ಸೋನಮ್ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಮತ್ತು ದಪ್ಪ ಚರ್ಮದ ಕೇಂದ್ರ ಸರ್ಕಾರ : ಎಚ್ ಸಿ ಮಹದೇವಪ್ಪ

ವಿಜಯ ದರ್ಪಣ ನ್ಯೂಸ್…. ಸೋನಮ್ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಮತ್ತು ದಪ್ಪ ಚರ್ಮದ ಕೇಂದ್ರ ಸರ್ಕಾರ : ಎಚ್ ಸಿ ಮಹದೇವಪ್ಪ ತಾಂಡವಪುರ ಜುಲೈ 17 ಪ್ರಜಾಪ್ರಭುತ್ವ ದೇಶವಾದ ಭಾರತದ ಇತಿಹಾಸದಲ್ಲಿ ಹಲವು ಕಾರಣಗಳಿಗಾಗಿ ಮಹಾನ್ ಎನಿಸುವ ವಿಷಯಾಧಾರಿತ ಹೋರಾಟಗಳು ಜರುಗಿವೆ. ಮೊದಲು ಸ್ವಾತಂತ್ರ್ಯಕ್ಕಾಗಿ ನಂತರ ಸಮಾನತೆಗಾಗಿ, ದುಡಿಮೆಯ ಹಕ್ಕಿಗಾಗಿ, ಕುಡಿಯುವ ನೀರಿಗಾಗಿ ಮತ್ತು ಶೋಷಣೆಗಳ ವಿರುದ್ಧ ಹತ್ತು ಹಲವು ಹೋರಾಟಗಳು ನಡೆದಿವೆ ಮತ್ತು ಈಗಲೂ ನಡೆಯುತ್ತಿವೆ. ಈ ಬಗ್ಗೆ ಕೇಂದ್ರ ಬಿಜೆಪಿ ಸರ್ಕಾರ ಚಕಾರ ಎತ್ತುತ್ತಿಲ್ಲ … Read more

4 ಕೋಟಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನಿಮ್ಮ ಸೇವೆಗೆ ನಾನು ಸದಾ ಬದ ಶಾಸಕ ದರ್ಶನ್

ವಿಜಯ ದರ್ಪಣ ನ್ಯೂಸ್….. 4 ಕೋಟಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನಿಮ್ಮ ಸೇವೆಗೆ ನಾನು ಸದಾ ಬದ ಶಾಸಕ ದರ್ಶನ್ ಧ್ರುವನಾರಾಯಣ್ ತಾಂಡವಪುರ ಜುಲೈ 17- ಗ್ರಾಮೀಣ ಭಾಗದ ಅಭಿವೃದ್ಧಿ ಪಡಿಸಲು ಹಾಗೂ ಗ್ರಾಮೀಣ ಭಾಗದ ಜನರ ಸೇವೆಗೆ ನಾನುಸದಾ ಬದ್ದನಾಗಿರುತ್ತೆನೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಹೇಳಿದರು. ನಂಜನಗೂಡು ವಿಧಾನಸಭಾ ಕ್ಷೇತ್ರಕ್ಕೆ ಸೇರುವ ದೇಪೆಗೌಡನಪುರ ಗ್ರಾಮದಿಂದ ಚಿಕ್ಕಚನ್ನಪ್ಪ ದೇವಸ್ಥಾನದ ವರಗೆ 4 ಕೋಟಿ ರೂ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿ ಹೆಡಿಯಾಲ ಗ್ರಾಮದಲ್ಲಿ … Read more

ರೇಷ್ಮೆಗೂಡು ಮಾರುಕಟ್ಟಿಗೆ ನ್ಯಾಯಾದಿಶರು ಭೇಟಿ

ವಿಜಯ ದರ್ಪಣ ನ್ಯೂಸ್ …… ರೇಷ್ಮೆಗೂಡು ಮಾರುಕಟ್ಟಿಗೆ ನ್ಯಾಯಾದಿಶರು ಭೇಟಿ ಶಿಡ್ಲಘಟ್ಟ : ನಗರದ  ರೇಷ್ಮೆಗೂಡು ಮಾರುಕಟ್ಟಿಗೆ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಮೊಹ್ಮದ್ ರೋಷನ್ ಭೇಟಿ ನೀಡಿ, ಮಾರುಕಟ್ಟೆಯ ವಿವಿಧ ವಿಭಾಗಗಳನ್ನು ಪರಿಶೀಲಿಸಿದರು. ಗೂಡುಮಾರುಕಟ್ಟಿಗೆ ಮೊದಲ ಬಾರಿಗೆ ಭೇಟಿ ನೀಡಿದ ನ್ಯಾಯಾಧೀಶರು, ಹರಾಜು ಪ್ರಕ್ರಿಯೆ, ಗೂಡುಗಳ ಖರೀದಿ-ಮಾರಾಟ ವ್ಯವಸ್ಥೆ, ರೈತರಿಗೆ ಒದಗಿಸಲಾಗುತ್ತಿರುವ ಸೌಕರ್ಯ ಹಾಗೂ ಕಾರ್ಮಿಕರ ಕೆಲಸದ ಪರಿಸ್ಥಿತಿಯ ಬಗ್ಗೆ ಅಧಿಕಾರಿಗಳಿಂದ ವಿವರ ಪಡೆದರು. ಪ್ರತಿನಿತ್ಯ ನಡೆಯುವ ವಹಿವಾಟಿನ ಸ್ವರೂಪದ ಬಗ್ಗೆಯೂ ಚರ್ಚಿಸಿದರು,ದೂರದ ಗ್ರಾಮಗಳಿಂದ … Read more

ಜ್ಞಾನ ಹರಡುವಲ್ಲಿ ವಚನಗಳ ಕೊಡುಗೆ ಅನನ್ಯ: ಸಾಹಿತಿ ಪ್ರೊ.ಜಯಶ್ರೀ ಅಬ್ಬಿಗೇರಿ

ವಿಜಯ ದರ್ಪಣ ನ್ಯೂಸ್…. ಅಮಾವಾಸ್ಯೆ ಅನುಭಾವ ಗೋಷ್ಠಿ ಜ್ಞಾನ ಹರಡುವಲ್ಲಿ ವಚನಗಳ ಕೊಡುಗೆ ಅನನ್ಯ: ಸಾಹಿತಿ ಪ್ರೊ.ಜಯಶ್ರೀ ಅಬ್ಬಿಗೇರಿ ಬೆಳಗಾವಿ: 12ನೇ ಶತಮಾನದ ಶರಣರ ವಚನಗಳು ಸಮಾಜಕ್ಕೆ ನೈತಿಕ ಶಿಕ್ಷಣ ನೀಡುತ್ತವೆ. ಮನದ ಕಲ್ಮಶವನ್ನು ನಿವಾರಿಸಿ ಜ್ಞಾನವನ್ನು ಹರಡುವಲ್ಲಿ ವಚನಗಳ ಕೊಡುಗೆ ಅನನ್ಯವಾಗಿದೆ’ ಎಂದು ಸಾಹಿತಿ ಪ್ರೊ. ಜಯಶ್ರೀ ಅಬ್ಬಿಗೇರಿ ಹೇಳಿದರು. ಇಲ್ಲಿನ ಶಿವಬಸವ ನಗರದ ಲಿಂಗಾಯತ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಹಮ್ಮಿಕೊಂಡಿದ್ದ ಅಮಾವಾಸ್ಯೆ ಅನುಭಾವ ಗೋಷ್ಠಿಯಲ್ಲಿ ‘ವಚನಗಳಲ್ಲಿ ವ್ಯಕ್ತಿತ್ವ ವಿಕಸನ ಪರಿಕಲ್ಪನೆ’ … Read more

ನಗರ ಭೂ ಸಾರಿಗೆ ನಿರ್ದೇಶನಾಲಯದ ಅಧಿಕಾರಿಗಳೊಂದಿಗೆ ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ ಸಭೆ

ವಿಜಯ ದರ್ಪಣ ನ್ಯೂಸ್…. ನಗರ ಭೂ ಸಾರಿಗೆ ನಿರ್ದೇಶನಾಲಯದ ಅಧಿಕಾರಿಗಳೊಂದಿಗೆ ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ ಸಭೆ ಬೆಂಗಳೂರು ಜುಲೈ 16: ನಗರಗಳ ಸುಸ್ಥಿರ ಹಾಗೂ ಸಮಗ್ರ ಸಾರ್ವಜನಿಕ ಭೂ ಸಾರಿಗೆ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಾರ್ಯಸಾಧ್ಯತಾ ವರದಿ, ಹೊಸ ಬಸ್ ನಿಲ್ದಾಣಗಳ ನಿರ್ಮಾಣ, ಸಂಚಾರ ನಿರ್ವಹಣಾ ವ್ಯವಸ್ಥೆ (ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್), ವಿದ್ಯುತ್ ಚಾಲಿತ ವಾಹನಗಳ ಚಾರ್ಜಿಂಗ್ ಕೇಂದ್ರಗಳ ವಿಸ್ತರಣೆ ಸೇರಿದಂತೆ ವಿವಿಧ ಯೋಜನೆಗಳ ಪ್ರಗತಿ ಕುರಿತು ಅಧಿಕಾರಿಗಳೊಂದಿಗೆ ಇಂದು ವಿಧಾನಸೌಧದ ತಮ್ಮ ಕಚೇರಿಯಲ್ಲಿ … Read more

ಏಕೆ ಹೀಗೆ ನಮ್ಮ ನಡುವೆ…….

