ಬಸವಾಪಟ್ಟಣ ಬಳಿ ಜೂಜಾಟ 7ಮಂದಿ ಬಂಧನ,2 ಲಕ್ಷ ರೂ.ಗಳ ಜಪ್ತಿ

ವಿಜಯ ದರ್ಪಣ ನ್ಯೂಸ್….. ಬಸವಾಪಟ್ಟಣ ಬಳಿ ಜೂಜಾಟ 7ಮಂದಿ ಬಂಧನ,2 ಲಕ್ಷ ರೂ.ಗಳ ಜಪ್ತಿ  ಶಿಡ್ಲಘಟ್ಟ : ತಾಲ್ಲೂಕಿನ ಬಸವಾಪಟ್ಟಣ ಬಳಿ ನಡೆಯುತ್ತಿದ್ದ ಇಸ್ಪೀಟ್ ಜೂಜಾಟದ ಅಡ್ಡೆಯ ಮೇಲೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ (ಎಸ್‌.ಪಿ.)ಅವರ ವಿಶೇಷ ತಂಡ ಗುಪ್ತ ಮಾಹಿತಿ ಸಂಗ್ರಹಿಸಿ ದಿಢೀ‌ರ್ ದಾಳಿ ನಡೆಸಿ,7 ಮಂದಿಯನ್ನು ಬಂಧಿಸಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಬಸವಾಪಟ್ಟಣದ ಬಳಿ ಜೂಜಾಟದ ಅಡ್ಡೆಯಲ್ಲಿ ಪಣಕ್ಕೆ ಇಟ್ಟಿದ್ದ 2,02,800 ರೂ.ಗಳ ನಗದು, 7ಮೊಬೈಲ್‌ ಫೋನ್ ಹಾಗೂ 3 ದ್ವಿಚಕ್ರವಾಹನ ವಶಪಡಿಸಿಕೊಂಡಿದ್ದಾರೆ. ಬಂಧಿತ … Read more

ಪೋಷಕರ ಹೃದಯವಿದ್ರಾವಕ ಮನವಿ, ದಯವಿಟ್ಟು ಕೇಳಿಸಿಕೊಳ್ಳಿ……

ವಿಜಯ ದರ್ಪಣ ನ್ಯೂಸ್…. ಪೋಷಕರ ಹೃದಯವಿದ್ರಾವಕ ಮನವಿ, ದಯವಿಟ್ಟು ಕೇಳಿಸಿಕೊಳ್ಳಿ…… ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಅತ್ಯಂತ ಭೀಕರ ಚಾಕು ಇರಿತದ ಅಪರಾಧ ಪ್ರಕರಣಗಳನ್ನು ನೋಡಿದ ಮೂವರು ಮಕ್ಕಳ ತಂದೆ ತಾಯಿಯು ತೀರ ಆತಂಕಗೊಳ್ಳುತ್ತಾರೆ, ಭಯಪಡುತ್ತಾರೆ…… ಮೊಬೈಲ್ ಉಪಯೋಗಿಸಲು ಕೊಡಲಿಲ್ಲವೆಂದು ಮಗನೊಬ್ಬ ತಂದೆಯನ್ನೇ ಕೊಲ್ಲುತ್ತಾನೆ. ಆಸ್ತಿಯಲ್ಲಿ ಸರಿಯಾಗಿ ಭಾಗ ಕೊಡಲಿಲ್ಲವೆಂದು ಮಗನೊಬ್ಬ ಇಡೀ ಕುಟುಂಬವನ್ನೇ ಸರ್ವನಾಶ ಮಾಡುತ್ತಾನೆ. ಪ್ರೀತಿಸಿದವನೊಂದಿಗೆ ಮದುವೆ ಆಗಲು ಒಪ್ಪಿಗೆ ಕೊಡಲಿಲ್ಲವೆಂದು ಮಗಳೇ ತಂದೆ ತಾಯಿಯನ್ನು ಚುಚ್ಚಿ ಕೊಳ್ಳುತ್ತಾಳೆ. ಇನ್ನೊಂದೆಡೆ ಯಾವುದೋ ಕಾರಣಕ್ಕಾಗಿ ತನ್ನ ತಂದೆಯ … Read more

ಅಲ್ಲಯ್ಯನಪುರ ಗ್ರಾಮದಿಂದ ಕಾಟೂರು ಗ್ರಾಮದವರೆಗೆ  ಮೂರುವರೆ ಕೋಟಿ ರೂವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ದರ್ಶನ್ ಧ್ರುವನಾರಾಯಣ್ ಭೂಮಿ ಪೂಜೆ

