--Ads--

ಯುವ ರೈತರನ್ನ ಉತ್ತೇಜಿಸಲು ನಡಿಗೆ ಜಾಥ, ಆಹಾರ ಸರಪಳಿ ಮತ್ತು ಪ್ರಕೃತಿ, ಆರ್ಥಿಕತೆ ಜನಜಾಗೃತಿ ಕಾರ್ಯಕ್ರಮ 

On: June 14, 2026 2:06 AM
Follow ಮಾಡಿ
--Ads--

Whatsapp Channel

Join Now

Telegram Group

Join Now
ವಿಜಯ ದರ್ಪಣ ನ್ಯೂಸ್….
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಗೌಶುಭಮ್ ಸಹಯೋಗದಲ್ಲಿ 

ಯುವ ರೈತರನ್ನ ಉತ್ತೇಜಿಸಲು ನಡಿಗೆ ಜಾಥ, ಆಹಾರ ಸರಪಳಿ ಮತ್ತು ಪ್ರಕೃತಿ, ಆರ್ಥಿಕತೆ ಜನಜಾಗೃತಿ ಕಾರ್ಯಕ್ರಮ 

ಬೆಂಗಳೂರು: ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಗೌಶುಭ್ ಫೌಂಡೇಷನ್ ವಿದ್ಯಾರ್ಥಿಗಳ ರೈತರ ನಡಿಗೆ -2 ಮತ್ತು ಪ್ರಕೃತಿ ಯುವ ಜನತೆ ಆರ್ಥಿಕತೆ ಆಹಾರ ಸರಪಳಿ ಅಭಿಯಾನ ಜೂನ್ 14 ಬೆಳಗ್ಗೆ 9ಗಂಟೆಗೆ ಫೀಡಂ ಪಾರ್ಕ್ ನಲ್ಲಿ ಆಯೋಜಿಸಲಾಗಿದೆ.
ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಲಕ್ಷ್ಮಿನಾರಾಯಣ್ ಗೌಡ, ಕೃಷಿ ತಂತ್ರಜ್ಞಾನ ಸಂಸ್ಥೆಯ ಎ.ಬಿ.ಪಾಟೀಲ್, ಗೌಶುಭಮ್ ಫೌಂಡೇಷನ್ ಸಂಸ್ಥಾಪಕ ನರೇಂದ್ರ, ರಾಜ್ಯ ರೈತ ಸಂಘದ ಯುವ ಘಟಕದ ಅಧ್ಯಕ್ಷ ಯತೀಶ್ ತುಕಾರಾಮ್ ರವರು, ರೈತ ಮುಖಂಡರುಗಳು ಮಾಧ್ಯಮಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಅಧ್ಯಕ್ಷ ಲಕ್ಷ್ಮೀನಾರಾಯಣ್ ಗೌಡರವರು ಮಾತನಾಡಿ ಸ್ವಾತಂತ್ರ್ಯ ಪೂರ್ವದಲ್ಲಿ ಕೃಷಿ ಭೂಮಿ ಶೇಕಡ 83ರಷ್ಟು ಇತ್ತು ಇಂದು 30ರಷ್ಟು ಇದೆ. ಕೃಷಿ ಉಳಿಯಬೇಕು ಎಂಬ ಉದ್ದೇಶದಿಂದ ಫೀಡಂ ಪಾರ್ಕ್ ವಿಂದ ಮೈಸೂರು ಬ್ಯಾಂಕ್ ನವರಗೆ ನಡಿಗೆ ಜಾಥ ಆಯೋಜಿಸಲಾಗಿದೆ.
ತಂತ್ರಜ್ಞಾನ ಮುಂದುವರೆದಂತೆ ಇಂದಿನ ಯುವಕರು ಕೃಷಿ ಕಡೆ ಗಮನರಿಸುತ್ತಿಲ್ಲ. ಯುವಕರನ್ನ ಕೃಷಿ ಕಡೆ ಗಮನಹರಿಸಲು ಜನಜಾಗೃತಿ ಮೂಡಿಸಲಾಗುತ್ತಿದೆ.
ಲಾಭದಾಯಕ ಕೃಷಿ ಉದ್ಯಮದಲ್ಲಿ ಯುವಕರು ಬಂದರೆ ದೇಶ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಎ.ಬಿ.ಪಾಟೀಲ್ ರವರು ಮಾತನಾಡಿ ತಂತ್ರಜ್ಞಾನ, ವೈಜ್ಞಾನಿಕ ಯುವಕರಲ್ಲಿ ಇರುತ್ತದೆ ಅದನ್ನ ಕೃಷಿಯಲ್ಲಿ ಬಳಸಿದರೆ ಉತ್ತಮ.
ನಾವು ಯಾವ ಬೇಳೆ ಬೆಳಯಬೇಕು ಮತ್ತು ಮಾರಾಟ ಮಾಡಲು ಮಾರುಕಟ್ಟೆ ಅದರ ಪ್ರಚಾರ ಯಾವ ರೀತಿಯಲ್ಲಿ ಮಾಡಬೇಕು ಅರಿಯಬೇಕು.
ಕೃಷಿಯಲ್ಲಿ ಉತ್ತಮ ಭವಿಷ್ಯವಿದೆ ತಂತ್ರಜ್ಞಾನ ಬಳಿಸಿ ಉತ್ತಮ ಬೇಳೆ ಬೆಳಯಬಹುದು. ಯುವಕರು ಕೃಷಿಯಲ್ಲಿ ತೊಡಗಬೇಕು ಎಂದು ಹೇಳಿದರು.
ನರೇಂದ್ರರವರು ಮಾತನಾಡಿ ಕೃಷಿ ಪ್ರಧಾನ ರಾಷ್ಟ್ರ ನಮ್ಮದು ಇಂದು ಯುವಕರು ಕೃಷಿಯ ಬಗ್ಗೆ ಆಸಕ್ತಿವಹಿಸಬೇಕು. ರೈತ ಎಂದರೆ ಹೆಮ್ಮೆ ಪಡುವ ಸಂಗತಿ. ಯುವಕರು ಕೃಷಿ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಹೇಳಿದರು.
ಯತೀಶ್ ತುಕುರಾಂ ರವರು ಮಾತನಾಡಿ ಯುವಕ-ಯುವತಿಯರು ರೈತರಾಗಬೇಕು, ಫಲವತ್ತಾದ ಭೂಮಿ ನಮ್ಮ ದೇಶದಲ್ಲಿ ಇದೆ. ಕೃಷಿ ಕುರಿತು ಅರಿವು ಮೂಡಿಸಲು ಎಲ್ಲ ಕಾಲೇಜುಗಳಲ್ಲಿ ಕಾರ್ಯಗಾರ ಮಾಡಲಾಗುತ್ತಿದೆ. ಯುವಕರು ಮುಂದೆ ಬರಬೇಕು ಎಂದು ನಡಿಗೆ ಜಾಥ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

WhatsApp

Join Now

Telegram

Join Now

Instagram

Join Now