ಪಟಾಕಿ ದುರಂತಕ್ಕೆ ಯಾರು ಹೊಣೆ….

ವಿಜಯ ದರ್ಪಣ ನ್ಯೂಸ್….. ಪಟಾಕಿ ದುರಂತಕ್ಕೆ ಯಾರು ಹೊಣೆ…. ಬಡ ಕಾರ್ಮಿಕರ ಜೀವಕ್ಕೆ ಬೆಲೆ ಇಲ್ಲವೇ, ಲೇಸರ್ ಗಳ ಯುಗದಲ್ಲಿ ಪಟಾಕಿಗೇನು ಕೆಲಸ….. ಲೇಸರ್ ಗಳ ಯುಗದಲ್ಲಿ ಪಟಾಕಿಗಳಿಗಾಗಿ ಜೀವ ತೆರುತ್ತಿರುವ ಸಮಾಜದಲ್ಲಿ ನಾವಿದ್ದೇವೆ ಎಂದರೆ ಎಷ್ಟು ಅನಾಗರಿಕ ಸಮಾಜ ನಮ್ಮದು ಎಂದು ಊಹಿಸಿ. ಒಂದರ ಹಿಂದೆ ಒಂದು ಪಟಾಕಿ ದುರಂತಗಳು ದೇಶದಾದ್ಯಂತ ಸುದ್ದಿಯಾಗುತ್ತಿವೆ. ಅದನ್ನು ಕೇಳಿ ಕರುಳು ಹಿಂಡಿದಂತಾಗುತ್ತಿದೆ. ಬಹುತೇಕ ಇದು ಸರ್ಕಾರಿ ಪ್ರಾಯೋಜಿತ ಕೊಲೆ ಎಂದು ನಿಸ್ಸಂಶಯವಾಗಿ ಕರೆಯಬಹುದು. ಹಿಂದೆ ವಿದ್ಯುತ್ ಇಲ್ಲದಿದ್ದಾಗ ಬೆಳಕೆಂಬುದು … Read more

ಶ್ರದ್ಧಾ ಭಕ್ತಿಯಿಂದ ನಡೆದ ಕೋಡಗಲಹಟ್ಟಿ ‘ಶ್ರೀ ಓಂ ಶಕ್ತಿ’ ದೇವಾಲಯದ 4ನೇ ವಾರ್ಷಿಕೋತ್ಸವ

ವಿಜಯ ದರ್ಪಣ ನ್ಯೂಸ್…. ಶ್ರದ್ಧಾ ಭಕ್ತಿಯಿಂದ ನಡೆದ ಕೋಡಗಲಹಟ್ಟಿ ‘ಶ್ರೀ ಓಂ ಶಕ್ತಿ’ ದೇವಾಲಯದ 4ನೇ ವಾರ್ಷಿಕೋತ್ಸವ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಹುಣಸಮಾರನಹಳ್ಳಿ ಪುರಸಭಾ ವ್ಯಾಪ್ತಿಯ ಕೋಡಗಲಹಟ್ಟಿ ಗ್ರಾಮದೇವತೆ ಶ್ರೀ ಓಂ ಶಕ್ತಿ ದೇವಾಲಯದ 4ನೇ ವಾರ್ಷಿಕೋತ್ಸವವು ಸಹಸ್ರಾರು ಭಕ್ತರ ಪಾಲ್ಗೊಳ್ಳುವಿಕೆಯ ಮೂಲಕ ವಿಜೃಂಭಣೆಯಿಂದ ನೆರವೇರಿತು. ಮಹತ್ವದ ಈ ಕಾರ್ಯಕ್ರಮಕ್ಕೆ ಕಂದಾಯ ಸಚಿವರು, ಬ್ಯಾಟರಾಯನಪುರ ಶಾಸಕ ಕೃಷ್ಣಬೈರೇಗೌಡರು, ಶ್ರೀಮತಿ ಮೀನಾಕ್ಷಿ ಬೈರೇಗೌಡ ಅವರು ಪಾಲ್ಗೊಂಡು, ದರ್ಶನ ಪಡೆದು ದೇವಿಯ ಕೃಪೆಗೆ ಪಾತ್ರರಾದರು. ಕಾರ್ಯಕ್ರಮ ಉದ್ದೇಶಿಸಿ ಜಯ ಕರ್ನಾಟಕ … Read more

