ವಿಜಯ ದರ್ಪಣ ನ್ಯೂಸ್….
ಗಂಗನಹಳ್ಳಿ ಎಂ.ಪಿ.ಸಿ.ಎಸ್. ನೂತನ ಅಧ್ಯಕ್ಷರಾಗಿ ಜಿ.ಎಂ.ಶಿವಾನಂದ ಅವಿರೋಧ ಆಯ್ಕೆ

ಶಿಡ್ಲಘಟ್ಟ : ತಾಲ್ಲೂಕಿನ ಗಂಗನಹಳ್ಳಿ ಡೇರಿ ನೂತನ ಅಧ್ಯಕ್ಷರಾಗಿ ಜಿ.ಎಂ.ಶಿವಾನಂದ ಅವಿರೋಧ ಆಯ್ಕೆ
ಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಮಂಜುನಾಥ್ ಘೋಷಣೆ ಮಾಡಿದರು.
ಅಧ್ಯಕ್ಷರಾಗಿದ್ದ ಜಿ.ವಿ.ಸುರೇಶ್ ರಾಜಿನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಹಾಲು ಉತ್ಪಾದಕರ ಸಹಕಾರ ಸಂಘದ ಸಭಾಂಗಣದಲ್ಲಿ ಗುರುವಾರ ನಡೆದ ಚುನಾವಣೆಯಲ್ಲಿ ಜಿ.ಎಂ.ಶಿವಾನಂದ ಅವರು ಒಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಬಿ.ಸಿ.ವೆಂಕಟೇಶಪ್ಪ, ಸಂಘದ ಉಪಾಧ್ಯಕ್ಷ ಜಿ.ಎಂ.ಮುತ್ತೇಗೌಡ, ನಿರ್ದೇಶಕರಾದ ಕರಗಪ್ಪ,ಅಶ್ವಥಪ್ಪ, ಜಿ.ವಿ.ಸುರೇಶ್, ಜಿ.ಎಂ.ನಾಗರಾಜ್, ಜಿ.ಕೆ.ಶಿವಾನಂದ, ಯಶೋಧಮ್ಮ, ದಿಲೀಪ್ ಕುಮಾರ್, ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಜಿ.ಸಿ.ಬೈರೇಗೌಡ, ಸಿಬ್ಬಂದಿ ಅಂಬರೀಶ್, ಮುನಿಬಚ್ಚಪ್ಪ, ಮುಖಂಡ ಜಿ.ವಿ.ದೇವರಾಜ್ ಇನ್ನೀತರರು ಹಾಜರಿದ್ದರು.










