ್ನು ಸ್ಥಗಿತಗೊಳಿಸಲು ಅಧಿಕಾರಿಗಳಿಗೆ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ರಾಜಣ್ಣ ಸೂಚಿಸಿದರು. ಜಿಲ್ಲಾಡಳಿತ ಭವನದ ಜಿಲ್ಲಾ‌ಪಂಚಾಯತ್ ಸಭಾಂಗಣಲ್ಲಿ ಹಮ್ಮಿಕೊಳ್ಳಲಾದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಂಬಂಧ … Read more

ಕರ್ನಾಟಕ ಸಂಘ ಕತಾರ್ (KSQ), ಹಮದ್ ಮೆಡಿಕಲ್ ಕಾರ್ಪೊರೇಷನ್ ಸಹಯೋಗದಲ್ಲಿ ರಕ್ತದಾನ ಶಿಬಿರ

ವಿಜಯ ದರ್ಪಣ ನ್ಯೂಸ್… ಕರ್ನಾಟಕ ಸಂಘ ಕತಾರ್ (KSQ), ಹಮದ್ ಮೆಡಿಕಲ್ ಕಾರ್ಪೊರೇಷನ್ ಸಹಯೋಗದಲ್ಲಿ ರಕ್ತದಾನ ಶಿಬಿರ ಭಾರತೀಯ ಸಾಂಸ್ಕೃತಿಕ ಕೇಂದ್ರ (ICC) ಹಾಗೂ ಭಾರತೀಯ ರಾಯಭಾರ ಕಚೇರಿ, ದೋಹಾ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಸಂಘ ಕತಾರ್ (KSQ), ಹಮದ್ ಮೆಡಿಕಲ್ ಕಾರ್ಪೊರೇಷನ್ ಸಹಯೋಗದಲ್ಲಿ ಕತಾರ್ ರಾಷ್ಟ್ರೀಯ ರಕ್ತದಾನ ಕೇಂದ್ರದಲ್ಲಿ “Everyone Could Be a Hero” ಎಂಬ ಧ್ಯೇಯ ವಾಕ್ಯದೊಂದಿಗೆ ಭವ್ಯ ರಕ್ತದಾನ ಶಿಬಿರವನ್ನು 2026ರ ಮೇ 22, ಶುಕ್ರವಾರದಂದು ಯಶಸ್ವಿಯಾಗಿ ಆಯೋಜಿಸಿತು. ಈ ಕಾರ್ಯಕ್ರಮಕ್ಕೆ … Read more

ಬಲಾಡ್ಯರಿಂದ ಭೂಕಬಳಿಕೆ ವಿರೋಧಿಸಿ ಧರಣಿ

ವಿಜಯ ದರ್ಪಣ ನ್ಯೂಸ್… ಬಲಾಡ್ಯರಿಂದ ಭೂಕಬಳಿಕೆ ವಿರೋಧಿಸಿ ಧರಣಿ ದೊಡ್ಡಬಳ್ಳಾಪುರ : ತಾಲ್ಲೂಕಿನ ತೂಬಗೆರೆ ಹೋಬಳಿಯ ಮೇಲಿನ ನಾಯಕರಂಡಳ್ಳಿ ಗ್ರಾಮದ ಸರ್ವೆ ನಂಬರ್ 17ರಲ್ಲಿ ಸುಮಾರು 85 ರೈತರಿಗೆ ಭೂಮಿಯನ್ನು ಮಂಜೂರು ಮಾಡಿದ್ದು ಸಂಪರ್ಕ ರಸ್ತೆ ಕಲ್ಪಿಸುವಂತೆ ಸರ್ಕಾರಿ ಅಧಿಕಾರಿಗಳಿಗೆ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ ರೈತರ ಕಷ್ಟ ಕೇಳದ ಸರ್ಕಾರಿ ಅಧಿಕಾರಿಗಳ ವಿರುದ್ಧ ಸ್ಥಳೀಯ ರೈತರು ಹಾಗೂ ಕರುನಾಡು ರಾಷ್ಟ್ರೀಯ ಸೇನೆ ಅನಿರ್ದಿಷ್ಟವಾದಿ ಧರಣಿಗೆ ಮುಂದಾಗಿದೆ ಎಂದು ಕರುನಾಡು ರಾಷ್ಟ್ರೀಯ … Read more