ವಿಜಯ ದರ್ಪಣ ನ್ಯೂಸ್…. ಅಲ್ಲಯ್ಯನಪುರ ಗ್ರಾಮದಿಂದ ಕಾಟೂರು ಗ್ರಾಮದವರೆಗೆ  ಮೂರುವರೆ ಕೋಟಿ ರೂವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ದರ್ಶನ್ ಧ್ರುವನಾರಾಯಣ್ ಭೂಮಿ ಪೂಜೆ ತಾಂಡವಪುರ ಜುಲೈ 4- ಅಲ್ಲಯ್ಯನಪುರ ಗ್ರಾಮದಿಂದ ಕಾಟೂರು ಗ್ರಾಮದವರೆಗೆ ಸುಮಾರು ಮೂರುವರೆ ಕೋಟಿ ರೂವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ದರ್ಶನ್ ಧ್ರುವನಾರಾಯಣ್ ಭೂಮಿ ಪೂಜೆ ನೆರವೇರಿಸಿದರು ಬಳಿಕ ಸಾರ್ವಜನಿಕರಿಂದ ಸಮಸ್ಯೆಗಳು ಕುಂದು ಕೊರತೆಗಳನ್ನು ಆಲಿಸಿ ಮಾತನಾಡಿದ ಶಾಸಕರು ಕಾಂಗ್ರೆಸ್ ಸರ್ಕಾರದಲ್ಲಿ ಹೆಚ್ಚಿನ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ಶಾಸಕ ದರ್ಶನ್ … Read more

ಶಾಸಕ ಬಿ.ಎನ್.ರವಿಕುಮಾ‌ರ್ ಅವರ ವೇತನದಿಂದ 9,600 ಸರ್ಕಾರಿ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ ಬುಕ್, ಲೇಖನ ಸಾಮಗ್ರಿ ವಿತರಣೆ

ವಿಜಯ ದರ್ಪಣ ನ್ಯೂಸ್…. ಶಾಸಕ ಬಿ.ಎನ್.ರವಿಕುಮಾ‌ರ್ ಅವರ ವೇತನದಿಂದ 9,600 ಸರ್ಕಾರಿ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ ಬುಕ್, ಲೇಖನ ಸಾಮಗ್ರಿ ವಿತರಣೆ ಶಿಡ್ಲಘಟ್ಟ : ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ನೆರವು ನೀಡಲು ಸದಾ ಸಿದ್ಧನಿದ್ದೇನೆ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಉತ್ತೇಜನ ನೀಡುವ ಉದ್ದೇಶದಿಂದ ಈ ಮಹತ್ಕಾರ್ಯವನ್ನು ಮುಂದುವರಿಸುತ್ತೇನೆ ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು. ತಾಲ್ಲೂಕಿನ ಸಾದಲಿ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಶಾಸಕರ ವೇತನದ ಹಣವನ್ನು ಬಳಸಿ ಸರ್ಕಾರಿ ಪ್ರಾಥಮಿಕ,ಹಿರಿಯ … Read more

ದಲಿತರ ಧೋರಣೆ ,ಭ್ರಷ್ಟಾಚಾರ ಹಾಗೂ ಅಡಳಿತ ವೈಫಲ್ಯಗಳನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ  ಜು-6ರಂದು ಧರಣಿ

ವಿಜಯ ದರ್ಪಣ ನ್ಯೂಸ್…. ದಲಿತರ ಧೋರಣೆ ,ಭ್ರಷ್ಟಾಚಾರ ಹಾಗೂ ಅಡಳಿತ ವೈಫಲ್ಯಗಳನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ  ಜು-6ರಂದು ಧರಣಿ ಶಿಡ್ಲಘಟ್ಟ : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಅಭಿವೃದ್ಧಿಗೆ ಸಂವಿಧಾನಬದ್ಧ ಹಕ್ಕುಗಳು ಹಾಗೂ ಮೀಸಲಾತಿ ಸೌಲಭ್ಯಗಳು ಸಮರ್ಪಕವಾಗಿ ಜಾರಿಯಾಗುತ್ತಿಲ್ಲ ಎಂದು ಜಿಲ್ಲಾ ಸಂಚಾಲಕ ಮೇಲೂರು ಮಂಜುನಾಥ್ ತಿಳಿಸಿದರು. ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ತಾಲ್ಲೂಕು ಆಡಳಿತದ ದಲಿತ ವಿರೋಧಿ ಧೋರಣೆ, ಭ್ರಷ್ಟಾಚಾರ ಹಾಗೂ ಅಡಳಿತ ವೈಫಲ್ಯಗಳನ್ನು ಖಂಡಿಸಿ … Read more

