ನಾಳೆ ಬೆಂಗಳೂರು ಕರಗ ಉತ್ಸವಕ್ಕೆ ಚಾಲನೆ

ವಿಜಯ ದರ್ಪಣ ನ್ಯೂಸ್….. ನಾಳೆ ಬೆಂಗಳೂರು ಕರಗ ಉತ್ಸವಕ್ಕೆ ಚಾಲನೆ ಬೆಂಗಳೂರು, ಮಾ.23: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಾಳೆ  ಐತಿಹಾಸಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ವೈಭವದ ಸಂಕೇತವಾಗಿರುವ ಬೆಂಗಳೂರು ಕರಗ ಶತ್ಕೋತ್ಸವ ಈ ಬಾರಿ ಭಕ್ತರ ಭಕ್ತಿ-ಭಾವನೆಗೆ ಸಾಕ್ಷಿಯಾಗಲು ಸಜ್ಜಾಗಿದೆ.ನಾಳೆ ಸಂಜೆ ಧ್ವಜಾರೋಹಣದೊಂದಿಗೆ ಉತ್ಸವಕ್ಕೆ ಅಧಿಕೃತ ಚಾಲನೆ ದೊರೆಯಲಿದೆ. ಮಾರ್ಚ್24ರಿಂದ ಆರಂಭವಾಗುವ ಈ ಮಹೋತ್ಸವವು ಒಟ್ಟು 11 ದಿನಗಳ ಕಾಲ ನಡೆಯಲಿದ್ದು, ಏಪ್ರಿಲ್ 1ರಂದು ಮಧ್ಯರಾತ್ರಿ ನಡೆಯುವ ಕರಗ ಉತ್ಸವವೇ ಪ್ರಮುಖ ಆಕರ್ಷಣೆಯಾಗಲಿದೆ. ಆ ದಿನ ಬ್ರೌಪದಿ … Read more

ಸುತ್ತೂರು ಶ್ರೀಗಳಿಂದ ಶೇಷಾದ್ರಿಪುರಂ ಕಾಲೇಜಿನ ನೂತನ ಕಟ್ಟಡಗಳ ಉದ್ಘಾಟನೆ

ವಿಜಯ ದರ್ಪಣ ನ್ಯೂಸ್….. ಸುತ್ತೂರು ಶ್ರೀಗಳಿಂದ ಶೇಷಾದ್ರಿಪುರಂ ಕಾಲೇಜಿನ ನೂತನ ಕಟ್ಟಡಗಳ ಉದ್ಘಾಟನೆ ಮೈಸೂರು: ಶೇಷಾದ್ರಿಪುರಂ ಎಜುಕೇಶನಲ್ ಟ್ರಸ್ಟ್ ಅಡಿಯಲ್ಲಿ ಸ್ಥಾಪಿತವಾದ ಮೈಸೂರು ಶೇಷಾದ್ರಿಪುರಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿನ ನೂತನ ಕಟ್ಟಡಗಳನ್ನು ಕಡಕೋಳ ಕೈಗಾರಿಕಾ ಪ್ರದೇಶದಲ್ಲಿ ಉದ್ಘಾಟಿಸಲಾಯಿತು. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಶೇಷಾದ್ರಿಪುರಂ ಟ್ರಸ್ಟ್‌ ನ ಸಂಸ್ಥಾಪಕರಾದ ಆನಂದಮ್ಮ ಮತ್ತು ಸೀತಮ್ಮ ಅವರ ದೂರದೃಷ್ಟಿಯನ್ನೂ ಪ್ರಶಂಸಿಸಿದರು. ಶಿಕ್ಷಣವು ಬೆಳಕಿನಂತೆ ಹರಡಬೇಕು. ಕಂಪ್ಯೂಟರ್ ಸಂಬಂಧಿತ ಶಾಖೆಗಳತ್ತ ಹೆಚ್ಚುತ್ತಿರುವ ಒಲವು ಸಾಮಾಜಿಕ ಅಸಮತೋಲನಕ್ಕೆ ಕಾರಣವಾಗಬಹುದು. ವಿದ್ಯಾರ್ಥಿಗಳು ಸ್ವತಂತ್ರವಾಗಿ … Read more

