ಸಮ್ಮಿಲನ ತಿಂಮಸೇನೆಯ ತಿಂಗಳ ಕಾರ್ಯಕ್ರಮಗಳು ಎಲ್ಲರ ಮನಸ್ಸನ್ನು ಮುದಗೊಳಿಸುತ್ತವೆ
ವಿಜಯ ದರ್ಪಣ ನ್ಯೂಸ್ ರಾಮನಗರ: ನಗರ ವಾತಾವರಣದಲ್ಲಿ ಚದುರಿದಂತೆ ತಮ್ಮ ತಮ್ಮದೇ ಕೆಲಸಗಳಲ್ಲಿ ನಿರತರಾಗಿರುವ ಹಿರಿಯ ನಾಗರೀಕರು ಮತ್ತು ಮಧ್ಯವಯಸ್ಕರ ಸಮ್ಮಿಲನ ತಿಂಮಸೇನೆಯ ತಿಂಗಳ ಕಾರ್ಯಕ್ರಮ. ಇಲ್ಲಿ ಸಾಹಿತ್ಯ ಚರ್ಚೆ, ಕವಿತಾ ವಾಚನ, ಪುಸ್ತಕ ವಿಮರ್ಶೆ ಹಾಗೂ ತಿಂಮಿಯರಿಗಾಗಿ ಆಶುಭಾಷಣ ಸ್ಪರ್ಧೆ ಇತ್ಯಾದಿಗಳು ವಿಶೇಷ. ಇಂತಹ ಕಾರ್ಯಕ್ರಮಗಳು ಎಲ್ಲರ ಮನಸ್ಸನ್ನು ಮುದಗೊಳಿಸುತ್ತವೆ ಎಂದು ಜಾನಪದ ವಿದ್ವಾಂಸ ಡಾ. ಎಂ.ಬೈರೇಗೌಡ ನುಡಿದರು. ಜಗತ್ತಿನ ನಾಣ್ಯ, ನೋಟುಗಳು, ಸ್ಟಾಂಪುಗಳು ಹಾಗೂ ಸಾವಿರಕ್ಕೂ ಮೀರಿ ಖ್ಯಾತನಾಮರ ಹಸ್ತಾಕ್ಷರ ಸಂಗ್ರಾಹಕ ಕೆ.ವಿಶ್ವನಾಥ್ ಅವರ…