ನೆಮ್ಮದಿಯ ಬದುಕಿಗೆ ತೃಪ್ತಿಯೇ ಸೋಪಾನ

ವಿಜಯ ದರ್ಪಣ ನ್ಯೂಸ್…….. ನೆಮ್ಮದಿಯ ಬದುಕಿಗೆ ತೃಪ್ತಿಯೇ ಸೋಪಾನ ಜಯಶ್ರೀ.ಜೆ. ಅಬ್ಬಿಗೇರಿ ಹಫೀಸ್ ಆಫ್ರಿಕಾದ ಒಬ್ಬ ಸಂತೃಪ್ತ ರೈತನಾಗಿದ್ದ. ಆತ ಸಂತೋಷವಾಗಿದ್ದುದು ಏಕೆಂದರೆ ಆತ ಸಂತುಷ್ಟನಾಗಿದ್ದ ಆತ ಸಂತುಷ್ಟನಾಗಿದ್ದ ಏಕೆಂದರೆ ಆತ ಸಂತೋಷದಿಂದಿದ್ದ. ಒಂದು ದಿನ ವಿವೇಕಿಯೊಬ್ಬ ರೈತನಲ್ಲಿಗೆ ಬಂದು ವಜ್ರದ ದಿವ್ಯ ಪ್ರಭೆ ಜ್ಚಾಜಲ್ಯ ಹಾಗೂ ಮಹತ್ವವನ್ನು ಹೇಳಿ ಅದನ್ನು ಹೊಂದಿದ್ದರೆ ಸಿಗುವ ಅಧಿಕಾರ ಮತ್ತು ಘನತೆಯ ಬಗ್ಗೆ ವಿವರಿಸಿದ. ಅಷ್ಟಕ್ಕೆ ಸುಮ್ಮನಾಗದ ಆತ ಹೇಳಿದ. “ ನಿನ್ನ ಬಳಿ ಹೆಬ್ಬಟ್ಟಿನ ಗಾತ್ರದ ವಜ್ರವಿದ್ದಿದ್ದರೆ ನೀನು … Read more

ಚಿಕ್ಕತೇಕಹಳ್ಳಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿದ ಶಂಕೆಯಿಂದ ಸುಮಾರು 20 ಮಂದಿ ವಾಂತಿ-ಭೇದಿಯಿಂದ ಅಸ್ವಸ್ಥ: ಆರೋಗ್ಯ ಅಧಿಕಾರಿಗಳ ಭೇಟಿ 

ವಿಜಯ ದರ್ಪಣ ನ್ಯೂಸ್……. ಚಿಕ್ಕತೇಕಹಳ್ಳಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿದ ಶಂಕೆಯಿಂದ ಸುಮಾರು 20 ಮಂದಿ ವಾಂತಿ-ಭೇದಿಯಿಂದ ಅಸ್ವಸ್ಥ:ಆರೋಗ್ಯ ಅಧಿಕಾರಿಗಳ ಭೇಟಿ  ಶಿಡ್ಲಘಟ್ಟ : ಕಳೆದ ಎರಡು ಮೂರು ದಿನಗಳಿಂದ ಚಿಕ್ಕತೇಕಹಳ್ಳಿ ಗ್ರಾಮದಲ್ಲಿ ಹಲವರಿಗೆ ವಾಂತಿ ಹಾಗೂ ಭೇದಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಹೇಶ್ ಕುಮಾ‌ರ್, ಸರ್ವೇಕ್ಷಣಾಧಿಕಾರಿ ಕೃಷ್ಣಪ್ರಸಾದ್‌, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ಬಶೆಟ್ಟಹಳ್ಳಿ ಆರೋಗ್ಯ ಕೇಂದ್ರದ ಡಾ.ಸುಷ್ಮಾ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹೇಮಾವತಿ ಹಾಗೂ ಆರೋಗ್ಯ ನಿರೀಕ್ಷಕ ದೇವರಾಜ್ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ … Read more

ಶ್ರೀಕಂಟೇಶ್ವರ ದೇವಾಲಯದ ವ್ಯವಸ್ಥಾಪಕ ಸಮಿತಿ ನೂತನ ಅಧ್ಯಕ್ಷ ಬಸವೇಗೌಡರನ್ನು ಸನ್ಮಾನಿಸಿದ  ಬಿಎಂ ರಾಮು

