Editor VijayaDarpana

ಭಾರತದಲ್ಲಿನ ಫೋರ್ಬ್ಸ್ ಗ್ಲೋಬಲ್ 2000 ಜಾಗತಿಕ ಸಾಮರ್ಥ್ಯ ಕೇಂದ್ರಗಳಲ್ಲಿ (GCC) 60% ಕೇಂದ್ರಗಳು ಬೆಂಗಳೂರಿನಲ್ಲಿವೆ : ANSR GCC ವರದಿ

ವಿಜಯ ದರ್ಪಣ ನ್ಯೂಸ್…. ಭಾರತದಲ್ಲಿನ ಫೋರ್ಬ್ಸ್ ಗ್ಲೋಬಲ್ 2000 ಜಾಗತಿಕ ಸಾಮರ್ಥ್ಯ ಕೇಂದ್ರಗಳಲ್ಲಿ (GCC) 60% ಕೇಂದ್ರಗಳು ಬೆಂಗಳೂರಿನಲ್ಲಿವೆ : ANSR GCC ವರದಿ ಜನವರಿ 21, 2025: ANSR Q3 GCC ವರದಿಯ ಪ್ರಕಾರ, ಭಾರತವು ಜಾಗತಿಕ ಸಾಮರ್ಥ್ಯ ಕೇಂದ್ರಗಳಿಗೆ ,ಪ್ರಮುಖ ಕೇಂದ್ರವಾಗಿ ತನ್ನನ್ನು ತಾನು ದೃಢವಾಗಿ ಸ್ಥಾಪಿಸಿಕೊಂಡಿದ್ದು, 450ಕ್ಕೂ ಹಚ್ಚು ಫೋರ್ಬ್ಸ್ ಗ್ಲೋಬಲ್ 2000 ಕಂಪನಿಗಳು 825 ಕ್ಕೂ ಹೆಚ್ಚು ಕೇಂದ್ರಗಳನ್ನು ನಿರ್ವಹಿಸುತ್ತಿವೆ. ANSR ವರದಿ ಪ್ರಕಾರ, ಈ ಉತ್ಸಾಹಭರಿತ ಪರಿಸರ ವ್ಯವಸ್ಥೆಯು ಕೇವಲ…

Read More

ಮಹಾ ಕುಂಭಮೇಳ……

ವಿಜಯ ದರ್ಪಣ ನ್ಯೂಸ್…. ಮಹಾ ಕುಂಭಮೇಳ…… ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಗಂಗಾ ಯಮುನಾ ಸರಸ್ವತಿ ಎಂಬ ತ್ರಿವಳಿ ನದಿಗಳ ಸಂಗಮದಲ್ಲಿ ಮಿಂದು ಮೀಯುವ ಉತ್ಸವ, ನಾನಾ ಕಾರಣಗಳಿಗಾಗಿ ಇಡೀ ರಾಷ್ಟ್ರದಾದ್ಯಂತ ಗಮನ ಸೆಳೆದಿದೆ. ಮಹಾ ಕುಂಭಮೇಳ ಒಂದು ಸಾಂಸ್ಕೃತಿಕ ಉತ್ಸವವೇ ಅಥವಾ ಧಾರ್ಮಿಕ ಆಚರಣೆಯೇ ಅಥವಾ ನಂಬಿಕೆಯ ಸಂಪ್ರದಾಯವೇ ಅಥವಾ ದೈವಭಕ್ತಿಯ ಉತ್ತುಂಗವೇ ಅಥವಾ ಮೌಢ್ಯವೇ ಅಥವಾ ಪುಣ್ಯ ಸ್ನಾನವೇ ಅಥವಾ ದೇಹ ಮತ್ತು ಮನಸ್ಸುಗಳ ಶುದ್ಧೀಕರಣವೇ ಅಥವಾ ವೈಚಾರಿಕ ಪ್ರಜ್ಞೆಯೇ ಅಥವಾ…

