ಏಳು ಅದ್ಭುತಗಳು…….

ವಿಜಯ ದರ್ಪಣ ನ್ಯೂಸ್….. ಏಳು ಅದ್ಭುತಗಳು……. ಜಗತ್ತಿನ ಏಳು ಅದ್ಭುತಗಳಂತೆ ಭಾರತದ ಏಳು ಸಾಮಾಜಿಕ ಅದ್ಭುತಗಳನ್ನು ಹುಡುಕುವ ಒಂದು ಪ್ರಯತ್ನ……….. 1) ಇಡೀ ಆಡಳಿತ ವ್ಯವಸ್ಥೆ ಭ್ರಷ್ಟಾಚಾರದಿಂದ ತುಂಬಿ ತುಳುಕುತ್ತಿದ್ದರೂ ಅದಕ್ಕೆ ದಾಖಲೆಗಳಿಲ್ಲ, ಶಿಕ್ಷೆಯಾಗುತ್ತಿಲ್ಲ. ದೊಡ್ಡ ಪ್ರಮಾಣದ ಪ್ರತಿಭಟನೆ ಅಥವಾ ಸಾರ್ವಜನಿಕ ಆಕ್ರೋಶಗಳು ಕಾಣುತ್ತಿಲ್ಲ. ಹಾಗಾದರೆ ವ್ಯವಸ್ಥೆ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದೆಯೇ ಎಂದರೆ ಖಂಡಿತ ಇಲ್ಲ. ಲಂಚವಿಲ್ಲದೆ ಯಾವುದೇ ಕೆಲಸ ಆಗುವುದಿಲ್ಲ. ಹಾಗಾದರೆ ಏನಿದು ಮಾಯೆ. ಇದೇ ಒಂದು ಅದ್ಬುತವಲ್ಲವೇ….. 2) ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬೆಂಬಲಿಸಿ, ವೈಜ್ಞಾನಿಕ … Read more

ಥೈಲ್ಯಾಂಡ್‌ನಲ್ಲಿ ರಶ್ಮಿಕಾ ವಿಜಯ್ ಹನಿಮೂನ್

ವಿಜಯ ದರ್ಪಣ ನ್ಯೂಸ್…… ಥೈಲ್ಯಾಂಡ್‌ನಲ್ಲಿ ರಶ್ಮಿಕಾ ವಿಜಯ್ ಹನಿಮೂನ್ ದಕ್ಷಿಣ ಚಿತ್ರರಂಗದ ದಂಪತಿಗಳಾದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ವಿವಾಹದ ನಂತರ ಅವರ ಮೊದಲ ಫೋಟೋಗಳು ಮತ್ತು ವೀಡಿಯೊಗಳು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ವಿವಾಹದ ನಂತರ ದಂಪತಿಗಳು ತಮ್ಮ ಹನಿಮೂನ್‌ಗಾಗಿ ಥೈಲ್ಯಾಂಡ್‌ನ ಸುಂದರವಾದ ಕೊಹ್ ಸಮುಯಿಗೆ ಹೋಗಿದ್ದು ಅವರು ಅಲ್ಲಿನ ಖಾಸಗಿ ವಿಲ್ಲಾವೊಂದರಲ್ಲಿ ಕೆಲವು ದಿನಗಳ ಕಾಲ ತಂಗಲಿದ್ದಾರೆ, ಮತ್ತು ಈಗ ಅಲ್ಲಿನ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಫೋಟೋದಲ್ಲಿ, … Read more

ಯುಗಾದಿ ಹಬ್ಬಕ್ಕೆ ಸಂಭ್ರಮದ ಹೊಸತೊಡಕು : ಭರ್ಜರಿ ಕುರಿ-ಕೋಳಿ ವ್ಯಾಪಾರ

ವಿಜಯ ದರ್ಪಣ ನ್ಯೂಸ್…. ಯುಗಾದಿ ಹಬ್ಬಕ್ಕೆ ಸಂಭ್ರಮದ ಹೊಸತೊಡಕು : ಭರ್ಜರಿ ಕುರಿ-ಕೋಳಿ ವ್ಯಾಪಾರ ಹುಳಿಯಾರು, ಮಾ 22: ಯುಗಾದಿ ಹಬ್ಬದ ಸಡಗರ ಹಾಗೂ ಹೊಸ ವರ್ಷದ ಸ್ವಾಗತದ ಅಂಗವಾಗಿ ಹುಳಿಯಾರು ಪಟ್ಟಣದಲ್ಲಿ ‘ಹೊಸ ತೊಡಕು’ ಅತ್ಯಂತ ಸಂಭ್ರಮದಿಂದ ನಡೆಯಿತು. ಸಿಹಿ ಹೋಳಿಗೆ ಸವಿದಿದ್ದ ಜನತೆ ಬಯಲು ಸೀಮೆಯ ಸಾಂಪ್ರದಾಯಿಕ ಶೈಲಿಯ ಖಾರವಾದ ಮಾಂಸದೂಟವನ್ನು ಸವಿಯುವ ಮೂಲಕ ಹಬ್ಬವನ್ನು ಆಚರಿಸಿದರು. ಯುಗಾದಿಯ ಮರು ದಿನವನ್ನು ‘ವರ್ಷದ ತೊಡಕು’ ಅಥವಾ ‘ಹೊಸತೊಡಕು’ ಎಂದು ಕರೆಯಲಾಗುತ್ತದೆ ವರ್ಷದ ಆರಂಭದಲ್ಲಿ ಭರ್ಜರಿ ಮಾಂಸದೂಟ … Read more