ಉಳ್ಳವರು ನಿರಂತರವಾಗಿ ದಾನ-ಧರ್ಮಗಳ ಮೂಲಕ ಸಹಾಯ ಹಸ್ತ ಚಾಚುವುದು ಅಗತ್ಯವಿದೆ : ಉಮೇಶ್ ಕರಿಗಾರ 

ವಿಜಯ ದರ್ಪಣ ನ್ಯೂಸ್…. ಉಳ್ಳವರು ನಿರಂತರವಾಗಿ ದಾನ-ಧರ್ಮಗಳ ಮೂಲಕ ಸಹಾಯ ಹಸ್ತ ಚಾಚುವುದು ಅಗತ್ಯವಿದೆ : ಉಮೇಶ್ ಕರಿಗಾರ  ಬ್ಯಾಡಗಿ : ಸಮಾಜದ ಒಳಿತಿಗಾಗಿ ಬಡವರ ಕಷ್ಟಗಳನ್ನು ಕಡಿಮೆ ಮಾಡಲು ಹಾಗೂ ದೇಗುಲಗಳ ಅಭಿವೃದ್ಧಿಗಾಗಿ ಉಳ್ಳವರು ನಿರಂತರವಾಗಿ ದಾನ-ಧರ್ಮಗಳ ಮೂಲಕ ಸಹಾಯ ಹಸ್ತ ಚಾಚುವುದು ಹಿಂದೆಂದಿಗಿಂತಲೂ ಈಗ ಅತ್ಯ ಅಗತ್ಯವಾಗಿದೆ ಎಂದು ಸಮಾಜ ಸೇವಕ ಉಮೇಶ್ ಕರಿಗಾರ ಹೇಳಿದರು. ಅವರು ಮಂಗಳವಾರ ತಾಲೂಕಿನ ರಾಮಗೊಂಡನಹಳ್ಳಿ ಗ್ರಾಮದಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನದ ಕಟ್ಟಡ ಕಾಮಗಾರಿ ಚಾಲನಾ ಕಾರ್ಯಕ್ರಮದಲ್ಲಿ ಭಾಗವಹಿಸಿ … Read more

ಧಾರ್ಮಿಕ ಶಂಕರಾಚಾರ್ಯರ ತತ್ವಗಳು ಇಂದಿಗೂ ಪ್ರಸ್ತುತ

ವಿಜಯ ದರ್ಪಣ ನ್ಯೂಸ್…. ಧಾರ್ಮಿಕ ಶಂಕರಾಚಾರ್ಯರ ತತ್ವಗಳು ಇಂದಿಗೂ ಪ್ರಸ್ತುತ ವಿಜಯಪುರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ : ಮಹಾನ್ ದಾರ್ಶನಿಕ ಶಂಕರಾಚಾ ರ್ಯರು ಹೇಳಿದ ಧಾರ್ಮಿಕ ತತ್ವ ವಿಚಾರಗಳು ಏಕತೆ ಸಾರುವ ಅದೈತ ತತ್ವಜ್ಞಾನ ಇಂದಿಗೂ ಪ್ರಸ್ತುತ ವಾಗಿವೆ ಎಂದು ರಾಮಕೃಷ್ಣ ಹೆಗಡೆ ತಿಳಿಸಿದರು. ಇವರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶಂಕರಾಚಾರ್ಯರ ಜಯಂತಿ ಅಂಗವಾಗಿ ಪ್ರಮುಖ ಬೀದಿಗಳಲ್ಲಿ ಪಲ್ಲಕಿಯೊಂದಿಗೆ ಶಂಕರಾಚಾರ್ಯರ ಭಾವ ಚಿತ್ರ ಮೆರವಣಿಗೆ ಮಾಡಿ ಮಾತನಾಡಿದರು. ಶಂಕರರು ಅಂದು ನೀಡಿದ ಮಾರ್ಗದರ್ಶನ ಇಂದಿ … Read more