ಮಾವಿನ ಸೀಜನ್‌ನಲ್ಲೂ ದ್ರಾಕ್ಷಿಗೆ ಉತ್ತಮ ಬೇಡಿಕೆ, ರೈತರ ಮುಖದಲ್ಲಿ ಮೂಡಿದ ಮಂದಹಾಸ

ವಿಜಯ ದರ್ಪಣ ನ್ಯೂಸ್…. ಮಾವಿನ ಸೀಜನ್‌ನಲ್ಲೂ ದ್ರಾಕ್ಷಿಗೆ ಉತ್ತಮ ಬೇಡಿಕೆ, ರೈತರ ಮುಖದಲ್ಲಿ ಮೂಡಿದ ಮಂದಹಾಸ ಶಿಡ್ಲಘಟ್ಟ ಗ್ರಾಮಾಂತರ: ರಾಜ್ಯಾದ್ಯಂತ ಹಣ್ಣಿನ ತರಹವಾರಿ ಸಹಜವಾಗಿ, ಮಾರುಕಟ್ಟೆಯಲ್ಲಿ ಮಾವಿನ ಫಸಲು ಕಾಲಿಟ್ಟಿದೆ. ಮಾರುಕಟ್ಟೆಗಳಲ್ಲಿ ಮಾವು ವಿಜೃಂಭಿಸುತ್ತಿರುವುದರ ಪೈಪೋಟಿಯ ನಡುವೆಯೂ, ಗ್ರಾಮೀಣ ಭಾಗದಲ್ಲಿ, ರೈತರು ಬೆಳೆದಿರುವ ವಿವಿಧ ತಳಿಯ ದ್ರಾಕ್ಷಿ ಬೆಳೆಯ ಬೆಲೆ ಸುಧಾರಣೆಯಲ್ಲಿರುವುದು ರೈತಾಪಿ ವರ್ಗದಲ್ಲಿ ನಿರಾಳತೆ ಮೂಡಿಸಿದೆ. ಬೇಸಿಗೆಯಲ್ಲಿ ಆರಂಭವಾಗುವ ಮಾವಿನ ಸೀಜನ್ ನಲ್ಲಿ, ದ್ರಾಕ್ಷಿಗೆ ಬೇಡಿಕೆ ಕುಸಿಯುತ್ತಿತ್ತು. ಇದರಿಂದ ದ್ರಾಕ್ಷಿ ಬೆಳೆಗಾರರು ವ್ಯಾಪಾರಿಗಳ ಬಳಿಗೆ ಹೋಗಿ, … Read more

ವಾಹನ ಸಂಚಾರದಿಂದ ಧೂಳು ಬದಲಿ ಮಾರ್ಗದಲ್ಲಿ ವಾಹನ ಸಂಚಾರ ಮಾಡಿಸಲು ಕ್ರಮ ಕೈಗೊಳ್ಳುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಗ್ರಾಮಸ್ಥರ ಮನವಿ

ವಿಜಯ ದರ್ಪಣ ನ್ಯೂಸ್….. ವಾಹನ ಸಂಚಾರದಿಂದ ಧೂಳು ಬದಲಿ ಮಾರ್ಗದಲ್ಲಿ ವಾಹನ ಸಂಚಾರ ಮಾಡಿಸಲು ಕ್ರಮ ಕೈಗೊಳ್ಳುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಗ್ರಾಮಸ್ಥರ ಮನವಿ ತಾಂಡವಪುರ ಮೇ 27 ನಂಜನಗೂಡು ತಾಲೂಕು ವರುಣ ವಿಧಾನಸಭಾ ಕ್ಷೇತ್ರಸಿರುವ ಚಿಕ್ಕಯ್ಯನ ಛತ್ರ ಬಂಚಳ್ಳಿ ಹುಂಡಿ ಮಧ್ಯದಲ್ಲಿ ಹಾದುಹೋಗಿರುವ ಕೈಗಾರಿಕಾ ಪ್ರದೇಶದ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಾಗಿದ್ದು ಇದರಿಂದ ಅಕ್ಕಪಕ್ಕದ ಮನೆಗಳಿಗೆ ಬರುವುದರಿಂದ ಮಕ್ಕಳಿಗೆ ಮನುಷ್ಯರಿಗೆ ರೋಗರು ಜನಗಳು ಹರಡುವ ಭೀತಿ ಇದೆ ಎಂದು ಆರೋಪಿಸಿ ಗ್ರಾಮಸ್ಥರು ರಸ್ತೆಯಲ್ಲಿ ಸಂಚಾರ … Read more

ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ವಾರ್ಷಿಕೋತ್ಸವ

ವಿಜಯ ದರ್ಪಣ ನ್ಯೂಸ್…. ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ವಾರ್ಷಿಕೋತ್ಸವ ಶಿಡ್ಲಘಟ್ಟ : ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮುಂದುವರಿದರೆ ಮಾತ್ರ ಕುಟುಂಬಗಳು ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯ ಶೈಕ್ಷಣಿಕ ಕ್ಷೇತ್ರದಲ್ಲಿ ಶ್ರಮಪಟ್ಟಲ್ಲಿ ಜೀವನ ನೆಮ್ಮದಿಯಾಗಿರಲಿದೆ ಎಂದು ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಮತ್ತು ಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ತಿಳಿಸಿದರು. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜು ವಾರ್ಷಿಕೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮ, ಎಸ್. ರೇಂಜರ್ಸ್ ಮತ್ತು ರೋವರ್ಸ್‌ ರೆಡ್ ಕ್ರಾಸ್ ಪರಂಪರೆ ಕೂಟ ಮತ್ತು ಇತರ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ … Read more

ಸರ್ಕಾರಿ ಶಾಲೆಯಲ್ಲಿ ಗಮನ ಸಳೆದ ಮಕ್ಕಳ ಕಲಿಕಾ ಹಬ್ಬ

ವಿಜಯ ದರ್ಪಣ ನ್ಯೂಸ್…. ಸರ್ಕಾರಿ ಶಾಲೆಯಲ್ಲಿ ಗಮನ ಸಳೆದ ಮಕ್ಕಳ ಕಲಿಕಾ ಹಬ್ಬ ಶಿಡ್ಲಘಟ್ಟ : ಕೇವಲ ಸಾಂಪ್ರದಾಯಿಕ ಅಕ್ಷರ ಕಲಿಕೆಗೆ ಒತ್ತು ನೀಡದೆ, ಆಟದ ಮೂಲಕ ಶಿಕ್ಷಣ ನೀಡಿದಾಗ ಮಕ್ಕಳಲ್ಲಿ ಕಲಿಕೆಯ ಬಗ್ಗೆ ಶಾಶ್ವತ ಪ್ರೀತಿ ಮೂಡುತ್ತದೆ ಅಂಗನವಾಡಿಯ ಆಟದ ವಾತಾವರಣದಿಂದ ಶಾಲೆಯ ಔಪಚಾರಿಕ ವಾತಾವರಣಕ್ಕೆ ಮಕ್ಕಳು ಸುಲಭವಾಗಿ ಹೊಂದಿಕೊಳ್ಳಲು ಮನೋವೈಜ್ಞಾನಿಕ ಮೇಳಗಳು ಅತ್ಯಗತ್ಯ ಎಂದು ಪ್ರಥಮ್ ಎಜುಕೇಶನ್ ಫೌಂಡೇಶನ್‌ನ ರಾಜ್ಯ ಮುಖ್ಯಸ್ಥ ಮಂಜುನಾಥ್ ತಿಳಿಸಿದರು. ತಾಲ್ಲೂಕಿನ ಸುಗಟೂರು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಪ್ರಥಮ್ ಎಜುಕೇಶನ್ ಫೌಂಡೇಶನ್‌ನ ಆಶ್ರಯದಲ್ಲಿ “ನಮ್ಮ ಗ್ರಾಮ” ಶಿರ್ಷಿಕೆಯಡಿ ಹಮ್ಮಿಕೊಂಡಿದ್ದ ಶಾಲಾಪೂರ್ವ ತಯಾರಿಮೇಳದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕೇವಲ ಸಾಂಪ್ರದಾಯಿಕ ಅಕ್ಷರ ಕಲಿಕೆಗೆ ಒತ್ತು ನೀಡದೆ, ಆಟದ ಮೂಲಕ ಶಿಕ್ಷಣ ನೀಡಿದಾಗ ಮಕ್ಕಳಲ್ಲಿ ಕಲಿಕೆಯ ಬಗ್ಗೆ ಶಾಶ್ವತ ಪ್ರೀತಿ ಮೂಡುತ್ತದೆ ಅಂಗನವಾಡಿಯ ಆಟದ ವಾತಾವರಣದಿಂದ ಶಾಲೆಯ ಔಪಚಾರಿಕ ವಾತಾವರಣಕ್ಕೆ ಮಕ್ಕಳು ಸುಲಭವಾಗಿ ಹೊಂದಿಕೊಳ್ಳಲು ಇಂತಹ ಅಗತ್ಯ ಎಂದು ಹೇಳಿದರು. ತಾಯಿಯೇ ಮಗುವಿನ ಮೊದಲ ಶಿಕ್ಷಕಿಯಾಗಿದ್ದು, ಮನೆಯೇ ಮೊದಲ ಪಾಠಶಾಲೆಯಾಗಬೇಕು ಪ್ರತಿಯೊಬ್ಬ ತಾಯಿಯೂ ಮಗುವಿನ ಮಾನಸಿಕ ಏರುಪೇರುಗಳನ್ನು ಹತ್ತಿರದಿಂದ ಬಲ್ಲವರಾಗಿರುತ್ತಾರೆ , ತಾಯಂದಿರು ಮನೆಯಲ್ಲಿ  ಪ್ರತಿದಿನ ಕನಿಷ್ಠ ೧೫ నిಮಿಷಗಳನ್ನು ಮಗುವಿನೊಂದಿಗೆ ಕಳೆಯಬೇಕು ಎಂದರು. ಮುಖ್ಯಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ಬಣ್ಣಗಳನ್ನು ವರ್ಗೀಕರಿಸುವುದು ಮತ್ತು ಒಗಟು ಬಿಡಿಸುವ ಚಟುವಟಿಕೆಗಳು ಮಕ್ಕಳ ತಾರ್ಕಿಕ ಚಿಂತನೆಯನ್ನು ಹೆಚ್ಚಿಸಿದರೆ, ರೇಖೆಯ ಮೇಲೆ ನಡೆಯುವುದು ಮತ್ತು ಮಣಿ ಪೋಣಿಸುವುದು ಅವರ ಗಮನ ಕೇಂದ್ರೀಕರಣ ಹಾಗೂ ಹಸ್ತ ನೇತ್ರಗಳ ಸಮನ್ವಯತೆಯನ್ನು ಉತ್ತಮಪಡಿಸುತ್ತದೆ ಎಂದರು. … Read more

ಶ್ರಮಿಕ ವಸತಿ ಶಾಲೆ ಕಾರ್ಮಿಕರ ಮಕ್ಕಳ ಶೈಕ್ಷಣಿಕಾಭಿವೃದ್ಧಿಗೆ ಸಹಕಾರಿ: ಶಾಸಕ ಶರತ್ ಬಚ್ಚೆಗೌಡ

ವಿಜಯ ದರ್ಪಣ ನ್ಯೂಸ್….. ಶ್ರಮಿಕ ವಸತಿ ಶಾಲೆ ಕಾರ್ಮಿಕರ ಮಕ್ಕಳ ಶೈಕ್ಷಣಿಕಾಭಿವೃದ್ಧಿಗೆ ಸಹಕಾರಿ: ಶಾಸಕ ಶರತ್ ಬಚ್ಚೆಗೌಡ ಹೊಸಕೋಟೆ ಬೆಂಗಳೂರು ಗ್ರಾ ಜಿಲ್ಲೆ, ಮೇ. 27 : ಜಿಲ್ಲೆಯ ಶ್ರಮಿಕ ವರ್ಗದವರ ಮಕ್ಕಳ ಶೈಕ್ಷಣಿಕಾಭಿವೃದ್ಧಿಗೆ ಶ್ರಮಿಕ ವಸತಿ ಶಾಲೆ ಸಹಕಾರಿಯಾಗಲಿದೆ ಎಂದು ಹೊಸಕೋಟೆ ಶಾಸಕ ಶರತ್ ಕುಮಾರ್ ಬಚ್ಚೆಗೌಡ ಅವರು ಅಭಿಪ್ರಾಯಪಟ್ಟರು. ಹೊಸಕೋಟೆ ತಾಲೂಕಿನ ಬೇಗೂರು ಗ್ರಾಮದಲ್ಲಿ ಕಾರ್ಮಿಕ ಇಲಾಖೆ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಜಿಲ್ಲಾ ಜಿಲ್ಲಾಡಳಿತ ಹಾಗೂ ಜಿಲ್ಲಾ … Read more