ವಿಶ್ವಾದ್ಯಂತ ಧುರಂಧರ್ 2 ಸಿನಿಮಾ 500 ಕೋಟಿ ಗಳಿಕೆ

ವಿಜಯ ದರ್ಪಣ ನ್ಯೂಸ್…. ವಿಶ್ವಾದ್ಯಂತ ಧುರಂಧರ್ 2 ಸಿನಿಮಾ 500 ಕೋಟಿ ಗಳಿಕೆ ರಣವೀರ್ ಸಿಂಗ್ ಅವರ ‘ಧುರಂಧರ್ 2’ ಚಿತ್ರ ಬಿಡುಗಡೆಯಾದ ಮೂರನೇ ದಿನ, ಅಂದರೆ ಶನಿವಾರ ಭಾರತದಲ್ಲಿ 113 ಕೋಟಿ ರೂ ಗಳಿಸಿದೆ ಮತ್ತು ಪಾವತಿಸಿದ ಪೂರ್ವ ವೀಕ್ಷಣೆಗಳನ್ನು ಒಳಗೊಂಡಂತೆ ಮೂರು ದಿನಗಳಲ್ಲಿ ಚಿತ್ರದ ಒಟ್ಟು ಕಲೆಕ್ಷನ್ 339.27 ಕೋಟಿ ರೂ. ತಲುಪಿದೆ. ಮಾರ್ಚ್ 19 ರಂದು ಬಿಡುಗಡೆಯಾದ ಈ ಚಿತ್ರವು ವಿಶ್ವಾದ್ಯಂತ 500 ಕೋಟಿ ರೂ. ಗಳಿಸಿದೆ ಮತ್ತು ಮೂರನೇ ದಿನದ ಗಳಿಕೆಯ … Read more

ವಿಶ್ವ ರಕ್ಷಣಾ ಆಂದೋಲನ….. ( GLOBAL PROTECTION MOVEMENT……)

ವಿಜಯ ದರ್ಪಣ ನ್ಯೂಸ್…. ವಿಶ್ವ ರಕ್ಷಣಾ ಆಂದೋಲನ….. ( GLOBAL PROTECTION MOVEMENT……) ಬದುಕಿರುವ ಮತ್ತು ಈಗಲೂ ಚಟುವಟಿಕೆಯಂದಿರುವ, ಶಾಂತಿಗಾಗಿ ನೊಬೆಲ್ ಪ್ರಶಸ್ತಿ ಪಡೆದಿರುವ ಎಲ್ಲರಿಗೂ ಒಂದು ಕಳಕಳಿಯ ಮನವಿ… ಯುದ್ಧ ನಿಲ್ಲಿಸಿ, ಭೂಮಿ ರಕ್ಷಿಸಿ, ಕದನ ವಿರಾಮ ಘೋಷಿಸಿ… ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ನೇತೃತ್ವದಲ್ಲಿ ಯೂನಿಯನ್ ಆಫ್ ಅರ್ಥ್ ( Union of Earth ) ಅಥವಾ ಯೂನಿಯನ್ ಆಫ್ ವರ್ಲ್ಡ್ ( Union of world ) ಎಂಬ ಸಂಘಟನೆ ಸ್ಥಾಪಿಸಿ … Read more