ಕನ್ನಡ, ನೆಲ, ಜಲ, ಭಾಷೆ ಬಗ್ಗೆ ಶಾಲಾ , ಕಾಲೇಜುಗಳಲ್ಲಿ  ಅರಿವು ಮೂಡಿಸುವ ಕೆಲಸ ಮಾಡಬೇಕು : ಶಾಸಕ ಬಿ.ಎನ್.ರವಿಕುಮಾರ್‌

ವಿಜಯ ದರ್ಪಣ ನ್ಯೂಸ್… ಕನ್ನಡ, ನೆಲ, ಜಲ, ಭಾಷೆ ಬಗ್ಗೆ ಶಾಲಾ , ಕಾಲೇಜುಗಳಲ್ಲಿ  ಅರಿವು ಮೂಡಿಸುವ ಕೆಲಸ ಮಾಡಬೇಕು : ಶಾಸಕ ಬಿ.ಎನ್.ರವಿಕುಮಾರ್‌  ಶಿಡ್ಲಘಟ್ಟ : ಕನ್ನಡ, ನೆಲ, ಜಲ, ಭಾಷೆ, ಸಾಹಿತ್ಯದ ಬಗ್ಗೆ ಹೆಚ್ಚಿನ ಕಾರ್ಯಕ್ರಮಗಳನ್ನು ಶಾಲಾ ,ಕಾಲೇಜು ಹಾಗು ಸಾರ್ವಜನಿಕ ಸ್ಥಳಗಳಲ್ಲಿ ಮಾಡಿ ಅರಿವು ಮೂಡಿಸುವ ಕೆಲಸ ಮಾಡಬೇಕೆಂದು ಪದಾಧಿಕಾರಿಗಳಿಗೆ ಶಾಸಕರಾದ ಬಿ.ಎನ್.ರವಿಕುಮಾರ್‌ ಮನವಿ ಮಾಡಿದರು. ನಗರದ ತಾಲ್ಲೂಕು ಪಂಚಾಯತಿ ಆವರಣದಲ್ಲಿ ‘ಕನ್ನಡ ಸಾಹಿತ್ಯ ಪರಿಷತ್ತು ಕಚೇರಿ’ ಉದ್ಘಾಟನೆ ಹಾಗು ಬಸವ ಜಯಂತಿ … Read more

ವಿಶ್ವಗುರು ಬಸವಣ್ಣನವರ ಜಯಂತಿ ದಿನದಂದು ಎತ್ತು ಮತ್ತು ರಾಸುಗಳ ಪೂಜೆ, ಮೆರವಣಿಗೆ ಹಾಗೂ ಉತ್ಸವ ಅಸಂಬದ್ಧವಾಗಿದೆ:  ಡಾ. ಸತೀಶ್ ಕೆ. ಇಟಗಿ

ವಿಜಯ ದರ್ಪಣ ನ್ಯೂಸ್…. ವಿಶ್ವಗುರು ಬಸವಣ್ಣನವರ ಜಯಂತಿ ದಿನದಂದು ಎತ್ತು ಮತ್ತು ರಾಸುಗಳ ಪೂಜೆ, ಮೆರವಣಿಗೆ ಹಾಗೂ ಉತ್ಸವ ಅಸಂಬದ್ಧವಾಗಿದೆ:  ಡಾ. ಸತೀಶ್ ಕೆ. ಇಟಗಿ ಮುದ್ದೇಬಿಹಾಳ : ಬಸವ ಜಯಂತಿ ದಿನದಂದು ಎತ್ತುಗಳ ಉತ್ಸವ ಸಲ್ಲದು ನಾಲತ್ವಾಡ : ವಿಶ್ವಗುರು ಬಸವಣ್ಣನವರ ಜಯಂತಿ ದಿನದಂದು ಎತ್ತು ಮತ್ತು ರಾಸುಗಳ ಪೂಜೆ, ಮೆರವಣಿಗೆ ಹಾಗೂ ಉತ್ಸವ ಅಸಂಬದ್ಧವಾಗಿದೆ ಎಂದು ಪತ್ರಿಕೋದ್ಯಮ ಪ್ರಾಧ್ಯಾಪಕ ಡಾ. ಸತೀಶ್ ಕೆ. ಇಟಗಿ ಹೇಳಿದರು. ಅವರು ಪಟ್ಟಣದಲ್ಲಿ ವಿಶ್ವಗುರು ಬಸವಣ್ಣನವರ 893ನೆ ಜಯಂತಿ … Read more

