ಭಾರತದ ಪ್ರಗತಿ ಕರ್ನಾಟಕದ ಜತೆ ಜತೆಯಲ್ಲೇ ಆಗಬೇಕು: ಸಿಎಂ ಡಿ ಕೆ ಶಿವಕುಮಾರ್

ವಿಜಯ ದರ್ಪಣ ನ್ಯೂಸ್…. ಭಾರತದ ಪ್ರಗತಿ ಕರ್ನಾಟಕದ ಜತೆ ಜತೆಯಲ್ಲೇ ಆಗಬೇಕು: ಸಿಎಂ ಡಿ ಕೆ ಶಿವಕುಮಾರ್ ಕರ್ನಾಟಕಕ್ಕೆ ಹೃದಯ ವೈಶಾಲ್ಯತೆಯಿಂದ ನೆರವು ನೀಡಿ: ಪ್ರಧಾನಿಗೆ ಸಿಎಂ ಮನವಿ ಮೈಸೂರು, ಆ. 01: ಭಾರತ ಪ್ರಗತಿ ಸಾಧಿಸಬೇಕಾದರೆ, ಕರ್ನಾಟಕದೊಂದಿಗೆ ಪ್ರಗತಿ ಸಾಧಿಸಬೇಕು. ನಾವು ಒಕ್ಕೂಟ ವ್ಯವಸ್ಥೆಯಲ್ಲಿ ಒಟ್ಟಾಗಿ ಕೆಲಸ ಮಾಡೋಣ, ಕರ್ನಾಟಕ್ಕೆ ನೆರವು ನೀಡುವಾಗ ಹೃದಯ ವೈಶಾಲ್ಯತೆಯಿಂದ ನೆರವು ನೀಡಿ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದರು. … Read more

ಮೇಲೂರಿನ ಸುಪ್ರಸಿದ್ಧ ಗ್ರಾಮದೇವತೆ ಶ್ರೀ ಗಂಗಮ್ಮದೇವಿಯ ಸನ್ನಿಧಾನದಲ್ಲಿ ನವಚಂಡಿಕಾಯಾಗ

ವಿಜಯ ದರ್ಪಣ ನ್ಯೂಸ್…. ಮೇಲೂರಿನ ಸುಪ್ರಸಿದ್ಧ ಗ್ರಾಮದೇವತೆ ಶ್ರೀ ಗಂಗಮ್ಮದೇವಿಯ ಸನ್ನಿಧಾನದಲ್ಲಿ ನವಚಂಡಿಕಾಯಾಗ ಶಿಡ್ಲಘಟ್ಟ : ಪ್ರಸಿದ್ಧ ಗ್ರಾಮದೇವತೆ ಶ್ರೀ ಗಂಗಮ್ಮದೇವಿಯ ಸನ್ನಿಧಾನದಲ್ಲಿ ಗಂಗಾದೇವಿ ಭಕ್ತಮಂಡಳಿ ಹಾಗೂ ಗಂಗಾದೇವಿ ಧರ್ಮದರ್ಶಿ ಟ್ರಸ್ಟ್‌ನಿಂದ ಆರನೇ ವರ್ಷದ ನವಚಂಡಿಕಾಯಾಗವನ್ನು ಶ್ರದ್ಧಾಭಕ್ತಿಯಿಂದ ನಡೆಸಲಾಯಿತು. ತಾಲ್ಲೂಕಿನ ಮೇಲೂರಿನ ಗಂಗಾದೇವಿ ದೇವಾಲಯದ ಆವರಣದಲ್ಲಿ ಎರಡು ದಿನ ನಡೆದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅಪಾರ ಭಕ್ತರು ಭಾಗವಹಿಸಿ ದೇವಿ ಕೃಪೆಗೆ ಪಾತ್ರರಾದರು. ವೇದಪಂಡಿತರ ಸಾನ್ನಿಧ್ಯದಲ್ಲಿ ವೈದಿಕ ವಿಧಿವಿಧಾನಗಳೊಂದಿಗೆ ವಿವಿಧ ಪೂಜಾ ಕೈಂಕರ್ಯ ನೆರವೇರಿದವು ,ಗಣಪತಿ ಪೂಜೆ, ನವಗ್ರಹ … Read more