ಸ್ವಸ್ಥ ಮೈಸೂರು’ ಅಭಿಯಾನಕ್ಕೆ ರಾಜಮಾತೆ ಪ್ರಮೋದಾದೇವಿ ಒಡೆಯರ್‌ ಚಾಲನೆ

ವಿಜಯ ದರ್ಪಣ ನ್ಯೂಸ್….. ಸ್ವಸ್ಥ ಮೈಸೂರು’ ಅಭಿಯಾನಕ್ಕೆ ರಾಜಮಾತೆ ಪ್ರಮೋದಾದೇವಿ ಒಡೆಯರ್‌ ಚಾಲನೆ ತಾಂಡವಪುರ ಮಾರ್ಚ್ 23 ಮೈಸೂರಿನ: ಶಾರದಾವಿಲಾಸ ಫಾರ್ಮಸಿ ಕಾಲೇಜಿನಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಫೌಂಡೇಶನ್, ಶಾರದಾವಿಲಾಸ ಶಿಕ್ಷಣ ಸಂಸ್ಥೆಗಳು ಹಾಗೂ ಸ್ವಸ್ಥ ಮೈಸೂರು ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ‘ಸ್ವಸ್ಥ ಮೈಸೂರು’ ಆರೋಗ್ಯ ಜಾಗೃತಿ ಮತ್ತು ಪ್ರಚಾರ ಕಾರ್ಯಕ್ರಮಕ್ಕೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಚಾಲನೆ ನೀಡಿದರು. ಬಳಿಕ ಅವರು ಮಾತನಾಡಿ, ಸಾಂಸ್ಕೃತಿಕನಗರಿ ಮೈಸೂರನ್ನು ರೋಗಮುಕ್ತ ಹಾಗೂ ಆರೋಗ್ಯಕರ ನಗರವನ್ನಾಗಿಸಲು ‘ಸ್ವಸ್ಥ ಮೈಸೂರು ಅಭಿಯಾನ’ ಮಹತ್ವದ ಹೆಜ್ಜೆಯಾಗಿದೆ. … Read more

ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ  ನಡೆದ ಶ್ರೀರೇಣುಕಾದೇವಿ ಎಲ್ಲಮ್ಮ  ಹೂವಿನ ಕರಗ ಮಹೋತ್ಸವ 

ವಿಜಯ ದರ್ಪಣ ನ್ಯೂಸ್…. ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ  ನಡೆದ ಶ್ರೀರೇಣುಕಾದೇವಿ ಎಲ್ಲಮ್ಮ  ಹೂವಿನ ಕರಗ ಮಹೋತ್ಸವ  ಶಿಡ್ಲಘಟ್ಟ : ನಗರದಲ್ಲಿ ಶ್ರೀರೇಣುಕಾದೇವಿ ಎಲ್ಲಮ್ಮ ಹೂವಿನ ಕರಗವನ್ನು ಆಚರಿಸಲಾಯಿತು,ಶಕ್ತಿ ಆರಾಧನೆಯ ಧೋತಕವಾದ ಆಹ್ವಾನಿಸಲು ಕರಗವನ್ನು ಮನೆಗಳ ಮುಂದೆ ಸಾರಿಸಿ ರಂಗೋಲಿಯನ್ನಿಟ್ಟಿದ್ದರು. ಎಲಮ್ಮದೇವಿ ದೇಗುಲದ ಬಳಿ ನೂರಾರು ಭಕ್ತರು, ಪೂಜೆ, ಕರಗ ಹೊರುವುದಕ್ಕೆ ಸಾಕ್ಷಿಯಾದರು. ಪ್ರತಿಯೊಂದು ಬೀದಿ, ಪ್ರಮುಖ ರಸ್ತೆಗಳು ಎಲ್ಲವನ್ನೂ ಹಾದು ಬರುವುದು ಈ ಕರಗದ ವಿಶೇಷ ಹಾಗಾಗಿ ಪ್ರತಿಯೊಬ್ಬ ಮನೆಯವರೂ ಆರತಿ ಎತ್ತಿ, ಹೂಗಳನ್ನು ಅರ್ಪಿಸುತ್ತಾರೆ. ನಗರದಲ್ಲಿ … Read more

ಹೆಜ್ಜೆಗೆ ಗ್ರಾಮದ ಬಳಿ ಕಪಿಲ ನದಿ ದಡದಲ್ಲಿ 46 ಮರಗಳ ಹನನ ಖಂಡಿಸಿ ಬೃಹತ್ ಪ್ರತಿಭಟನೆ

ವಿಜಯ ದರ್ಪಣ ನ್ಯೂಸ್….. ಹೆಜ್ಜೆಗೆ ಗ್ರಾಮದ ಬಳಿ ಕಪಿಲ ನದಿ ದಡದಲ್ಲಿ 46 ಮರಗಳ ಹನನ ಖಂಡಿಸಿ ಬೃಹತ್ ಪ್ರತಿಭಟನೆ ತಾಂಡವಪುರ ಮಾರ್ಚ್ 23: ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಹೆಜ್ಜಿಗೆ ಗ್ರಾಮದ ಬಳಿ ಕಪಿಲಾ ನದಿ ದಂಡೆಯ ಮೇಲೆ 46 ಬೃಹತ್ ಮರಗಳನ್ನು ಅಕ್ರಮವಾಗಿ ಕಡಿದಿರುವ ಘಟನೆ ವಿರುದ್ಧ ವಿವಿಧ ಸಂಘಟನೆಗಳಿಂದ ಅರಣ್ಯ ಭವನದ ಮುಂದೆ ಬೃಹತ್ ಪ್ರತಿಭಟನೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಪರಿಸರಕ್ಕಾಗಿ … Read more