ಮುಂದೊಂದು ದಿನ ನಿಖಿಲ್ ಮುಖ್ಯಮಂತ್ರಿ ಆಗೇ ಆಗ್ತಾರೆ: ಮೂರು ಚುನಾವಣೆಯಲ್ಲಿ ಸೋತಿದ್ದರೂ ಅಧಿಕಾರಕ್ಕೆ ಅಂಟಿಕೊಂಡಿಲ್ಲ: G.D ಹರೀಶ್ ಗೌಡ

ವಿಜಯ ದರ್ಪಣ ನ್ಯೂಸ್…. ಮುಂದೊಂದು ದಿನ ನಿಖಿಲ್ ಮುಖ್ಯಮಂತ್ರಿ ಆಗೇ ಆಗ್ತಾರೆ : ಮೂರು ಚುನಾವಣೆಯಲ್ಲಿ ಸೋತಿದ್ದರೂ ಅಧಿಕಾರಕ್ಕೆ ಅಂಟಿಕೊಂಡಿಲ್ಲ; G.D ಹರೀಶ್ ಗೌಡ ಮೈಸೂರು: ಮೂರು ಚುನಾವಣೆಯಲ್ಲಿ ಸೋತಿದ್ದರೂ ನಿಖಿಲ್ ಕುಮಾರಸ್ವಾಮಿ ಅಧಿಕಾರಕ್ಕೆ ಅಂಟಿಕೊಂಡಿಲ್ಲ, ಪಕ್ಷದ ಬೆಳವಣಿಗೆಗಾಗಿ ಶ್ರಮಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಿಖಿಲ್ ಕುಮಾರಸ್ವಾಮಿ ಕೂಡ ರಾಜ್ಯದ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಶಾಸಕ ಜಿ.ಡಿ ಹರೀಶ್ ಗೌಡ ವಿಶ್ವಾಸ ವ್ಯಕ್ತಪಡಿಸಿದರು. ಮೈಸೂರಿನಲ್ಲಿ ಜನರೊಂದಿಗೆ ಜನತಾದಳ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದೆ ಮೈಸೂರು ಜಿಲ್ಲೆಯ ಮೂರು ವಿಧಾನಸಭೆ … Read more

ಜಿಲ್ಲಾಡಳಿತ ಭವನದಲ್ಲಿ ಬಸವಣ್ಣ ಹಾಗೂ ಶಂಕರಾಚಾರ್ಯರ ಜಯಂತಿ ಆಚರಣೆ

ವಿಜಯ ದರ್ಪಣ ನ್ಯೂಸ್….. ಜಿಲ್ಲಾಡಳಿತ ಭವನದಲ್ಲಿ ಬಸವಣ್ಣ ಹಾಗೂ ಶಂಕರಾಚಾರ್ಯರ ಜಯಂತಿ ಆಚರಣೆ ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ  ಏ.21:- ಬಸವ ಜಯಂತಿ ಹಾಗೂ ಶಂಕರಾಚಾರ್ಯರ ಜಯಂತಿ ಪ್ರಯುಕ್ತ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಬಸವಣ್ಣನವರ ಕಂಚಿನ ಪ್ರತಿಮೆ ಮಂಟಪದ ಬಳಿ ಜಗಜ್ಯೋತಿ ಬಸವಣ್ಣನವರ ಹಾಗೂ ಜಗದ್ಗುರು ಶಂಕರಾಚಾರ್ಯರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಡಾ. ಕೆ. ಎನ್ ಅನುರಾಧ ಅವರು ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು … Read more