ವೃದ್ಧರು ಹಾಗೂ ವಿಶೇಷ ಚೇತನ ಮಕ್ಕಳಿಗೆ ಅನ್ನದಾಸೋಹ: ಡಾ. ಅಣ್ಣಮ್ಮ ರಾಜೇಂದ್ರ ಅವರ 45ನೇ ಜನ್ಮದಿನ ಆಚರಣೆ

ವಿಜಯ ದರ್ಪಣ ನ್ಯೂಸ್…. ವೃದ್ಧರು ಹಾಗೂ ವಿಶೇಷ ಚೇತನ ಮಕ್ಕಳಿಗೆ ಅನ್ನದಾಸೋಹ: ಡಾ. ಅಣ್ಣಮ್ಮ ರಾಜೇಂದ್ರ ಅವರ 45ನೇ ಜನ್ಮದಿನ ಆಚರಣೆ   ತಾವರೆಕೆರೆ : ಕೋಲಾರ ಸಮಾಜ ಸೇವಕರು ಹಾಗೂ ಬೆಂಗಳೂರು ಅಣ್ಣಮ್ಮ ದೇವಿ ದೇವಾಲಯದ ಮುಖ್ಯಸ್ಥರು, ಮುಖಂಡರಾದ ಡಾಕ್ಟರ್ ಅಣ್ಣಮ್ಮ ರಾಜೇಂದ್ರ ಅವರ 45ನೇ ವರ್ಷದ ಹುಟ್ಟುಹಬ್ಬವನ್ನು ಕೋಲಾರದ ಅಂತರಗಂಗೆ ಬುದ್ಧಿಮಾಂದ್ಯ ಆಶ್ರಮದಲ್ಲಿ ವೃದ್ಧರು ಹಾಗೂ ವಿಶೇಷ ಚೇತನ ಮಕ್ಕಳಿಗೆ ಅನ್ನದಾಸೋಹ ಏರ್ಪಡಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಆಶ್ರಮದಲ್ಲಿರುವ ವೃದ್ಧರು ಹಾಗೂ ಮಕ್ಕಳಿಗೆ … Read more

“ತದ್ವಿರುದ್ಧ”‘ ಸಿನಿಮಾದ ಪ್ರಚಾರ ಅಭಿಯಾನವು ಶಿಡ್ಲಘಟ್ಟ ದ ಶ್ರೀ ವೆಂಕಟೇಶ್ವರ ಚಿತ್ರಮಂದಿರದ ಬಳಿ ಅದ್ಧೂರಿಯಾಗಿ ನಡೆಯಿತು

ವಿಜಯ ದರ್ಪಣ ನ್ಯೂಸ್….. “ತದ್ವಿರುದ್ಧ”‘ ಸಿನಿಮಾದ ಪ್ರಚಾರ ಅಭಿಯಾನವು ಶಿಡ್ಲಘಟ್ಟ ತಾಲ್ಲೂಕಿನ ಶ್ರೀ ವೆಂಕಟೇಶ್ವರ ಚಿತ್ರಮಂದಿರದ ಬಳಿ ಅದ್ಧೂರಿಯಾಗಿ ನಡೆಯಿತು ಶಿಡ್ಲಘಟ್ಟ : ಒಬ್ಬ ವ್ಯಕ್ತಿಯು ಹೊರ ನೋಟಕ್ಕೆ ಒಳ್ಳೆಯವನಂತೆ ಕಾಣಿಸಿಕೊಂಡರೂ, ಆತನ ಒಳಗಿನಗುಣಗಳು ಸಂದರ್ಭಕ್ಕೆ ತಕ್ಕಂತೆ ಹೇಗೆ ಬದ ಲಾಗುತ್ತವೆ ಹಾಗೂ ಒಳ್ಳೆಯತನಕ್ಕೆ ತದ್ವಿರುದ್ಧವಾಗಿ ಹೇಗೆ ತಿರುಗಿಬೀಳುತ್ತವೆ ಎಂಬುದನ್ನು ಈ ಸಿನಿಮಾ ದಲ್ಲಿ ಅತ್ಯಂತ ಕುತೂಹಲಕಾರಿಯಾಗಿ ತೋರಿಸಲಾಗಿದೆ ಎಂದು ಚಿತ್ರದ ನಿರ್ಮಾಪಕ ಕೊತ್ತನೂರು ರವಿಚಂದ್ರ ತಿಳಿಸಿದರು. ಚಾರ್ಮಿಯನ್ ಮೋಷನ್ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ನೂತನ ಸಸ್ಪೆನ್ಸ್ … Read more

