
ಮರಳಿ ಬಂದು ಬೀಡು ಹೂಗುಚ್ಛ ಹಿಡಿದು….
ಜಯಶ್ರೀ. ಜೆ. ಅಬ್ಬಿಗೇರಿ ಮೊದಲೇ ನಾನು ಬಯಲು ಸೀಮೆಯಲ್ಲಿ ಹುಟ್ಟಿ ಬೆಳೆದ ಹಳ್ಳಿ ಹೈದ. ನಿನ್ನಂತಹ ಕಡಲ ತೀರದ ಬಟ್ಟಲುಗಣ್ಣಿನ ಚೆಲುವಿ ಕಣ್ಣಿಗೆ ಬಿದ್ದಾಗ ಬೆರಳುಗಳು ಗೀಚಿದ ಕವಿತೆಗಳಿಗಳಿಗೆ ಲೆಕ್ಕವಿಲ್ಲ. ನಮ್ಮೀರ್ವರ ನವಿರಾದ ಪ್ರೇಮ ಕತೆಯನ್ನು ಪದಗಳಲ್ಲಿ ಕಟ್ಟಿಕೊಡುವುದು ನನ್ನಂತಹ ಒರಟನಿಗೆ ತುಸು ಕಷ್ಟವೇ ಅನ್ನು. ಮೊದಲ ಸಲದ ಪ್ರೀತಿಯೇ ಅಂಥದ್ದು ಏನೋ ವಿನೂತನ. ನಮ್ಮಲ್ಲೆಲ್ಲ ಹೋಳಿ ಹಬ್ಬವೆಂದರೆ ಒಬ್ಬರಿಗೊಬ್ಬರು ಬಣ್ಣ ಹಚ್ಚಿ ಎರಚಿ ಸಂಭ್ರಮಿಸುವುದು ಸಾಮಾನ್ಯ. ನಿಮ್ಮಲ್ಲಿ ಪುರುಷರು ಮೇಳವನ್ನು ಕಟ್ಟಿಕೊಂಡು ಬಣ್ಣ ಬಣ್ಣದ ಧಿರಿಸು…