ವಿಜಯ ದರ್ಪಣ ನ್ಯೂಸ್…. ಏಕೆ ಹೀಗೆ ನಮ್ಮ ನಡುವೆ……. ಲೇಖನ ವಿವೇಕಾನಂದ ಎಚ್ ಕೆ  ತಾಯಿಯ ಎದೆ ಹಾಲು ಕುಡಿದು, ಈ ನೆಲದ ಗಾಳಿ ನೀರು ಸೇವಿಸಿ, ತಂದೆಯ ತೋಳುಗಳಲ್ಲಿ, ಅಕ್ಕ ಅಣ್ಣನ ನೆರಳಲ್ಲಿ, ಶಿಕ್ಷಕರ ಮಾರ್ಗದರ್ಶನದಲ್ಲಿ ಮುದ್ದಿನಿಂದ ಬೆಳೆವ ಮಗು ಮನುಷ್ಯನಾಗದೆ ರಾಕ್ಷಸನನ್ನೂ ಮೀರಿದ ರಕ್ಕಸತನದಿಂದ ವರ್ತಿಸುತ್ತಿರುವುದು ಏಕೆ…… ಇತ್ತೀಚೆಗೆ ಅತ್ಯಂತ ಕ್ರೌರ್ಯ – ಹೇಯ – ಬರ್ಬರವಾಗಿ ಕೊಲೆಗಳಾಗುತ್ತಿರುವ – ಕೊಲ್ಲುತ್ತಿರುವ ಘಟನೆಗಳು ಭಾರತದ ಬೇರೆ ಬೇರೆ ಕಡೆಗಳಿಂದ ವರದಿಯಾಗುತ್ತಿದೆ. 50 ಬಾರಿ ತಿವಿದ, … Read more

ಜಯದ ಮೊದಲ ಹೆಜ್ಜೆ ಧೈರ್ಯ…

ವಿಜಯ ದರ್ಪಣ ನ್ಯೂಸ್…. ಜಯದ ಮೊದಲ ಹೆಜ್ಜೆ ಧೈರ್ಯ… ಲೇಖನ: ಜಯಶ್ರೀ .ಜೆ .ಅಬ್ಬಿಗೇರಿ    ಪ್ರಸಿದ್ಧ ಲೇಖಕಿ, ರಾಜಕೀಯ ಕಾರ್ಯಕರ್ತೆ ಮತ್ತು ಉಪನ್ಯಾಸಕಿಯಾಗಿ ಜಗತ್ತಿನಾದ್ಯಂತ ಲಕ್ಷಾಂತರ ವಿಕಲಚೇತನರಿಗೆ ಧೈರ್ಯದ ಸಂಕೇತವಾಗಿರುವ ಹೆಲೆನ್ ಕೆಲ್ಲರ್ ಜೀವನದ ಹಾದಿ ತುಂಬಾ ಕಠಿಣವಾಗಿತ್ತು. ಅವರು ಕೇವಲ ೧೯ ತಿಂಗಳ ಮಗುವಾಗಿದ್ದಾಗ ತೀವ್ರ ಜ್ವರದ ಕಾರಣದಿಂದಾಗಿ ತಮ್ಮ ದೃಷ್ಟಿ ಮತ್ತು ಕೇಳುವ ಸಾಮರ್ಥ್ಯವನ್ನು ಕಳೆದುಕೊಂಡರು. ಇಂಥ ಪರಿಸ್ಥಿತಿಯಲ್ಲಿ ಅವರಿಗೆ ಮಾತು ಕಲಿಯುವುದು ಸಹ ಅಸಾಧ್ಯವಾಗಿತ್ತು. ಸುತ್ತಲಿನ ಸಮಾಜದೊಂದಿಗೆ ಸಂಪರ್ಕವೇ ಇಲ್ಲದೇ ಕತ್ತಲೆಯಲ್ಲಿ … Read more