ಗ್ಯಾಸ್ ಬುಕ್ ಮಾಡಿದ್ರೂ ಸಿಲಿಂಡರ್ ಸಿಗದೇ ಇರೋದಕ್ಕೆ  ಗ್ರಾಹಕರ ಆಕ್ರೋಶ

ವಿಜಯ ದರ್ಪಣ ನ್ಯೂಸ್…… ಗ್ಯಾಸ್ ಬುಕ್ ಮಾಡಿದ್ರೂ ಸಿಲಿಂಡರ್ ಸಿಗದೇ ಇರೋದಕ್ಕೆ  ಗ್ರಾಹಕರ ಆಕ್ರೋಶ ಶಿಡ್ಲಘಟ್ಟ : ಗ್ರಾಹಕರು ಗ್ಯಾಸ್ ಬುಕ್ ಮಾಡಿ ವಾರ, ಹತ್ತು ದಿನಗಳಾಗಿದೆ ಆದರೂ ಸಿಲಿಂಡರ್ ಸಿಗುತ್ತಿಲ್ಲ ,ಸಿಲಿಂಡ‌ರ್ ಸಿಗದಿದ್ದರೆ ನಾವು ಮಾಡೋದಾದರೂ ಏನು? ಎಂದು ಆಕ್ರೋಶ ವ್ಯಕ್ತಪಡಿಸಿದರು. ನಗರದ ಶಿಡ್ಲಘಟ್ಟ-ದಿಬ್ಬೂರಹಳ್ಳಿ ಮಾರ್ಗದಲ್ಲಿರುವ ವೆಂಕಟೇಶ್ವರ ಗ್ಯಾಸ್‌ ಏಜೆನ್ಸಿ ಬಳಿ ಬೆಳಗ್ಗೆಯೆ ನೂರಾರು ಮಂದಿ ಗ್ಯಾಸ್ ಬುಕ್ ಹಿಡಿದು ಸಿಲಿಂಡರ್‌ಗಾಗಿ ಕಾದರಾದರೂ ಸಾಕಷ್ಟು ಮಂದಿಗೆ ಸಿಲಿಂಡ‌ರ್ ಸಿಗಲಿಲ್ಲ, ಸಿಲಿಂಡರ್‌ಗಾಗಿ ಗ್ರಾಹಕರು ಗ್ಯಾಸ್ ಏಜೆನ್ಸಿ ಬಳಿ … Read more

ಜಿಲ್ಲಾಡಳಿತ ಭವನದಲ್ಲಿ ದೇವರ ದಾಸಿಮಯ್ಯ ಜಯಂತಿ ಆಚರಣೆ

ವಿಜಯ ದರ್ಪಣ ನ್ಯೂಸ್…. ಜಿಲ್ಲಾಡಳಿತ ಭವನದಲ್ಲಿ ದೇವರ ದಾಸಿಮಯ್ಯ ಜಯಂತಿ ಆಚರಣೆ ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮಾ. 23 : ವಚನಕಾರ ‘ದೇವರ ದಾಸಿಮಯ್ಯ ಅವರ ಜಯಂತಿ ಅಂಗವಾಗಿ ಜಿಲ್ಲಾಧಿಕಾರಿ ಡಾ. ಕೆ.ಎನ್ ಅನುರಾಧ ಅವರು ದೇವರ ದಾಸಿಮಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಗೌರವ ನಮನ ಸಲ್ಲಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಜಯಂತಿ … Read more

ಬೆಟ್ಟಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲ ಗ್ರಾಮಗಳ ಗ್ರಾಮಸ್ಥರಿಂದ ದೇವನಹಳ್ಳಿ ಪುರಸಭೆಗೆ ಸೇರಿಸದಂತೆ ಮನವಿ 