ಈದ್ಗಾ ಮೈದಾನದ ಅಭಿವೃದ್ಧಿಗಾಗಿ ಸರ್ಕಾರದಿಂದ ವಿಶೇಷ ಅನುದಾನ : ಶಾಸಕ ಬಿ.ಎಂ. ರವಿಕುಮಾರ್ 

ವಿಜಯ ದರ್ಪಣ ನ್ಯೂಸ್…. ಈದ್ಗಾ ಮೈದಾನದ ಅಭಿವೃದ್ಧಿಗಾಗಿ ಸರ್ಕಾರದಿಂದ ವಿಶೇಷ ಅನುದಾನ : ಶಾಸಕ ಬಿ.ಎಂ. ರವಿಕುಮಾರ್  ಶಿಡ್ಲಘಟ್ಟ : ನಮ್ಮ ವಿಧಾನಸಭಾ ಕ್ಷೇತ್ರದಲ್ಲಿನ ಮುಸ್ಲಿಂ ಬಾಂಧವರ ಪರವಾಗಿ ಸದನದಲ್ಲಿ ಮಾತನಾಡುವ ಅವಕಾಶ ಸಿಕ್ಕಿತ್ತು, ಇಲ್ಲಿನ ಈದ್ಗಾ ಮೈದಾನದ ಅಭಿವೃದ್ಧಿಗಾಗಿ ಸರ್ಕಾರವನ್ನು ವಿಶೇಷ ಅನುದಾನ ನೀಡುವಂತೆ ಕೋರಿದ್ದೆ,12 ಕೋಟಿ ರೂ.ಗಳ ಅನುದಾನದ ಭರವಸೆ ಸಿಕ್ಕಿದೆ ಎಂದು ತಿಳಿಸಿದರು. ಇದೇ ವೇಳೆ ಶಾಸಕರು ಈದ್ಗಾ ಮೈದಾನಕ್ಕೆ ಆಗಮಿಸಿ ಮುಸ್ಲಿಂ ಬಾಂಧವರಿಗೆ ಹಬ್ಬದ ಶುಭಾಶಯಗಳನ್ನು ಕೋರಿದರು. ಜಮಾ ಮಸೀದಿಯ ಧರ್ಮಗುರುಗಳು … Read more

ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ವರುಣ್ ಗೌಡರ ಸಾಧನೆ ನಮ್ಮ ಮಣ್ಣಿನ ಗುಣವನ್ನು ರಾಷ್ಟ್ರ ಮಟ್ಟದಲ್ಲಿ ಎತ್ತಿ ಹಿಡಿದಂತಾಗಿದೆ: ಶಾಸಕ ಬಿ.ಎನ್. ರವಿಕುಮಾರ್

ವಿಜಯ ದರ್ಪಣ ನ್ಯೂಸ್… ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ವರುಣ್ ಗೌಡರ ಸಾಧನೆ ನಮ್ಮ ಮಣ್ಣಿನ ಗುಣವನ್ನು ರಾಷ್ಟ್ರ ಮಟ್ಟದಲ್ಲಿ ಎತ್ತಿ ಹಿಡಿದಂತಾಗಿದೆ: ಶಾಸಕ ಬಿ.ಎನ್. ರವಿಕುಮಾರ್ ಶಿಡ್ಲಘಟ್ಟ : ಒಬ್ಬ ಸಾಮಾನ್ಯ ಪೊಲೀಸ್ ಅಧಿಕಾರಿಯ ಮಗನಾಗಿ, ಕಠಿಣ ಪರಿಶ್ರಮದಿಂದ ದೇಶದ ಅತ್ಯುನ್ನತ ಪರೀಕ್ಷೆಯಲ್ಲಿ ಸಾಧನೆ ಮಾಡಿರುವುದು ನಮ್ಮ ಮಣ್ಣಿನ ಗುಣವನ್ನು ರಾಷ್ಟ್ರ ಮಟ್ಟದಲ್ಲಿ ಎತ್ತಿ ಹಿಡಿದಂತಾಗಿದೆ ಎಂದು ಶಾಸಕರಾದ ಬಿ.ಎನ್. ರವಿಕುಮಾರ್ ಹರ್ಷ ವ್ಯಕ್ತಪಡಿಸಿದರು. ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಶಾಸಕ ಬಿ.ಎನ್.ರವಿಕುಮಾರ್ ಅವರ ಸ್ವಗೃಹದಲ್ಲಿ “ಕೇಂದ್ರ … Read more

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಿಂದ ಕೆ. ವಿ. ಶ್ರೀನಿವಾಸನ್ , ಕೆ.ಜೆ. ಕುಮಾರ್ ಗೆ ಸಂತಾಪ ಶ್ರದ್ಧಾಂಜಲಿ