ವಿಜಯ ದರ್ಪಣ ನ್ಯೂಸ್…. ಶ್ರೀಕಂಟೇಶ್ವರ ದೇವಾಲಯದ ವ್ಯವಸ್ಥಾಪಕ ಸಮಿತಿ ನೂತನ ಅಧ್ಯಕ್ಷ ಬಸವೇಗೌಡರನ್ನು ಸನ್ಮಾನಿಸಿದ  ಬಿಎಂ ರಾಮು ತಾಂಡವಪುರ ಜುಲೈ 4 ದಕ್ಷಿಣ ಕಾಶಿ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ವ್ಯವಸ್ಥಾಪಕ ಸಮಿತಿ ನೂತನ ಅಧ್ಯಕ್ಷರಾದ ಬಸವೇಗೌಡರನ್ನು ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಬಿಎಂ ರಾಮು ರವರು ಸನ್ಮಾನಿಸಿ ಗೌರವಿಸಿ ಅಭಿನಂದನೆ ಸಲ್ಲಿಸಿದರು. ಬಳಿಕ ನೂತನ ಅಧ್ಯಕ್ಷ ಚಿನ್ನದ ಗುಡಿಹುಂಡಿ ಬಸವೇಗೌಡರು ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ನಿಮ್ಮ ಪ್ರೀತಿಯ ಅಭಿಮಾನಕ್ಕೆ ನಾನು ಸದಾ ಚಿರಋಣಿ ನಿಮ್ಮ ಈ … Read more

ದಿನ-ದಿನ ವನ ಮಹೋತ್ಸವ ಅಭಿಯಾನ 

ವಿಜಯ ದರ್ಪಣ ನ್ಯೂಸ್…. ದಿನ-ದಿನ ವನ ಮಹೋತ್ಸವ ಅಭಿಯಾನ  ಆಲೂರು: ಹಸಿರು ಕರ್ನಾಟಕ ಫೌಂಡೇಶನ್ ವತಿಯಿಂದ, ವೃಕ್ಷಮಾತೆ ಡಾ. ಸಾಲುಮರದ ತಿಮ್ಮಕ್ಕ ಅಜ್ಜಿ ಅವರ 115ನೇ ಜನ್ಮದಿನದ ಸ್ಮರಣಾರ್ಥವಾಗಿ ಆಯೋಜಿಸಿರುವ ದಿನ-ದಿನ ವನ ಮಹೋತ್ಸವ ಅಭಿಯಾನದ ಅಂಗವಾಗಿ, 04-07-2026 ರಂದು ಬೆಳಿಗ್ಗೆ 10:30ಕ್ಕೆ ಆಲೂರು ತಾಲ್ಲೂಕಿನ “ಸರಕಾರಿ ಹಿರಿಯ ಪ್ರಾಥಮಿಕ ಶಾಲೆ”, ಅಬ್ಬನದಲ್ಲಿ ಪುಟ್ಟ ಮಕ್ಕಳೊಂದಿಗೆ ಗಿಡ ನೆಡುವ ಹಾಗೂ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಸಮಾಜ ಅರಣ್ಯ ಇಲಾಖೆಯ ಸಂರಕ್ಷಣಾಧಿಕಾರಿ ವಿಜಯ್ … Read more

Footpath…… ಪುಟ್ ಪಾತ್……

ವಿಜಯ ದರ್ಪಣ ನ್ಯೂಸ್….. Footpath…… ಪುಟ್ ಪಾತ್…… ( ಗೂಡಂಗಡಿಯ ಜನರ ಕರುಳ ಬಳ್ಳಿಯ ಕರೆ….) ಫುಟ್ ಪಾತ್ ಎಂದು ಆಂಗ್ಲ ಭಾಷೆಯಲ್ಲಿ ಕರೆಯಲ್ಪಡುವ ಪಾದಾಚಾರಿ ರಸ್ತೆಯನ್ನು ಆಕ್ರಮಿಸಿಕೊಂಡು ವ್ಯಾಪಾರ ಮಾಡುವ ಬೀದಿಬದಿ ವ್ಯಾಪಾರಿಗಳನ್ನು ಬೆಂಗಳೂರು ನಗರದಲ್ಲಿ ಜಿಸಿಬಿ ಉಪಯೋಗಿಸಿ ಬುಲ್ಡೋಜ್ ಮಾಡಲಾಗುತ್ತಿದೆ. ಹಲವು, ಕೆಲವು ವಿವಿಧ ಕಾರಣಗಳಿಗಾಗಿ ಒಂದಷ್ಟು ಜನ ಅದರ ಪರವಾಗಿಯೂ ಇನ್ನೊಂದಷ್ಟು ಜನ ಅದರ ವಿರೋಧವಾಗಿ ಚರ್ಚೆ ಮಾಡುತ್ತಾ, ಕಾನೂನಾತ್ಮಕ ಮೌಲ್ಯಗಳನ್ನು, ಮಾನವೀಯ ಮೌಲ್ಯಗಳನ್ನು, ನಾಗರಿಕ ಮೌಲ್ಯಗಳನ್ನು ತುಲನೆ ಮಾಡುತ್ತಾ, ವಾದ ವಿವಾದಗಳು … Read more