ಕಬಿನಿ ತುಂಬುತ್ತಿದೆ, ಜಲಾಶಯ ತುಂಬಿದಾಗ ನೀರನ್ನು ಹರಿಸಲೇಬೇಕು: ಸಿಎಂ ಡಿ ಕೆ ಶಿವಕುಮಾರ್

ವಿಜಯ ದರ್ಪಣ ನ್ಯೂಸ್…… ಕಬಿನಿ ತುಂಬುತ್ತಿದೆ, ಜಲಾಶಯ ತುಂಬಿದಾಗ ನೀರನ್ನು ಹರಿಸಲೇಬೇಕು: ಸಿಎಂ ಡಿ ಕೆ ಶಿವಕುಮಾರ್ ಮೈಸೂರು, ಆ.01: “ಕಬಿನಿ ಜಲಾಶಯ ಭರ್ತಿಯಾಗುತ್ತಿದೆ. ಅಣೆಕಟ್ಟು ತುಂಬಿದಾಗ ನೀರು ಹರಿಸಲೇಬೇಕಾಗುತ್ತದೆ. ಅದನ್ನು ಹಿಡಿದಿಡಲು ಸಾಧ್ಯವಿಲ್ಲ. ನೀರು ಬಿಡಬಾರದು ಎಂದು ಹೋರಾಟ ಮಾಡುವ ನಿರ್ಧಾರವನ್ನು ಕೈಬಿಡಬೇಕು ಎಂದು ನಮ್ರತೆಯಿಂದ ಮನವಿ ಮಾಡುತ್ತೇನೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು. ಮೈಸೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳಿಗೆ ಶನಿವಾರ ಪ್ರತಿಕ್ರಿಯೆ ನೀಡಿದರು. ಕಾವೇರಿ ನೀರು ಹರಿಸುವ ವಿಚಾರವಾಗಿ ಪ್ರತಿಭಟನೆ … Read more

ಕಟಿಬದ್ಧರಾಗಿ ಕೆಲಸ ಮಾಡಿರಿ, ಪಕ್ಷ ಸಂಘಟನೆಗೆ ದುಡಿಯಿರಿ ಕಾಂಗ್ರೆಸ್ ವೀಕ್ಷಕ ರಾಜೇಶ್ ಠಾಗೋರ್ ಕರೆ

ವಿಜಯ ದರ್ಪಣ ನ್ಯೂಸ್…. ಕಟಿಬದ್ಧರಾಗಿ ಕೆಲಸ ಮಾಡಿರಿ, ಪಕ್ಷ ಸಂಘಟನೆಗೆ ದುಡಿಯಿರಿ ಕಾಂಗ್ರೆಸ್ ವೀಕ್ಷಕ ರಾಜೇಶ್ ಠಾಗೋರ್ ಕರೆ ತಾಂಡವಪುರ ಜುಲೈ 30: ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಅಧ್ಯಕ್ಷರುಗಳು, ನಾಯಕರು, ಮುಖಂಡರು ಸೇರಿದಂತೆ ಎಲ್ಲರೂ ಪಕ್ಷದ ಬಲವರ್ಧನೆಗಾಗಿ ಮತ್ತಷ್ಟು ಕಟಿಬದ್ದರಾಗಿ ಕೆಲಸ ಮಾಡಬೇಕೆಂದು ಹಿರಿಯ ಮುಖಂಡರೂ ಹಾಗೂ ಕಾಂಗ್ರೆಸ್ ವೀಕ್ಷಕರೂ ಆದ ರಾಜೇಶ್ ಠಾಗೋರ್ ಕರೆ ನೀಡಿದರು. ಮೈಸೂರು ಜಿಲ್ಲೆ ವರುಣ ವಿಧಾನಸಬಾ ಕ್ಷೇತ್ರದ ವರಕೋಡು ಗೇಟ್ ಬಳಿಯ ಬ್ಲೂ ವೆರ್ಸಲ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಸಂಘಟನ್ ಸೃಜನ್ … Read more

ವರದನಾಯಕನಹಳ್ಳಿ ಗ್ರಾಮದ ರೈತ ಜಗದೀಶ್‌ ಅವರ ಹಿಪ್ಪುನೇರಳೆ ತೋಟಕ್ಕೆ ಅಪರಿಚಿತರು ವಿಷಕಾರಿ ರಾಸಾಯನಿಕ ಸಿಂಪಡಣೆ ಸೊಪ್ಪಿಗೆ ಹಾನಿ !

