12 ವರ್ಷದಲ್ಲಿ ಮೋದಿಯದು ಐತಿಹಾಸಿಕ ಸಾಧನೆ: ಸಂಸದ ಯದುವೀರ್‌

ವಿಜಯ ದರ್ಪಣ ನ್ಯೂಸ್.. 12 ವರ್ಷದಲ್ಲಿ ಮೋದಿಯದು ಐತಿಹಾಸಿಕ ಸಾಧನೆ: ಸಂಸದ ಯದುವೀರ್‌ ತಾಂಡವಪುರ ಜುಲೈ 10 ಚುನಾಯಿತ ಪ್ರಧಾನಿಯಾಗಿ ಸತತ ೧೨ ವರ್ಷಗಳಿಂದ ನರೇಂದ್ರ ಮೋದಿ ದೇಶದ ಸರ್ವತೋಮುಖ ಅಭಿವೃದ್ಧಿ, ಸುರಕ್ಷತೆ, ಜಾಗತಿಕ ಮನ್ನಣೆಗಾಗಿ ಅನೇಕ ಐತಿಹಾಸಿಕ ನಿಲುವುಗಳನ್ನು ಕೈಗೊಂಡು ದೇಶಕ್ಕಾಗಿ ಶ್ರಮಿಸುತ್ತಿದ್ದಾರೆ ಎಂದು ಮೈಸೂರು ಕೊಡಗು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು. ಬುಧವಾರ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ೨೦೧೪ರಲ್ಲಿ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ದಿನದಿಂದ ಇಂದಿನವರೆಗೆ ಭಾರತವನ್ನು ಅತ್ಯಂತ … Read more

ಸುಪ್ರೀಂ ಕೋರ್ಟ್ ‘ಸಮಾಧಾನ್ ಸಮಾರೋಹ್’ ಯಶಸ್ವಿಗೊಳಿಸಲು ಎಲ್ಲಾ ಇಲಾಖೆಗಳಿಗೆ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಸೂಚನೆ

ವಿಜಯ ದರ್ಪಣ ನ್ಯೂಸ್….. ಸುಪ್ರೀಂ ಕೋರ್ಟ್ ‘ಸಮಾಧಾನ್ ಸಮಾರೋಹ್’ ಯಶಸ್ವಿಗೊಳಿಸಲು ಎಲ್ಲಾ ಇಲಾಖೆಗಳಿಗೆ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಸೂಚನೆ ಬೆಂಗಳೂರು, ಜೂನ್ 10 : ಮಾನ್ಯ ಸರ್ವೋಚ್ಛ ನ್ಯಾಯಾಲಯವು ಮುಂಬರುವ 2026ರ ಆಗಸ್ಟ್ 21 ರಿಂದ ಆಗಸ್ಟ್ 23 ರವರೆಗೆ ಹಮ್ಮಿಕೊಂಡಿರುವ ‘ಸಮಾಧಾನ್ ಸಮಾರೋಹ್’ (ಲೋಕ್ ಅದಾಲತ್) ಬೃಹತ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್ ಅವರು ರಾಜ್ಯದ ಎಲ್ಲಾ ಇಲಾಖೆಗಳಿಗೆ ಮಹತ್ವದ ನಿರ್ದೇಶನ ನೀಡಿದ್ದಾರೆ. ಕರ್ನಾಟಕ ರಾಜ್ಯ ಕಾನೂನು … Read more

ನಾಯಕ ಸಮುದಾಯದ ವಿದ್ಯಾರ್ಥಿಗಳಿಂದ ಪುರಸ್ಕಾರಕ್ಕೆ ಆಹ್ವಾನ

ವಿಜಯ ದರ್ಪಣ ನ್ಯೂಸ್….. ನಾಯಕ ಸಮುದಾಯದ ವಿದ್ಯಾರ್ಥಿಗಳಿಂದ ಪುರಸ್ಕಾರಕ್ಕೆ ಆಹ್ವಾನ ತಾಂಡವಪುರ ಜೂನ್ 10 ಮೈಸೂರು ತಾಲ್ಲೂಕು ನಾಯಕರ ಸಂಘವು ಸಮುದಾಯದ ವಿದ್ಯಾರ್ಥಿಗಳಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಿದೆ ಎಂದು ಸಂಘದ ಅಧ್ಯಕ್ಷ ಉದ್ಬೂರು ಮಹದೇವಸ್ವಾಮಿ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತ ಸಂಘದ ಭವನದಲ್ಲಿ ಇಂದು ಸುದ್ದಿಗಾರರೊಡನೆ ಮಾತನಾಡಿ, ೨೦೨೫- ೨೬ನೇ ಸಾಲಿನ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಶೇ. ೮೦ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳು ಜೂನ್ ೧೮ರೊಳಗೆ ಇಲ್ಲಿನ ಸರಸ್ವತಿಪುರಂನ ನಾಯಕರ ವಿದ್ಯಾರ್ಥಿ ನಿಲಯದಲ್ಲಿ ಅಗತ್ಯ ದಾಖಲೆಗಳೊಂದಿಗೆ … Read more

