ವಿಜಯ ದರ್ಪಣ ನ್ಯೂಸ್….
ಶ್ರೀ ಅಮ್ಮನಾಗಮ್ಮ ದೇವಾಲಯದಲ್ಲಿ ನಾಗರಪಂಚಮಿ ಹಬ್ಬ, ಭಕ್ತಾಧಿಗಳಿಂದ ಹಾಲಿನ ಅಭಿಷೇಕ

ಗಾಂಧಿನಗರ: ಓಕುಳಿಪುರಂ
ನಲ್ಲಿರುವ ಶ್ರೀ ಅಮ್ಮ ನಾಗಮ್ಮ ದೇವಾಲಯದಲ್ಲಿ ನಾಗರ ಪಂಚಮಿ ಮತ್ತು ವಾರ್ಷಿಕೋತ್ಸವ ಪ್ರಯುಕ್ತ ವಿಶೇಷಪೂಜೆ ಸಮಾರಂಭ.
ದೇವಾಲಯದ ಸಂಸ್ಥಾಪಕರಾದ ಆರ್.ಮೋಹನ್ , ಶ್ರೀಮತಿ ಅನಿತರವರು ನಾಗಮ್ಮ ದೇವಿ ವಿಶೇಷಪೂಜೆ ಸಲ್ಲಿಸಿ, ನಾಗರಕಲ್ಲು, ಹುತ್ತಕ್ಕೆ ಹಾಲಿನ ಅಭಿಷೇಕ ಮಾಡುವ ಮೂಲಕ ನಾಗರ ಪಂಚಮಿ ಅಚರಿಸಿದರು, ನೂರಾರು ಭಕ್ತರುಗಳು ಆಗಮಿಸಿದ್ದರು.
ಇದೇ ಸಂದರ್ಭದಲ್ಲಿ ಆರ್.ಮೋಹನ್ ರವರು ಮಾತನಾಡಿ ಸಕಲ, ಸಂಕಷ್ಟ ನಿವಾರಣೆ ಮತ್ತು ಸರ್ಪ ದೋಷ ಪರಿಹಾರವಾಗಬೇಕು ಮತ್ತು ಮದುವೆ ಯೋಗ, ಸಂತಾನ ಭಾಗ್ಯ ಕುಟುಂಬದಲ್ಲಿ ಶಾಂತಿ, ನೆಮ್ಮದ್ದಿ ಲಭಿಸಬೇಕು ನಾಗ ದೋಷ ಪರಿಹಾರವಾಗಬೇಕು ಎಂದು ಶ್ರೀ ಅಮ್ಮ ನಾಗಮ್ಮ ದೇವಾಲಯ ಸಾವಿರಾರು ಭಕ್ತರು ಬರುತ್ತಿದ್ದಾರೆ. ಇಲ್ಲಿ ಬಂದವರಿಗೆ ಒಳ್ಳೆಯ ಫಲ ಸಿಕ್ಕಿದೇ.
ಶ್ರೀ ಅಮ್ಮ ನಾಗಮ್ಮ ದೇವಾಲಯದಲ್ಲಿ ನಾಗರ ಪಂಚಮಿ ದಿನದಂದು ಹುತ್ತಕ್ಕೆ, ನಾಗರಕಲ್ಲಿಗೆ ಹಾಲಿನ ಅಭಿಷೇಕ ಮಾಡಲು ಭಕ್ತರಿಗೆ ಅವಕಾಶ ಮಾಡಿಕೊಡಲಾಗಿದೆ.
ದೇವಾಲಯದಲ್ಲಿ ಗಣಪತಿಪೂಜೆ, ಅಷ್ಟದಿಕ್ವಾಲಿಕ ಪೂಜೆ, ದುರ್ಗಾ ಕಾಳಿಕಾಪೂಜೆ, ವಿಶೇಷಹೋಮ ನಂತರ ಅನ್ನದಾನ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಭಜನೆ, ದೇವರನಾಮ, ಭಕ್ತಿಗೀತೆ ಸಂಗೀತ ಕಾರ್ಯಕ್ರಮ ಹಾಗೂ ಮುತ್ತಿನ ಪಲ್ಲಕ್ಕಿಯಲ್ಲಿ ಮೆರವಣಿಗೆ ಕಾರ್ಯಕ್ರಮವಿದೆ ಎಂದು ಹೇಳಿದರು.