ದೇವನಹಳ್ಳಿಯಲ್ಲಿ ಜೆಡಿಎಸ್ ವತಿಯಿಂದ ಬೃಹತ್ ಪ್ರತಿಭಟನೆ: ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ

ವಿಜಯ ದರ್ಪಣ ನ್ಯೂಸ್….. ದೇವನಹಳ್ಳಿಯಲ್ಲಿ ಜೆಡಿಎಸ್ ವತಿಯಿಂದ ಬೃಹತ್ ಪ್ರತಿಭಟನೆ: ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ   ​ದೇವನಹಳ್ಳಿ: ಲೋಕಸಭೆಯಲ್ಲಿ 33% ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧಿಸಿ ಹಾಗೂ ಮಹಿಳೆಯರಿಗೆ ಅಗೌರವ ತೋರುತ್ತಿರುವ ರಾಜ್ಯದ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಜಾತ್ಯತೀತ ಜನತಾದಳದ ವತಿಯಿಂದ ದೇವನಹಳ್ಳಿ ವಿಧಾನ ಕ್ಷೇತ್ರದ ಮಾಜಿ ಶಾಸಕ ಶ್ರೀ ನಿಸರ್ಗ ನಾರಾಯಣಸ್ವಾಮಿ ರವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಸರ್ಕಾರದ ಜನವಿರೋಧಿ ಧೋರಣೆಗಳನ್ನು ಖಂಡಿಸಿದ ಪ್ರತಿಭಟನಾಕಾರರು, … Read more

ಕೆಲ ಬಲಾಢ್ಯರು ಒತ್ತುವರಿ ಮಾಡಿಕೊಂಡಿರುವ ಗೋಮಾಳ ಜಾಗವನ್ನು ದನಕರುಗಳು ಮೇಯಲು ಬಿಡ್ಬೇಕು ಎಂದು ಪ್ರತಿಭಟನೆ 

ವಿಜಯ ದರ್ಪಣ ನ್ಯೂಸ್…. ಕೆಲ ಬಲಾಢ್ಯರು ಒತ್ತುವರಿ ಮಾಡಿಕೊಂಡಿರುವ ಗೋಮಾಳ ಜಾಗವನ್ನು ದನಕರುಗಳು ಮೇಯಲು ಬಿಡ್ಬೇಕು ಎಂದು ಪ್ರತಿಭಟನೆ  ಶಿಡ್ಲಘಟ್ಟ – ಹಸುಗಳನ್ನು ಮೇಯಿಸಲು ಗೋಮಾಳ ಜಾಗವಿಲ್ಲ ಗ್ರಾಮದ ಕೆಲ ಬಲಾಡ್ಯರು ಒತ್ತುವರಿ ಮಾಡಿಕೊಂಡಿದ್ದು ,ಮೂಗ ಜೀವಗಳನ್ನು ಮೇಯಿಸಲು ಗೋಮಾಳ ಜಾಗ ಬಿಟ್ಟುಕೊಡುವಂತೆ ವರದನಾಯಕನಹಳ್ಳಿಯ ಜಾನಪದ ಕಲಾವಿದ ಈಧರೆ ಪ್ರಕಾಶ್ ಅವರು ಪತ್ನಿ, ಮಕ್ಕಳು, ಹಸು, ಕುರಿಗಳೊಂದಿಗೆ ತಾಲೂಕು ಕಚೇರಿ ಮುಂದೆ ತಮಟೆ ಬಾರಿಸಿಕೊಂಡು ಪ್ರತಿಭಟನೆ ನಡೆಸಿದರು. ಗ್ರಾಮಸ್ಥರಿಂದ ಎದುರಾಗುತ್ತಿರುವ ನಿರಂತರ ಮಾನಸಿಕ ಕಿರುಕುಳ ತಪ್ಪಿಸಿ ಎಂದು … Read more