Read More

2019 ರ ಜನವರಿ 21 ರಂದು ನಮ್ಮನ್ನಗಲಿದ ಸಿದ್ದಗಂಗಾ ಮಠದ ಶ್ರೀಗಳನ್ನು ನೆನೆಯುತ್ತಾ……

ವಿಜಯ ದರ್ಪಣ ನ್ಯೂಸ್ …. 2019 ರ ಜನವರಿ 21 ರಂದು ನಮ್ಮನ್ನಗಲಿದ ಸಿದ್ದಗಂಗಾ ಮಠದ ಶ್ರೀಗಳನ್ನು ನೆನೆಯುತ್ತಾ…… ಇಬ್ಬರು ಮನುಷ್ಯರ ಆಯಸ್ಸನ್ನು ಒಬ್ಬರೇ ಪಡೆದ ಅದೃಷ್ಟವಂತರ ಸಾಧನೆಯ ಒಂದು ನೋಟ….. ನಡೆದಾಡುವ ದೇವರಲ್ಲ, ನಲಿದಾಡುವ – ನುಡಿದಾಡಿದ ಜೀವಪ್ರೀತಿಯ ನಿಜ ಮನುಷ್ಯನಾಗಿದ್ದ ಸಿದ್ದಗಂಗೆಯ ಶಿವಕುಮಾರ ಸ್ವಾಮಿ ಎಂಬ ಶಿವಣ್ಣ…………… ಸಾಧಾರಣ ಕುಟುಂಬದ ಬಾಲಕನೊಬ್ಬ ಉಚಿತ ವಸತಿ ಶಾಲೆಯ ವಿದ್ಯಾರ್ಥಿಯಾಗಿ ತನ್ನ ವಿನಯ, ಪ್ರತಿಭೆ, ಜ್ಞಾನ, ನಡವಳಿಕೆಯಿಂದ – ಪರಿಸ್ಥಿತಿ ನಿರ್ಮಿಸಿದ ಅವಕಾಶದಿಂದ ಸನ್ಯಾಸತ್ವ ಸ್ವೀಕರಿಸಿ ಸಿದ್ದಗಂಗೆ…

Read More

ಗೌಡರ ಬಗ್ಗೆ  ಅವಹೇಳನಕಾರಿ ವಿಚಾರಕ್ಕೆ ಖಂಡಿಸಿ ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ

ವಿಜಯ ದರ್ಪಣ ನ್ಯೂಸ್…. ಗೌಡರ ಬಗ್ಗೆ  ಅವಹೇಳನಕಾರಿ ವಿಚಾರಕ್ಕೆ ಖಂಡಿಸಿ ಮಡಿಕೇರಿಯಲ್ಲಿ  ಬೃಹತ್ ಪ್ರತಿಭಟನೆ ಮಡಿಕೇರಿ: ಗೌಡ ಜನಾಂಗದ ಬಗ್ಗೆ ಅವಹೇಳನ ವಿಚಾರ ಗೌಡ ಸಮಾಜದಿಂದ‌ ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಗೌಡರ ಬಗ್ಗೆಗಿನ ಅವಹೇಳನಕಾರಿ ವಿಚಾರಕ್ಕೆ ಖಂಡನೆ ವ್ಯಕ್ತಪಡಿಸಿ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ ಗೌಡ ಬಾಂಧವರು ಮಡಿಕೇರಿಯ ಗುಡ್ಡೆಮನೆ ಅಪ್ಪಯ್ಯ ಗೌಡ ಪ್ರತಿಮೆ ಬಳಿಯಿಂದ ಆರಂಭವಾದ ಮೆರವಣಿಗೆ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಸಾಗಿತು. ಪ್ರತಿಭಟನೆಗ ಮೈಸೂರು, ಬೆಂಗಳೂರು ಗೌಡ ಸಮಾಜಗಳು ಸಾಥ್ ನೀಡಿದವು. ಶಾಂತಿಯುತವಾಗಿ ನಡೆದ…

Read More

ಆಯುಷ್ಮಾನ್ ಕಾರ್ಡ್ ಹೊಂದಿದ ಪ್ರತಿಯೊಬ್ಬರಿಗೂ ಉಚಿತ ಚಿಕಿತ್ಸೆ: ಸಂಸದ ಡಾ.ಕೆ ಸುಧಾಕರ್

ವಿಜಯ ದರ್ಪಣ ನ್ಯೂಸ್… ರೈತರು ಪ್ರಮ್ಮಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಸದುಪಯೋಗ ಪಡೆದುಕೊಳ್ಳಿ ಆಯುಷ್ಮಾನ್ ಕಾರ್ಡ್ ಹೊಂದಿದ ಪ್ರತಿಯೊಬ್ಬರಿಗೂ 5 ಲಕ್ಷದವರೆಗೆ ಉಚಿತ ಚಿಕಿತ್ಸೆ: ಸಂಸದ ಡಾ.ಕೆ ಸುಧಾಕರ್ ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜನವರಿ 17, 2025: ಆಯುಷ್ಮಾನ್ ಕಾರ್ಡ್ ಹೊಂದಿದ ಪ್ರತಿಯೊಬ್ಬರಿಗೂ 5 ಲಕ್ಷ ವರೆಗಿನ ಉಚಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯ ದೊರಕಲಿದ್ದು, ಈ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ಅರಿವು ಮೂಡಿಸಿ ಎಂದು ಅಧಿಕಾರಿಗಳಿಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ…

