ಜೈ ಶ್ರೀರಾಮ್….

ವಿಜಯ ದರ್ಪಣ ನ್ಯೂಸ್ ದೇಶ ಮೊದಲು ಎಂದು ಹೇಳುತ್ತಿದ್ದ ಬಹಳಷ್ಟು ಜನರು ರಾಮ ಮೊದಲು ಎಂಬ ಭಾವನಾತ್ಮಕ ಸುಳಿಗೆ ಸಿಲುಕಿದ್ದಾರೆ ಎಂದೆನಿಸುವುದಿಲ್ಲವೇ…. ವಿಶ್ವ ಇತಿಹಾಸವನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿ. ಧಾರ್ಮಿಕ ಅಂಧತ್ವ, ಧಾರ್ಮಿಕ ಉದ್ವೇಗ, ಮೂಡ ಭಕ್ತಿ ಕೊನೆ ಕೊನೆಗೆ ಪರಿವರ್ತನೆ ಹೊಂದಿ ತನ್ನ ಉಚ್ಛ್ರಾಯ ಸ್ಥಿತಿಯನ್ನು ತಲುಪಿ ಅಂತಿಮವಾಗಿ ರಕ್ತಪಾತದ ಮುಖಾಂತರ ವಿನಾಶದ ಅಂಚಿಗೆ ಬಂದು ತಲುಪುತ್ತದೆ….. ಸ್ವಾತಂತ್ರ್ಯ ಸ್ವೇಚ್ಛೆಯಾಗಿ ಪರಿವರ್ತನೆ ಹೊಂದುವುದಿಲ್ಲವೇ ಹಾಗೆಯೇ ಭಕ್ತಿ ಅತಿಯಾದರೆ ಉನ್ಮಾದವಾಗುತ್ತದೆ. ಅಲ್ಲಿ ಭಯ ಭಕ್ತಿ ವಿನಯ ಪ್ರೀತಿ … Read more

ಭಾರತ ಜಗತ್ತಿನ 3ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ: ಅಮಿತ್ ಶಾ

ವಿಜಯ ದರ್ಪಣ ನ್ಯೂಸ್ ಕೆಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಗುಜರಾತ್ನಲ್ಲಿ ನಡೆದ ‘ವೈಬ್ರೆಂಟ್ ಗುಜರಾತ್ ಶೃಂಗಸಭೆ’ಯ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು. ‘ಮೋದಿಯವರ ಮೂರನೇ ಬಾರಿಯ ಪ್ರಧಾನಿಯ ಅವಧಿಯಲ್ಲಿ ಭಾರತವು ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಮೂಲಕ ಜಗತ್ತಿನ ಮುಂದೆ ಹೆಮ್ಮೆಯಿಂದ ತೆಲೆ ಎತ್ತಿ ನಿಲ್ಲಲಿದೆ’ ಎಂದು ಶಾ ವಿಶ್ವಾಸ ವ್ಯಕ್ತಪಡಿಸಿದರು. ಪ್ರಧಾನಿ ನರೇಂದ್ರ ಮೋದಿಯವರು ಎರಡು ದಶಕಗಳ ಹಿಂದೆಯೇ ‘ವೈಬ್ರೆಂಟ್ ಗುಜರಾತ್’ ಅನ್ನು ರೂಪಿಸಿದ್ದರು ಮತ್ತು ಅದರ ಫಲಿತಾಂಶವನ್ನು ನಾವಿಂದು ಕಾಣಬಹುದು. ಸ್ವಾವಲಂಬಿ … Read more

ಶ್ರದ್ದೆಯ ಅರ್ಥ ಮೂಢನಂಬಿಕೆಯಲ್ಲ : ಸ್ವಾಮಿ ವಿವೇಕಾನಂದ…..