ಪಾಲಿಕೆಯಲ್ಲಿ ಮೈತ್ರಿ ಅಭ್ಯರ್ಥಿ ಗೆಲುವಿಗೆ ಸಜ್ಜಾಗೋಣ: ಎಸ್.ಬಿ.ಎಂ.ಮಂಜು

ವಿಜಯ ದರ್ಪಣ ನ್ಯೂಸ್…. ಪಾಲಿಕೆಯಲ್ಲಿ ಮೈತ್ರಿ ಅಭ್ಯರ್ಥಿ ಗೆಲುವಿಗೆ ಸಜ್ಜಾಗೋಣ : ಎಸ್.ಬಿ.ಎಂ.ಮಂಜು ತಾಂಡವಪುರ ಜುಲೈ 16 ಮುಂಬರುವ ಮೈಸೂರು ನಗರಪಾಲಿಕೆ ಚುನಾವಣೆಯಗಳಲ್ಲಿಯೂ ಮೈತ್ರಿ ಅಭ್ಯರ್ಥಿಗಳ ಗೆಲುವಿಗೆ ಎಲ್ಲರೂ ಇಂದಿನಿಂದಲೇ ಸಂಘಟಿತರಾಗೋಣ ಎಂದು ಮಹಾನಗರಪಾಲಿಕೆ ಮಾಜಿ ಸದಸ್ಯ ಹಾಗೂ ಜೆಡಿಎಸ್ ನಗರಾಧ್ಯಕ್ಷ ಎಸ್.ಬಿ.ಎಂ.ಮಂಜು ತಿಳಿಸಿದರು. ವಿಜಯನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಾಮರಾಜ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ.20ರ ಅಧ್ಯಕ್ಷ, ಉಪಾಧ್ಯಕ್ಷರಿಗೆ ನೇಮಕಾತಿ ಪತ್ರ ವಿತರಿಸಿ ಮಾತನಾಡಿದರು. ಜಾತ್ಯಾತೀತ ಜನತಾದಳ ಪಕ್ಷ ಜನರ ಸಾಮಾನ್ಯರಿಗೆ ನೇರವಾಗಿ ಸಿಗುವ … Read more

ರಾಹುಲ್ ಗಾಂಧಿ ಅವರನ್ನು ಭೇಟಿಯಾದ  ಸಿಎಂ ಡಿಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ 

ವಿಜಯ ದರ್ಪಣ ನ್ಯೂಸ್… ರಾಹುಲ್ ಗಾಂಧಿ ಅವರನ್ನು ಭೇಟಿಯಾದ  ಸಿಎಂ ಡಿ ಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ  ದೆಹಲಿ ಜುಲೈ 16 : ಲೋಕಸಭೆಯ ವಿರೋಧ ಪಕ್ಷದ ನಾಯಕ  ರಾಹುಲ್ ಗಾಂಧಿಯವರ ದೆಹಲಿ ನಿವಾಸದಲ್ಲಿ ಇಂದು ರಾಜ್ಯದ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು ಮಾಜಿ  ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಪಕ್ಷದ ಮುಖಂಡರುಗಳು ರಾಹುಲ್ ಗಾಂಧಿ ರವರನ್ನು ಭೇಟಿ ಮಾಡಿ ಸಂಪುಟ ವಿಸ್ತರಣೆ ಬಗ್ಗೆ ಮಾತುಕತೆ ನಡೆಸಿದರು ಎಂದು ತಿಳಿದುಬಂದಿದೆ.. ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ … Read more

ಆಷಾಢ ಮಾಸದ ಪ್ರಯುಕ್ತ ಚಾಮುಂಡಿ ಬೆಟ್ಟದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

ವಿಜಯ ದರ್ಪಣ ನ್ಯೂಸ್.… ಆಷಾಢ ಮಾಸದ ಪ್ರಯುಕ್ತ ಚಾಮುಂಡಿ ಬೆಟ್ಟದಲ್ಲಿಬಿಗಿ ಪೊಲೀಸ್ ಬಂದೋಬಸ್ತ್ ತಾಂಡವಪುರ ಜುಲೈ 16 ಆಶಾಡ ಮಾಸ ಮೊದಲನೇ ಶುಕ್ರವಾರದ, ಪ್ರಯುಕ್ತ ಪೊಲೀಸ್ ಆಯುಕ್ತೆ ಶ್ರೀಮತಿ ಸೀಮಾ ಲಾಟ್ಕರ್ IPS ರವರ ನೇತೃತ್ವದಲ್ಲಿ ಸಿಬ್ಬಂದಿಗಳಿಗೆ ಕರ್ತವ್ಯ ಬ್ರಿಫಿಂಗ್ ಮಾಡಲಾಯಿತು. ಮೊದಲನೇ ಶುಕ್ರವಾರದ ಪ್ರಯುಕ್ತ ಆದಿಶಕ್ತಿ ಚಾಮುಂಡೇಶ್ವರಿ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ವಿನಯಪೂರ್ವಕವಾಗಿ ನೆರವಾಗಲು ಹಾಗೂ ಶಿಸ್ತು, ಪ್ರಾಮಾಣಿಕತೆಯಿಂದ ಜನಸ್ನೇಹಿ ಕರ್ತವ್ಯ ನಿರ್ವಹಿಸಲು ಈ ಸಂದರ್ಭದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದರು . … Read more