ವಿಜಯ ದರ್ಪಣ ನ್ಯೂಸ್….. ವರದನಾಯಕನಹಳ್ಳಿ ಗ್ರಾಮದ ರೈತ ಜಗದೀಶ್‌ ಅವರ ಹಿಪ್ಪುನೇರಳೆ ತೋಟಕ್ಕೆ ಅಪರಿಚಿತರು ವಿಷಕಾರಿ ರಾಸಾಯನಿಕ ಸಿಂಪಡಣೆ ಸೊಪ್ಪಿಗೆ ಹಾನಿ ! ಶಿಡ್ಲಘಟ್ಟ : ತಾಲ್ಲೂಕಿನ ವರದನಾಯಕನಹಳ್ಳಿ ಗ್ರಾಮದ ರೈತ ಜಗದೀಶ್‌ ಅವರ ಹಿಪ್ಪುನೇರಳೆ ತೋಟಕ್ಕೆ ಅಪರಿಚಿತರು ವಿಷಕಾರಿ ರಾಸಾಯನಿಕ ಸಿಂಪಡಿಸಿದ ಪರಿಣಾಮ ರೇಷ್ಮೆ ಕೃಷಿಗೆ ಹಾನಿಯಾಗಿರುವ ಘಟನೆ ನಡೆದಿದೆ, ಘಟನೆಯಿಂದ ಸುಮಾರು 20 ಮೂಟೆ ಹಿಪ್ಪುನೇರಳೆ ಸೊಪ್ಪು ಹಾನಿಗೊಳಗಾಗಿದೆ. ಸುಮಾರು 25 ವರ್ಷಗಳಿಂದ ರೇಷ್ಮೆ ಹುಳು ಸಾಕಾಣಿಕೆ ನಡೆಸುತ್ತಿರುವ ಜಗದೀಶ್ ಅವರು ಪ್ರತಿ ತಿಂಗಳು … Read more

ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಎಸ್‌ಡಿಎಂಸಿ ಸಮಿತಿ ರಚನೆ:  ಅಧ್ಯಕ್ಷರಾಗಿ ಜಹೀರುದ್ದೀನ್ ಆಯ್ಕೆ

ವಿಜಯ ದರ್ಪಣ ನ್ಯೂಸ್….. ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಎಸ್‌ಡಿಎಂಸಿ ಸಮಿತಿ ರಚನೆ:  ಅಧ್ಯಕ್ಷರಾಗಿ ಜಹೀರುದ್ದೀನ್ ಆಯ್ಕೆ ದೇವನಹಳ್ಳಿ : ವಿಜಯಪುರದ ಕುಬ ಮಸೀದಿ ಮುಂಭಾಗದಲ್ಲಿರುವ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (ಎಸ್‌ಡಿಎಂಸಿ) ರಚಿಸಲಾಯಿತು. ಇಂದು ನಡೆದ ಸಭೆಯಲ್ಲಿ ಜಹೀರುದ್ದೀನ್ ಅವರನ್ನು ಸರ್ವಾನುಮತದಿಂದ ಸಮಿತಿಯ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಸಮಿತಿಯ ಇತರ ಸದಸ್ಯರಾಗಿ ನಿಜಾಮುದ್ದೀನ್, ಎಸ್.ಕೆ. ಆರಿಫ್, ಅಸ್ಲಂ ಪಾಷಾ, ಮಹಬೂಬ್ ಪಾಷಾ, ಶಬೀರ್, ರಕೀಬಾ ಫಿರ್ದೌಸ್, ಆಯಿಷಾ, ಜಬಿನ ಹಾಗೂ ರುಖ್ಸಾರ್ … Read more