ವಿಜಯ ದರ್ಪಣ ನ್ಯೂಸ್ ಅಯೋಧ್ಯೆ ಕಾಂಡದ ಮಂತ್ರಾಕ್ಷತೆಯ ಭಕ್ತಿ ಭಾವದಲ್ಲಿ ಭಾರತದ ಸಾಂಸ್ಕೃತಿಕ ರಾಯಭಾರಿಯನ್ನು ನೆನೆಯುತ್ತಾ…… ನಾನು ಕಂಡಂತೆ ಸುಮಾರು ವರ್ಷಗಳಿಂದ ಬಹುತೇಕ ಎಲ್ಲಾ ಜನಪ್ರಿಯ ಪಕ್ಷದ ರಾಜಕಾರಣಿಗಳು ಚುನಾವಣಾ ಸಮಯದಲ್ಲಿ, ಫಲಿತಾಂಶಗಳ ದಿನಗಳಲ್ಲಿ, ಮಂತ್ರಿಮಂಡಲ ರಚನೆ, ವಿಸ್ತರಣೆ ಮತ್ತು ಪುನರ್ ರಚನೆಯ ಸಂದರ್ಭದಲ್ಲಿ, ತಮ್ಮ ಹುಟ್ಟು ಹಬ್ಬದ ಸನ್ನಿವೇಶದಲ್ಲಿ ತಿರುಪತಿ, ಧರ್ಮಸ್ಥಳ, ಮಂತ್ರಾಲಯ, ವೈಷ್ಣವೋದೇವಿ, ಕಾಶಿ, ಸುಬ್ರಮಣ್ಯ, ಇನ್ನು ಮುಂದೆ ಅಯೋಧ್ಯೆ ಹೀಗೆ ಮುಂತಾದ ಪ್ರಮುಖ ಧಾರ್ಮಿಕ ಸ್ಥಳಗಳಿಗೆ ಹೋಗಿ ದೇವರಿಗೆ ಕಾಣಿಕೆ ನೀಡಿ ತಮ್ಮ … Read more

ಸಿ.ಎಸ್.ಆರ್ ಅನುದಾನದಡಿ ಸರ್ಕಾರಿ ಶಾಲೆಗಳ ಅಭಿವೃದ್ಧಿ: ಸಚಿವ. ಕೆ.ಹೆಚ್ ಮುನಿಯಪ್ಪ.

ವಿಜಯ ದರ್ಪಣ ನ್ಯೂಸ್ ದೇವನಹಳ್ಳಿ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜನವರಿ 12  :- ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕಲ್ಪಿಸಲು ಪ್ರತಿ ಗ್ರಾಮಪಂಚಾಯಿತಿಯ ಕೇಂದ್ರ ಸ್ಥಾನದಲ್ಲಿರುವ ಸರ್ಕಾರಿ ಶಾಲೆಯನ್ನು ಸಿ.ಎಸ್.ಅರ್ ಅನುದಾನದಡಿ ಉತ್ತಮ ದರ್ಜೆಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್ ಮುನಿಯಪ್ಪ ಅವರು ಹೇಳಿದರು. ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್, ದೇವನಹಳ್ಳಿ ತಾಲ್ಲೂಕು ಪಂಚಾಯತ್, ಬಿದಲೂರು ಗ್ರಾಮ ಪಂಚಾಯಿತಿಯ ಆವರಣದಲ್ಲಿ ಸಿ.ಎಸ್.ಆರ್ … Read more

ಸಂಕ್ರಮಣ ಸಿಹಿ ಕಹಿ ಬಗ್ಗೆ ಮಕ್ಕಳಿಗೆ ಜಾಗೃತಿ.

ವಿಜಯ ದರ್ಪಣ ನ್ಯೂಸ್ ನಾರಾಯಣಪುರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ ಜನವರಿ 12: ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡಿ, ಸಂಕ್ರಾಂತಿ ಎಂದಾಗ ನೆನಪಾಗುವ ಮಾತಿದು ಸಂಕಾಂತಿಯಲ್ಲಿ ಪುರಾಣ ಕಾಣುತ್ತದೆ ವಿಜ್ಞಾನ ಇಣುಕು ಹಾಕುತ್ತದೆ ಸಂಪ್ರದಾಯ ಮಾತನಾಡುತ್ತದೆ ಕೃತಜ್ಞತೆ ಕೈ ಹಿಡಿಯುತ್ತದೆ ನಮಗೆ ಒಳ್ಳೆಯದಾಗಲಿ ನಮ್ಮ ನಿಮ್ಮ ಬದುಕಿನಲ್ಲಿ ಸಂ- ಕ್ರಾಂತಿಯಾಗಲಿ ಎಂಬ ಆಶಾವಾದಿಗಳಾಗೋಣ. ನಾರಾಯಣಪುರ ಶಾಲೆಯ  ಮುಖ್ಯ ಶಿಕ್ಷಕ ಚಂದ್ರಶೇಖರ ಹಡಪದ ಸಂಕ್ರಮಣ ಸಿಹಿ ಕಹಿ ಕುರಿತಾದ ಮಕ್ಕಳ ಜಾಗೃತಿ ಸಂಸ್ಥೆಯ ಕಾರ್ಯಕ್ರಮ ಉದ್ಘಾಟಿಸಿ … Read more