ವಿಜಯ ದರ್ಪಣ ನ್ಯೂಸ್…… ಬೆಟ್ಟಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲ ಗ್ರಾಮಗಳ ಗ್ರಾಮಸ್ಥರಿಂದ ದೇವನಹಳ್ಳಿ ಪುರಸಭೆಗೆ ಸೇರಿಸದಂತೆ ಮನವಿ  ದೇವನಹಳ್ಳಿ: ತಾಲೂಕಿನಲ್ಲಿ ಭೂಮಿಯ ಬೆಲೆ ಗಗನಕ್ಕೇರಿದ ಹಿನ್ನೆಲೆ ಭೂಮಾಫಿಯಾ ಮಾಡಲು 2023 ರಲ್ಲಿ ಸಚಿವರು ಆದೇಶ ಮಾಡಿರುವುದನ್ನು ಇಟ್ಟುಕೊಂಡು ಪ್ರಸ್ತುತ ತಡಿ ಭೂಮಿಯನ್ನು ಲಪಾಟಯಿಸುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಅಂಬೇಡ್ಕರ್ ಸೇನೆಯ ತಾಲ್ಲೂಕು ಅಧ್ಯಕ್ಷ ರಾಯಸಂದ್ರ ಸೋಮಶೇಖ‌ರ್ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ಪುರಸಭೆಯ ಮುಖ್ಯಾಧಿಕಾರಿಗಳಿಗೆ ರಾಯಸಂದ್ರ, ಬೆಟ್ಟಕೋಟೆ, ಬಾಲದಿಮ್ಮನಹಳ್ಳಿ ಗ್ರಾಮಗಳನ್ನು ನಗರಸಭೆಗೆ ಸೇರ್ಪಡೆ ಮಾಡಬಾರದು ಎಂದು ಮನವಿ … Read more

ಮಲ್ಲೆಪುರ ಗ್ರಾಮದ ಬಡಜನರ ಜಮೀನು ನುಂಗಲು ಸಂಚು :ಬಲಾಡ್ಯರಿಂದ ಅಕ್ರಮ ದಾಖಲೆ ಸೃಷ್ಟಿ ಅಧಿಕಾರಿಗಳ ಶಾಮೀಲು

ವಿಜಯ ದರ್ಪಣ ನ್ಯೂಸ್….. ಮಲ್ಲೆಪುರ ಗ್ರಾಮದ ಬಡಜನರ ಜಮೀನು ನುಂಗಲು ಸಂಚು :ಬಲಾಡ್ಯರಿಂದ ಅಕ್ರಮ ದಾಖಲೆ ಸೃಷ್ಟಿ ಅಧಿಕಾರಿಗಳ ಶಾಮೀಲು ದೇವನಹಳ್ಳಿ: ಮಲ್ಲೇಪುರ ಗ್ರಾಮಸ್ಥರಿಂದ ಜಮೀನಿಗಾಗಿ ಹೋರಾಟ ಮಲ್ಲೇಪುರ ಗ್ರಾಮದ ಜಮೀನಿನ ಮೇಲೆ ಅಕ್ರಮ ದಾಖಲೆಗಳನ್ನು ಸೃಷ್ಟಿಸಿ ಬಲಾಡ್ಯ ಭೂಗಳ್ಳರ ಹೆಸರಿಗೆ ಮಾಡಲು ಹೊರಟಿರುವ ಅಧಿಕಾರಿಗಳು, ಸೂಕ್ತ ಕ್ರಮ ವಹಿಸಲು ತಹಸೀಲ್ದಾರ್ಗೆ ಮನವಿ ನೀಡಿದ್ದೇವೆ ಎಂದು ಬಹುಜನ ಸಮಾಜ ಪಕ್ಷದ ತಾಲೂಕು ಅಧ್ಯಕ್ಷ ಎಂ.ಡಿ. ರಾಮಾಂಜಿನಪ್ಪ ತಿಳಿಸಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿ … Read more

ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೆರವು ಹರಿಸಬೇಕು: ಕಿರಣ್ 

ವಿಜಯ ದರ್ಪಣ ನ್ಯೂಸ್…… ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೆರವು ಹರಿಸಬೇಕು: ಕಿರಣ್  ಕೋಲಾರ,ಮಾ.22: ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳ ಪ್ರಗತಿ ಮತ್ತು ಬಲವರ್ಧನೆಗೆ ಸಂಘ ಸಂಸ್ಥೆಗಳ ಸಹಕಾರ ಅಗತ್ಯವಾಗಿದ್ದು, ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಹೃದಯವಂತಿಕೆ ಮಾತ್ರವಲ್ಲ ಅದು ಪ್ರತಿಯೊಬ್ಬರ ಕರ್ತವ್ಯವೂ ಆಗಬೇಕು ಎಂದು ಭಾರತ್ ಸುಧಾರ್ ಸಂಸ್ಥೆಯ ಕಿರಣ್ ಅಭಿಪ್ರಾಯಪಟ್ಟರು. ಶಿಕ್ಷಕ ಗೆಳೆಯರ ಬಳಗದ ಅಶ್ರಯದಲ್ಲಿ ನಗರದಲ್ಲಿ ಕೋಲಾರ ಜಿಲ್ಲೆಯ ಐವತ್ತು ಸರ್ಕಾರಿ ಶಾಲೆಗಳಿಗೆ ತಮ್ಮ ಸಂಸ್ಥೆಯಿಂದ ಗ್ರೀನ್ ಬೋರ್ಡ್ ವಿತರಿಸಿ … Read more