ಸಮಾಜದ ಆಧ್ಯಾತ್ಮಿಕ ಬದುಕಿಗೆ ದಾರಿದೀಪರಾಗಿರುವ ಶಿವಾರ್ಚಕರು ನಟರಾಜ ಸ್ವಾಮೀಜಿಗಳು

ವಿಜಯ ದರ್ಪಣ ನ್ಯೂಸ್….. ಸಮಾಜದ ಆಧ್ಯಾತ್ಮಿಕ ಬದುಕಿಗೆ ದಾರಿದೀಪರಾಗಿರುವ ಶಿವಾರ್ಚಕರು ನಟರಾಜ ಸ್ವಾಮೀಜಿಗಳು ತಾಂಡವಪುರ ಜೂನ್ 10 ತಮ್ಮ ಶಕ್ತಿ, ಸಾಮರ್ಥ್ಯ ಮತ್ತು ಸೇವೆಯ ಮಹತ್ವವನ್ನು ಅರಿತು ಸಂಘಟಿತರಾಗಿ ಬದುಕಬೇಕು. ಕಲ್ಲನ್ನೇ ದೇವರ ರೂಪಕ್ಕೆ ತಂದು ಪ್ರತಿಷ್ಠಾಪಿಸುವ ಅಪೂರ್ವ ಶಕ್ತಿ ಶಿವಾರ್ಚಕರಿಗಿದ್ದು, ಸಂಕೋಚ ಬಿಟ್ಟು ಆತ್ಮಗೌರವದಿಂದ ಸಂತೋಷದ ಜೀವನ ನಡೆಸಬೇಕು ಎಂದು ಗಾವಡಗೆರೆ ಕ್ಷೇತ್ರದ ಗುರುಲಿಂಗ ಜಂಗಮದೇವರ ಮಠಾಧ್ಯಕ್ಷರಾದ ಶ್ರೀ ನಟರಾಜ ಸ್ವಾಮೀಜಿ ಕರೆ ನೀಡಿದರು. ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಆಯೋಜಿಸಲಾಗಿದ್ದ ನಂಜನಗೂಡು ತಾಲ್ಲೂಕು ಶಿವಾರ್ಚಕರ ಸಂಘದ … Read more

ಸೂರಜ್ ಹೆಗಡೆ ನಿಧನಕ್ಕೆ ಸಂತಾಪ

ವಿಜಯ ದರ್ಪಣ ನ್ಯೂಸ್…. ಸೂರಜ್ ಹೆಗಡೆ ನಿಧನಕ್ಕೆ ಸಂತಾಪ ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ ಜೂ.10: ರಾಜ್ಯ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರು ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ, ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ರವರ ಮೊಮ್ಮಗರಾದ ಶ್ರೀ ಸೂರಜ್ ಹೆಗಡೆ ಅವರ ಅಕಾಲಿಕ ನಿಧನಕ್ಕೆ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಂತಾಪ ವ್ಯಕ್ತಪಡಿಸಿದೆ. ಬುಧವಾರ ಜಿಲ್ಲಾಡಳಿತ ಭವನದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರ ಕಛೇರಿಯಲ್ಲಿ … Read more

ಬಿಜೆಪಿ ಕೇಂದ್ರ ಸರ್ಕಾರ 12ಪೂರೈಸಿದ ಹಿನ್ನಲೆ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ವಿಶೇಷ ಪೂಜೆ, ಸಿಹಿ ಹಂಚಿ ಸಂಭ್ರಮಾಚರಣೆ