ಅಜ್ಞಾನದಿಂದ ಜ್ಞಾನದತ್ತ ಕೊಂಡೊಯ್ಯುವ ದಿವ್ಯಶಕ್ತಿ ಗುರು : ವೀರಬ್ರಹ್ಮಚಾರ್ ಗುರೂಜೀ

ವಿಜಯ ದರ್ಪಣ ನ್ಯೂಸ್…. ಗುರುಪೂರ್ಣಮಿ ಅಂಗವಾಗಿ ಗುರು ವಂದನೆ: ಅಭಯ ಶನೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಭಕ್ತಿಭಾವದ ಕಾರ್ಯಕ್ರಮ ಅಜ್ಞಾನದಿಂದ ಜ್ಞಾನದತ್ತ ಕೊಂಡೊಯ್ಯುವ ದಿವ್ಯಶಕ್ತಿ ಗುರು : ವೀರಬ್ರಹ್ಮಚಾರ್ ಗುರೂಜೀ ತಾವರೆಕೆರೆ : ಹೊಸಕೋಟೆ ತಾಲೂಕಿನ ದೊಡ್ಡನಲ್ಲೂರಹಳ್ಳಿ ಗ್ರಾಮದ ಶ್ರೀ ಕ್ಷೇತ್ರ ಸುಪ್ರಸಿದ್ಧ ಅಭಯ ಶನೇಶ್ವರ ಸ್ವಾಮಿ ಸನ್ನಿಧಿಯಲ್ಲಿ 19ನೇ ವರ್ಷದ ಗುರುಪೂರ್ಣಮಿ ಮಹೋತ್ಸವ, ಶ್ರೀ ಸತ್ಯನಾರಾಯಣ ಸ್ವಾಮಿಯ ವ್ರತ ಹಾಗೂ ಕ್ಷೇತ್ರದ ಧರ್ಮಾಧಿಕಾರಿಗಳಾದ ಶ್ರೀ ಶ್ರೀ ಡಾ. ಡಿ.ಎಲ್. ವೀರಬ್ರಹ್ಮಚಾರ್ ಗುರೂಜಿಗಳಿಗೆ ಭಕ್ತರಿಂದ ಗುರು ವಂದನಾ ಕಾರ್ಯಕ್ರಮವು … Read more

ಧ್ರುವನಾರಾಯಣ್ ಜನಪರ ಕಾಜಕಾರಣಕ್ಕೆ ಮಾದರಿ ವ್ಯಕ್ತಿತ್ವ ಸಚಿವ ಡಾ ಯತಿಂದ್ರಸಿದ್ದರಾಮಯ್ಯ.

ವಿಜಯ ದರ್ಪಣ ನ್ಯೂಸ್….. ಧ್ರುವನಾರಾಯಣ್ ಜನಪರ ಕಾಜಕಾರಣಕ್ಕೆ ಮಾದರಿ ವ್ಯಕ್ತಿತ್ವ ಸಚಿವ ಡಾ ಯತಿಂದ್ರಸಿದ್ದರಾಮಯ್ಯ. ತಾಂಡವಪುರ ಜುಲೈ 31-ದಿ.ಆರ್ ಧ್ರುವನಾರಾಯಣ್ ಅವರು ಎಲ್ಲಾ ಜಾತಿ ಧರ್ಮದ ಜನರನ್ನು ಪ್ರೀತಿಸುವ ಗೌರವಿಸುವ ಪ್ರವೃತಿ ಬೆಳೆಸಿಕೊಂಡಿದ್ದ ಆದರ್ಶ ಜನಾನುರಾಗಿ ರಾಜಕಾರಣಿಯಾಗಿದರು ಎಂದು ನಗರಾಭಿವೃದ್ಧಿ ಹಾಗೂ ಮೈಸೂರು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ ಹೇಳಿದರು. ನಂಜನಗೂಡು ವಿಧಾನಸಭಾ ಕ್ಷೇತ್ರಕ್ಕೆ ಸೇರುವ ತಾಲ್ಲೂಕಿನ ಹುಲ್ಲಹಳ್ಳಿ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ದಿ.ಆರ್ ಧ್ರುವನಾರಾಯಣ್ ಅವರ 65 … Read more