ತೈವಾನ್‌ ಪಿಂಕ್‌ ಸೀಬೆ ಬೆಳೆಗೆ ನರೇಗಾ ಆಶಾಕಿರಣ

ವಿಜಯ ದರ್ಪಣ ನ್ಯೂಸ್ ಬೆಂಗಳೂರು ಗ್ರಾಮಾಂತರ ಜಿಲ್ಲೆ,ಡಿಸೆಂಬರ್11 :-ಕೃಷಿ ಭೂಮಿ ರೈತರ ಪ್ರಯೋಗ ಶಾಲೆ ಎಂಬುದರಲ್ಲಿ ಎರಡು ಮಾತಿಲ್ಲ. ಇದಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬೆಟ್ಟಕೋಟೆ ಗ್ರಾಮದ ಚನ್ನೇಗೌಡ ಅವರೇ ಸಾಕ್ಷಿ. ತಮಗೆ ಸೇರಿದ ಎರಡು ಎಕರೆ ಜಮೀನಿನಲ್ಲಿ ಅವರು ತೈವಾನ್ ಪಿಂಕ್ ತಳಿಯ ಸೀಬೆ (ಚೇಪೆ ಹಣ್ಣು) ಬೆಳೆದು ಆದಾಯ ಕಂಡುಕೊಂಡಿದ್ದಾರೆ.   ಸಮೃದ್ಧವಾಗಿ ಬೆಳೆದಿರುವ ಸೀಬೆ ಹಣ್ಣಿನ ತೋಟ ನೋಡುಗರ ಬಾಯಿಯಲ್ಲಿ ನೀರೂರಿಸುತ್ತದೆ. ಹೆಚ್ಚು ನೀರು ಬಯಸದ ಸೀಬೆ ಬಯಲು ಸೀಮೆಗೆ ಹೇಳಿ ಮಾಡಿಸಿದ … Read more

ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನಾರೋಗ್ಯ ಯೋಜನೆ ಗುರುತಿನ ಕಾರ್ಡ್ ಪಡೆದುಕೊಳ್ಳಲು ಜಿಲ್ಲಾಧಿಕಾರಿ ಕರೆ

ವಿಜಯ ದರ್ಪಣ ನ್ಯೂಸ್ ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜನವರಿ 11 : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಕರ್ನಾಟಕ ರಾಜ್ಯದ ಪರಿಷ್ಕೃತ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆ-ಮುಖ್ಯಮಂತ್ರಿ ಆರೋಗ್ಯ ಕರ್ನಾಟಕ (AB- PMJAY-CMARK) ಗುರುತಿನ ಚೀಟಿಗಳನ್ನು ವಿತರಿಸಲಾಗುತ್ತಿದೆ.   ಈ ಯೋಜನೆಯಲ್ಲಿ ಬಿ.ಪಿ.ಎಲ್ ಫಲಾನುಭವಿಗಳ ಕುಟುಂಬಕ್ಕೆ ಒಂದು ವರ್ಷಕ್ಕೆ ಗರಿಷ್ಠ ರೂ.05 ಲಕ್ಷಗಳವರೆಗೆ ಉಚಿತ ಚಿಕಿತ್ಸೆಯ ಸೌಲಭ್ಯವಿರುತ್ತದೆ. ಹಾಗೂ ಎ.ಪಿ.ಎಲ್ ಫಲಾನುಭವಿಗಳ ಕುಟುಂಬಕ್ಕೆ ಪಾವತಿ ಆಧಾರದ ಮೇಲೆ … Read more

ಕಾಟೇರ….

ವಿಜಯ ದರ್ಪಣ ನ್ಯೂಸ್ ಕಾಟೇರ…….. ಕಾಶ್ಮೀರಿ ಫೈಲ್ಸ್, ಕೇರಳ ಸ್ಟೋರಿ, ಜೈಭೀಮ್, ಈಗ ಕಾಟೇರ ಹೀಗೆ ಭಾರತದ ಅನೇಕ ಭಾಷೆಗಳ ಚಲನಚಿತ್ರಗಳಲ್ಲಿ ನಿರಂತರವಾಗಿ ಈ ಸಮಾಜದ ಅನ್ಯಾಯ ಅಕ್ರಮ ಹಿಂಸೆ ತಾರತಮ್ಯಗಳನ್ನು ಮನರಂಜನೆ, ವ್ಯಾಪಾರ ಮತ್ತು ಕಲಾತ್ಮಕವಾಗಿ ಚಿತ್ರಿಸಿ ಯಶಸ್ಸು ಪಡೆಯಲಾಗುತ್ತಿದೆ. ಜನರು ಸಹ ಇದಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾರೆ. ಹಿಂಸೆ ಕ್ರೌರ್ಯ ಅಸಮಾನತೆ ಅಮಾನವೀಯತೆಯು ಒಂದು ಮನರಂಜನೆ ಎಂಬಲ್ಲಿಗೆ ನಮ್ಮ ಮನಸ್ಥಿತಿಗಳು ಬಂದು ತಲುಪಿದೆ…… ಒಮ್ಮೆ ಹಾಗೇ ಯೋಚಿಸಿ ನೋಡಿ. ಈ ದೇಶದ ಲಕ್ಷಾಂತರ ದೇವಸ್ಥಾನಗಳಲ್ಲಿ … Read more