ವಿಜಯ ದರ್ಪಣ ನ್ಯೂಸ್…. ಬಿಜೆಪಿ ಕೇಂದ್ರ ಸರ್ಕಾರ 12ಪೂರೈಸಿದ ಹಿನ್ನಲೆ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ವಿಶೇಷ ಪೂಜೆ, ಸಿಹಿ ಹಂಚಿ ಸಂಭ್ರಮಾಚರಣೆ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ: ಗೋವಿಂದರಾಜನನಗರ ಮಂಡಲ ಬಿಜೆಪಿ ವತಿಯಿಂದ ಮಾರುತಿ ಮಂದಿರ ವಾರ್ಡ್ , ನಾಗರಬಾವಿ ಮುಖ್ಯರಸ್ತೆ, ಕೆನರಾ ಬ್ಯಾಂಕ್ ಕಾಲೋನಿಯಲ್ಲಿರುವ ಶ್ರೀ ವರಸಿದ್ಧಿ ವಿನಾಯಕ ದೇವಾಲಯದಲ್ಲಿ ವಿಶ್ವದ ಬಲಿಷ್ಠ ಪ್ರಧಾನಿ ನರೇಂದ್ರಮೋದಿರವರು ದೇಶದ ಪ್ರಧಾನಿಯಾಗಿ 12ವರ್ಷ ಪೂರೈಸಿದ ಹಿನ್ನಲೆಯಲ್ಲಿ ವಿಶೇಷ ಪೂಜೆ ಮತ್ತು ಸಂಭ್ರಮಾಚರಣೆ ಕಾರ್ಯಕ್ರಮ. ದಕ್ಷಿಣ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರು, ನಿಕಟಪೂರ್ವ … Read more

ಕಾಲ್ಚೆಂಡಿನ ವಿಶ್ವ ಸ್ಪರ್ಧೆ 2026,,……… ಲೇಖನ: ವಿವೇಕಾನಂದ ಎಚ್ ಕೆ

ವಿಜಯ ದರ್ಪಣ ನ್ಯೂಸ್….. [09/06, 8:51 pm] Vivekananda H K Vivek: https://youtu.be/DhqOVL9TMm4?si=FCIiib7watKu2ipV [10/06, 5:14 am] Vivekananda H K Vivek: ಕಾಲ್ಚೆಂಡಿನ ವಿಶ್ವ ಸ್ಪರ್ಧೆ 2026,,……… ಲೇಖನ: ವಿವೇಕಾನಂದ ಎಚ್ ಕೆ  ( ಫೀಫಾ ವರ್ಲ್ಡ್ ಕಪ್ ಪುಟ್ಬಾಲ್ 2026 ಅಮೆರಿಕ – ಕೆನಡ – ಮೆಕ್ಸಿಕೋ…. ) ಪೀಲೆ – ಮರಡೋನ – ರೊನಾಲ್ಡೊ – ಮೆಸ್ಸಿ – ಎಂಬಾಪೆ……………. ಮನುಷ್ಯನ ಅತ್ಯಂತ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಕ್ರೀಡೆಗೆ ಮಹತ್ವದ ಸ್ಥಾನವಿದೆ. ಕ್ರೀಡೆಗಳು ಮಾನವನ ಎಲ್ಲಾ … Read more

ರಾಷ್ಟ್ರೀಯ ಮೆರಿಟ್ ಮೀನ್ಸ್ ಸ್ಕಾಲರ್‌ಶಿಪ್ ಪರೀಕ್ಷೆಯಲ್ಲಿ ಸುಗಟೂರು ಸರ್ಕಾರಿ ಶಾಲೆಯ ಕವನಾ ಅವಿಸ್ಮರಣೀಯ ಸಾಧನೆ

ವಿಜಯ ದರ್ಪಣ ನ್ಯೂಸ್…. ರಾಷ್ಟ್ರೀಯ ಮೆರಿಟ್ ಮೀನ್ಸ್ ಸ್ಕಾಲರ್‌ಶಿಪ್ ಪರೀಕ್ಷೆಯಲ್ಲಿ ಸುಗಟೂರು ಸರ್ಕಾರಿ ಶಾಲೆಯ ಕವನಾ ಅವಿಸ್ಮರಣೀಯ ಸಾಧನೆ ಶಿಡ್ಲಘಟ್ಟ : ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿನಿ ಎಸ್‌.ಎಸ್.ಕವನಾ ರಾಷ್ಟ್ರೀಯ ಮೆರಿಟ್ ಮೀನ್ಸ್ ಸ್ಕಾಲರ್‌ಶಿಪ್ (ಎನ್‌ಎಂಎಂಎಸ್) ಪರೀಕ್ಷೆ ತೇರ್ಗಡೆಯಾಗುವ ಮೂಲಕ ರಾಷ್ಟ್ರೀಯ ವಿದ್ಯಾರ್ಥಿವೇತನಕ್ಕೆ ಅರ್ಹತೆಯನ್ನು ಪಡೆದಿದ್ದಾರೆ. ನವದೆಹಲಿಯ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯೊಂದಿಗೆ ರಾಜ್ಯದ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ) ಮಾರ್ಗದರ್ಶನದಲ್ಲಿ ಫೆಬ್ರುವರಿ ಮಾಹೆಯಲ್ಲಿ ಈ ಪರೀಕ್ಷೆ ನಡೆದಿತ್ತು ,ಪ್ರತಿವರ್ಷ … Read more