ವಿಜಯ ದರ್ಪಣ ನ್ಯೂಸ್……. ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಿಂದ ಕೆ. ವಿ. ಶ್ರೀನಿವಾಸನ್ ಹಾಗೂ ಕೆ.ಜೆ. ಕುಮಾರ್ ಅವರಿಗೆ ಸಂತಾಪ ಶ್ರದ್ಧಾಂಜಲಿ ತಾಂಡವಪುರ ಮಾರ್ಚ್ 21: ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಭವನದಲ್ಲಿ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಈಚೆಗೆ ನಿಧನರಾದ ನಗರದ ಹಿರಿಯ ಪತ್ರಕರ್ತರಾದ ಕೆ.ವಿ.ಶ್ರೀನಿವಾಸನ್ ಹಾಗೂ ಕೆ.ಜೆ.ಕುಮಾರ್ ಶ್ರದ್ಧಾಂಜಲಿ ಅರ್ಪಿಸಿ ಸಂತಾಪ ವ್ಯಕ್ತಪಡಿಸಿದರು ಅಗಲಿದ ಒಡನಾಡಿಗಳ ಸ್ಮರಿಸಿದರು. ಹಿರಿಯ ಪತ್ರಕರ್ತ ಪ್ರಭುರಾಜ್ ಮಾತನಾಡಿ, ಶ್ರೀನಿವಾಸನ್ ಹಾಗೂ ತಮ್ಮ ನಡುವಿನ ಒಡನಾಟ ಸುಮಾರು ೫೫ ವರ್ಷಗಳದ್ದಾಗಿದೆ. ಅವರು … Read more

ಮುಂದಿನ ವರ್ಷದಿಂದ ಬೇರೆ  ತಾಲ್ಲೂಕುಗಳಲ್ಲಿ ಗರಳಪುರಿ ಉತ್ಸವ ನಡೆಸುತ್ತೇವೆ : ಶಾಸಕ ದರ್ಶನ್. ಧ್ರುವನಾರಾಯಣ್

ವಿಜಯ ದರ್ಪಣ ನ್ಯೂಸ್….. ಮುಂದಿನ ವರ್ಷದಿಂದ ಬೇರೆ  ತಾಲ್ಲೂಕುಗಳಲ್ಲಿ ಗರಳಪುರಿ ಉತ್ಸವ ನಡೆಸುತ್ತೇವೆ : ಶಾಸಕ ದರ್ಶನ್. ಧ್ರುವನಾರಾಯಣ್ ತಾಂಡವಪುರ ಮಾರ್ಚ್ 21: ಮುಂದಿನ ವರ್ಷದಿಂದ ಬೇರೆ ಬೇರೆ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಗರಳಪುರಿ ಉತ್ಸವವನ್ನು ನಡೆಸಿಕೊಂಡು ಬರುತ್ತೇವೆ. ಪ್ರಸ್ತುತ ಸಮಯದ ಕೊರತೆ ಇರುವ ಕಾರಣ ತಾಲೂಕಿನಲ್ಲಿ ಆಯೋಜನೆ ಮಾಡಲಾಗಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ ತಿಳಿಸಿದರು. ದಕ್ಷಿಣ ಕಾಶಿ, ನಂಜನಗೂಡಿನ ಗುರುಭವನದಲ್ಲಿ ಶನಿವಾರ ನಂಜನಗೂಡು ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಐತಿಹಾಸಿಕ ಗರಳ ಪುರಿ ಉತ್ಸವ ಶ್ರೀ … Read more

ಕರ್ನಾಟಕ ಜಾಹೀರಾತು ನೀತಿ ಪುನರ್‌ ಪರಿಶೀಲನೆಗೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಒತ್ತಾಯ

ವಿಜಯ ದರ್ಪಣ ನ್ಯೂಸ್…… ಹೊಸ ಜಾಹೀರಾತು ನೀತಿ ಮೂಲಕ ಪತ್ರಿಕೆಗಳ ದಮನಕ್ಕೆ ಮುಂದಾದ ಸರಕಾರʼ ಕರ್ನಾಟಕ ಜಾಹೀರಾತು ನೀತಿ ಪುನರ್‌ ಪರಿಶೀಲನೆಗೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಒತ್ತಾಯ ತಾಂಡವಪುರ ಮಾರ್ಚ್ 21: ರಾಜ್ಯ ಸರಕಾರವು ಜಾರಿಗೆ ತರಲು ಮುಂದಾಗಿರುವ ʻಕರ್ನಾಟಕ ಜಾಹೀರಾತು ನೀತಿ-2026ʼ ವಾರ್ತಾ ಇಲಾಖೆ ಅಧಿಕಾರಿಗಳ ವಕ್ರ ದೃಷ್ಟಿಯ ಹಾಗೂ ಸೇಡಿನ ಮನೋಭಾವ ಒಳಗೊಂಡ ನೀತಿಯಾಗಿದ್ದು, ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಪಾಲಿಗೆ ಮರಣ ಶಾಸನವಾಗಿದೆ. ಪತ್ರಿಕೆಗಳು ನಾಶವಾದರೆ ಪ್ರಜಾಪ್ರಭುತ್ವವೂ ನಾಶವಾಗಲಿದೆ ಎಂಬ ಅರಿವು … Read more