ನಗರಸಭೆ ಪೌರಾಯುಕ್ತರ ವರ್ಗಾವಣೆಗೆ ಸದಸ್ಯರ ನಿರ್ಧಾರ

 ವಿಜಯ ದರ್ಪಣ ನ್ಯೂಸ್  ಮಡಿಕೇರಿ ಜನವರಿ: ನಗರಸಭೆಯ ಚುನಾಯಿತ ಜನಪ್ರತಿನಿಧಿಗಳು, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದ ಪೌರಾಯುಕ್ತರ ವರ್ಗಾವಣೆಗೆ ಸರಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ. ಈ ಬಗ್ಗೆ ತುರ್ತು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಮಡಿಕೇರಿ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಭೆಯಲ್ಲಿ ಪೌರಾಯುಕ್ತ ವರ್ಗಾವಣೆಯ ಶಿಫಾರಸ್ಸಿಗೆ ಕೈ ಎತ್ತುವುದರ ಮೂಲಕ ಆಡಳಿತ ಮತ್ತು ವಿಪಕ್ಷ ಸದಸ್ಯರು ಸಹಮತ ವ್ಯಕ್ತಪಡಿಸಿದರು. ತುರ್ತು ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಸವಿತಾ ರಾಕೇಶ್ ಸೇರಿದಂತೆ ಸರ್ವ ಸದಸ್ಯರು ಭಾಗಿಯಾಗಿದ್ದರು. ನಗರಸಭೆಯಲ್ಲಿ … Read more

ಹುಟ್ಟು ಹಬ್ಬವೊಂದು ಅರಿವಿನ ಸಂಭ್ರಮವಾಗ ಬಹುದಲ್ಲವೇ….

ವಿಜಯ ದರ್ಪಣ ನ್ಯೂಸ್ ಜನವರಿ:ಇತ್ತೀಚೆಗೆ ಆತ್ಮೀಯ ಗೆಳೆಯರಾದ, ಮಂತ್ರ ಮಾಂಗಲ್ಯದ ರೀತಿ ಮದುವೆಯಾಗಿದ್ದ ಶ್ರೀ ಯುವರಾಜ್ ಅವರ ಮಗಳು ಮಯೂರಿಯ ಒಂದನೇ ವರ್ಷದ ಜನುಮ ದಿನಾಚರಣೆಯನ್ನು ಸ್ವಲ್ಪ ವಿಭಿನ್ನವಾಗಿ ಆಚರಿಸಿದರು. ಎಲ್ಲ ಸಾಂಪ್ರದಾಯಿಕ ಸಂಭ್ರಮಗಳನ್ನು ಒಳಗೊಂಡ ಆದರೆ ಸರಳ ಮತ್ತು ಅರಿವಿನ ಸಾಂಸ್ಕೃತಿಕ ಹಬ್ಬದಂತೆ ಇದ್ದದ್ದು ಒಂದು ಮಾದರಿಯಾಗಿದೆ….. ಸಾಮಾನ್ಯವಾಗಿ ಹತ್ತು ವರ್ಷದ ಒಳಗಿನ ಮಕ್ಕಳಿಗೆ ಹುಟ್ಟು ಹಬ್ಬದ ಆಚರಣೆ ಹೆಚ್ಚು ಸಂತೋಷ ಮತ್ತು ಅರ್ಥಪೂರ್ಣವಾಗಿರುತ್ತದೆ. ನಂತರ ಬಹುತೇಕ ಕೇವಲ‌ ಔಪಚಾರಿಕ ಮಾತ್ರ. ಆ ಎಳೆಯ ಮುಗ್ಧ … Read more