ಎರಡನೇ ದಿನಕ್ಕೆ ಕಾಲಿಟ್ಟ ರೈತ ಸಂಘದ ಕಾರ್ಯಕರ್ತರ ಪ್ರತಿಭಟನೆ…! ಪೊರಕೆ ಚಳುವಳಿ ಮೂಲಕ ಎಚ್ಚರಿಕೆ…!

ವಿಜಯ ದರ್ಪಣ ನ್ಯೂಸ್…. ಎರಡನೇ ದಿನಕ್ಕೆ ಕಾಲಿಟ್ಟ ರೈತ ಸಂಘದ ಕಾರ್ಯಕರ್ತರ ಪ್ರತಿಭಟನೆ…! ಪೊರಕೆ ಚಳುವಳಿ ಮೂಲಕ ಎಚ್ಚರಿಕೆ…! ತಾಂಡವಪುರ ಜೂನ್ 9 ದಕ್ಷಿಣ ಕಾಶಿ: ನಂಜನಗೂಡು ತಾಲೂಕು ಕಚೇರಿಯಲ್ಲಿ ತಾಂಡವವಾಡುತ್ತಿರುವ ಲಂಚಾವತಾರದ ವಿರುದ್ದ ಸಿಡಿದೆದ್ದ ರೈತರು ಎರಡನೇ ದಿನವಾದ ಇಂದು ಪ್ರತಿಭಟನೆ ನಡೆಸಿದರು.ಮಿನಿ ವಿಧಾನಸೌಧದ ಮುಂಭಾಗದಲ್ಲಿ ಪೊರಕೆ ಚಳುವಳಿ ಹಮ್ಮಿಕೊಳ್ಳುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ರೈತರ ಬೇಡಿಕೆಗೆ ಸ್ಪಂದಿಸದ ತಹಸಿಲ್ದಾರ್ ಡಾ. ಸ್ಮಿತಾ ರಾಮು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಂದಾಯ ಇಲಾಖೆ ಕಚೇರಿಯಲ್ಲಿ ಲಂಚಾವತಾರ ಮಿತಿಮೀರುತ್ತಿದೆ. … Read more

ವಿಶ್ವ ತಂಬಾಕು ರಹಿತ ದಿನಾಚರಣೆ: ಕೆ.ಎಸ್.ಆರ್.ಟಿ.ಸಿ. ಸಿಬ್ಬಂದಿಗೆ ಆರೋಗ್ಯ ತಪಾಸಣೆ

ವಿಜಯ ದರ್ಪಣ ನ್ಯೂಸ್….. ವಿಶ್ವ ತಂಬಾಕು ರಹಿತ ದಿನಾಚರಣೆ: ಕೆ.ಎಸ್.ಆರ್.ಟಿ.ಸಿ. ಸಿಬ್ಬಂದಿಗೆ ಆರೋಗ್ಯ ತಪಾಸಣೆ ಶಿಡ್ಲಘಟ್ಟ : 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ತಂಬಾಕು ಉತ್ಪನ್ನ ಮಾರಾಟ ಮಾಡುವುದು ಕಾನೂನುಬಾಹಿರ ಭಾರತ ಸರ್ಕಾರವು ತಂಬಾಕು ಬಳಕೆ ನಿಯಂತ್ರಣಕ್ಕೆ ಹಲವು ಕಾನೂನು ಜಾರಿಗೆ ತಂದಿದೆ ಹಿರಿಯ ಸಿವಿಲ್ ತಾಲ್ಲೂಕು ನ್ಯಾಯಾಧೀಶ ಹಾಗೂ ಕಾನೂನು ಸೇವಾ ಸಮಿತಿ ಅಧ್ಯಕ್ಷ ಮೊಹಮ್ಮದ್ ರೋಷನ್ ಷಾ ತಿಳಿಸಿದರು. ತಾಲ್ಲೂಕಿನ ಬಳಿಯ ಹಿತ್ತಲಹಳ್ಳಿ ಕೆಎಸ್‌ಆರ್‌ಟಿಸಿ ಡಿಪೊ ಅವರಣದಲ್ಲಿ ವಿಶ್ವ ತಂಬಾಕು ರಹಿತ ದಿನದ … Read more