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಶೇಷ ಅಂಚೆ ಲಕೋಟೆ ಹಾಗೂ ಅಂಚೆ ಕಾರ್ಡುಗಳು ಬಿಡುಗಡೆ

ವಿಜಯ ದರ್ಪಣ ನ್ಯೂಸ್…… ಕೆಂಪೇಗೌಡ  ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ18ನೇ ವರ್ಷಾಚರಣೆ ಸಂಭ್ರಮದಲ್ಲಿ  ವಿಶೇಷ ಅಂಚೆ ಲಕೋಟೆ ಹಾಗೂ ಅಂಚೆ ಕಾರ್ಡುಗಳು ಬಿಡುಗಡೆ ದೇವನಹಳ್ಳಿ: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ  ಮತ್ತು ಇಂಡಿಯಾ ಪೋಸ್ಟ್ ಇಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ 18 ವರ್ಷಗಳನ್ನು ಗುರುತಿಸುವ ಸಲುವಾಗಿ ವಿಶೇಷ ಅಂಚೆ ಕವರ್ ಮತ್ತು ಸ್ಮರಣಾರ್ಥ ಚಿತ್ರ ಪೋಸ್ಟ್‌ಕಾರ್ಡ್‌ಗಳೊಂದಿಗೆ ಶಾಶ್ವತ ಚಿತ್ರ ರದ್ದತಿ (ಪಿಪಿಸಿ) ಅನ್ನು  ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಹರಿ … Read more

AI ಎನ್ನುವುದು ಕೇವಲ ತಂತ್ರಜ್ಞಾನದ ಚರ್ಚೆಯಲ್ಲ — ಇದು ಮೂಲಭೂತವಾಗಿ ನಂಬಿಕೆ, ಜವಾಬ್ದಾರಿ, ಪಾರದರ್ಶಕತೆ ಮತ್ತು ನಾಗರಿಕರ ಮೇಲಿನ ಪ್ರಭಾವ : ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್

ವಿಜಯ ದರ್ಪಣ ನ್ಯೂಸ್… AI ಎನ್ನುವುದು ಕೇವಲ ತಂತ್ರಜ್ಞಾನದ ಚರ್ಚೆಯಲ್ಲ — ಇದು ಮೂಲಭೂತವಾಗಿ ನಂಬಿಕೆ, ಜವಾಬ್ದಾರಿ, ಪಾರದರ್ಶಕತೆ ಮತ್ತು ನಾಗರಿಕರ ಮೇಲಿನ ಪ್ರಭಾವ : ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ​ ಬೆಂಗಳೂರು, ಮೇ 26,  “AI ಎನ್ನುವುದು ಕೇವಲ ತಂತ್ರಜ್ಞಾನದ ಚರ್ಚೆಯಲ್ಲ — ಇದು ಮೂಲಭೂತವಾಗಿ ನಂಬಿಕೆ, ಜವಾಬ್ದಾರಿ, ಪಾರದರ್ಶಕತೆ ಮತ್ತು ನಾಗರಿಕರ ಮೇಲಿನ ಪ್ರಭಾವದ ಕುರಿತಾಗಿದೆ” ತಂತ್ರಜ್ಞಾನವು ಸಾರ್ವಜನಿಕ ಸೇವೆ ವಿತರಣೆ, ಆಡಳಿತಾತ್ಮಕ ಪ್ರತಿಕ್ರಿಯೆ ಮತ್ತು ಒಳಗೊಳ್ಳುವಿಕೆಯನ್ನು ಸುಧಾರಿಸುವ ಮೂಲಕ ಕರ್ನಾಟಕವನ್ನು AI … Read more