--Ads--

ಏ.೧೯, ೨೦ರಂದು ಅದ್ಧೂರಿ ಬಸವ ಜಯಂತಿ ಆಚರಣೆ

On: April 17, 2026 5:49 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಏ.೧೯, ೨೦ರಂದು ಅದ್ಧೂರಿ ಬಸವ ಜಯಂತಿ ಆಚರಣೆ

ತಾಂಡವಪುರ ಏಪ್ರಿಲ್ 17 ಬಸವ ಬಳಗಗಳ ಒಕ್ಕೂಟ ಮೊದಲಾದವುಗಳ ಸಂಯುಕ್ತಾಶ್ರಯದಲ್ಲಿ ಏ.೧೯ ಮತ್ತು ೨೦ರಂದು ನಗರದ ಕಲಾ ಮಂದಿರದಲ್ಲಿ ನಮ್ಮ ಬಸವಣ್ಣ ಸಾಂಸ್ಕೃತಿಕ ನಾಯಕ ಶೀರ್ಷಿಕೆ ಅಡಿಯಲ್ಲಿ ಬಸವ ಜಯಂತಿ ಆಯೋಜಿಸಲಾಗಿದೆ ಎಂದು ಆಯೋಜನಾ ಸಮಿತಿ ಅಧ್ಯಕ್ಷ ಎಂ.ಚಂದ್ರಶೇಖರ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಭವನದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ೧೯ ರ ಬೆಳಗ್ಗೆ ೮.೩೦ಕ್ಕೆ ಜಗದ್ಗುರು ಶಿವರಾತ್ರಿ ರಾಜೇಂದ್ರ ವೃತ್ತದಿಂದ ಭವ್ಯ ಮೆರವಣಿಗೆ ಹೊರಟು ಕಲಾ ಮಂದಿರ ತಲುಪಲಿದೆ. ಮಧ್ಯಾಹ್ನ ೧ಕ್ಕೆ ಕಲಾ ಮಂದಿರದ ಬಳಿ ಆರೋಗ್ಯ ತಪಾಸಣಾ ಶಿಬಿರ ಇರಲಿದೆ. ೧.೩೦ಕ್ಕೆ ವಚನ ಚಿತ್ರ ಪ್ರದರ್ಶನ, ೨ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಇರಲಿವೆ. ಇವುಗಳಲ್ಲಿ ಗಣ್ಯಾತಿ ಗಣ್ಯರು ಪಾಲ್ಗೊಳ್ಳುವರು ಎಂದು ತಿಳಿಸಿದರು.

೨೦ ರ ಬೆಳಗ್ಗೆ ೯.೩೦ಕ್ಕೆ ನೂತನ ಡಿಸಿ ಕಚೇರಿ ಮುಂಭಾಗ ಬಸವಣ್ಣನವರ ಪ್ರತಿಮೆ ಸ್ಥಾಪನೆಗೆ ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ೧೦.೩೦ಕ್ಕೆ ಕಲಾ ಮಂದಿರದಲ್ಲಿ ಬಸವ ಜಯಂತಿ ಹಾಗೂ ರಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದ್ದು, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಿಎಂ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್,  ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಡಾ.ಎಚ್.ಸಿ.ಮಹದೇವಪ್ಪ ಇನ್ನಿತರರು ಉಪಸ್ಥಿತರಿರುವರು.

ಮಧ್ಯಾಹ್ನ ೨ಕ್ಕೆ ವಿಚಾರಗೋಷ್ಠಿ, ಸಂಜೆ ೫ಕ್ಕೆ ಸಮಾರೋಪ ಸಮಾರಂಭ ಜರುಗಲಿದೆ ಎಂದು ಮಾಹಿತಿ ನೀಡಿದರು. ಜಿ.ಎಂ.ಜೈಶಂಕರ್ ಜೀಮಾರಹಳ್ಳಿ, ಕೆ.ವಿ.ಮಲ್ಲೇಶ್, ಹರೀಶ್, ಆಯರಹಳ್ಳಿ ಪಿ.ವಿರೂಪಾಕ್ಷ, ದೇವರಾಜು ಪಿ. ಚಿಕ್ಕಹಳ್ಳಿ, ದಾರಿಪುರ ಡಿ. ಚಂದ್ರಶೇಖರ್ ಇದ್ದರು.

WhatsApp

Join Now

Telegram

Join Now

Instagram

Join Now