Read More

ಭಾರತ ಸ್ವಾತಂತ್ರ್ಯವಾದದ್ದು ಎಂದು…….

ವಿಜಯ ದರ್ಪಣ ನ್ಯೂಸ್…. ಭಾರತ ಸ್ವಾತಂತ್ರ್ಯವಾದದ್ದು ಎಂದು………. ಇತ್ತೀಚೆಗೆ ಕೆಲವರು ಬೇರೆ ಬೇರೆ ಸಂದರ್ಭ, ಸನ್ನಿವೇಶಗಳನ್ನು ಉದಾಹರಣೆಯಾಗಿ ತೆಗೆದುಕೊಂಡು ” ಆ ದಿನ ” ಭಾರತದ ನಿಜವಾದ ಸ್ವಾತಂತ್ರ್ಯ ಗಳಿಸಿದ್ದು ಎಂದು ಹೇಳುತ್ತಿದ್ದಾರೆ. ಇನ್ನೂ ಕೆಲವರು ಭಾರತ ಈಗಲೂ ವಾಸ್ತವವಾಗಿ ಸ್ವತಂತ್ರವಾಗಿಯೇ ಇಲ್ಲ. ಬಹುತೇಕ ಅನುವಂಶಿಯ, ಗುಲಾಮಗಿರಿಯ, ಬಂಡವಾಳ ಶಾಹಿಯ ಮುಭಕ್ತ ಸಂಸ್ಕೃತಿಯ ಮನಸ್ಥಿತಿಯಲ್ಲಿಯೇ ಭಾರತದ ಬಹುತೇಕ ಜನರು ಇರುವುದರಿಂದ, ದೇವರು, ಧರ್ಮ, ನ್ಯಾಯಾಲಯಗಳು ಬಹುತೇಕ ಶ್ರೀಮಂತರ, ಬಲಾಢ್ಯರ ಪಾಲೇ ಆಗಿರುವುದರಿಂದ, ಜೊತೆಗೆ ಈಗಲೂ ಭಾರತ ಹಸಿವಿನ…

Read More

ಗೋವಾ ಮತ್ತು ಕೇರಳಕ್ಕೆ ಹೊಸ ಮಾರ್ಗಗಳನ್ನು ಪರಿಚಯಿಸುವ ಮೂಲಕ ತನ್ನ ಸೇವೆ ವಿಸ್ತರಿಸುತ್ತಿರುವ ಫ್ಲಿಕ್ಸ್‌ಬಸ್ ಇಂಡಿಯಾ

ವಿಜಯ ದರ್ಪಣ ನ್ಯೂಸ್…. ಗೋವಾ ಮತ್ತು ಕೇರಳಕ್ಕೆ ಹೊಸ ಮಾರ್ಗಗಳನ್ನು ಪರಿಚಯಿಸುವ ಮೂಲಕ ದಕ್ಷಿಣ ಭಾರತದಲ್ಲಿ ತನ್ನ ಸೇವೆ ವಿಸ್ತರಿಸುತ್ತಿರುವ ಫ್ಲಿಕ್ಸ್‌ಬಸ್ ಇಂಡಿಯಾ ಫ್ಲಿಕ್ಸ್‌ಬಸ್, ಬೆಂಗಳೂರಿನಿಂದ ಗೋವಾ ಮತ್ತು ಅಲೆಪ್ಪಿಗೆ ರಾತ್ರಿ ಸೇವೆಗಳನ್ನು ಪರಿಚಯಿಸಿದ್ದು, ಕ್ರಮವಾಗಿ ₹1600 ಮತ್ತು ₹1400 ಬೆಲೆಯಲ್ಲಿ ಕೈಗೆಟುಕುವ, ಪರಿಸರ ಸ್ನೇಹಿ ಪ್ರಯಾಣ ಆಯ್ಕೆಗಳನ್ನು ನೀಡಲಿದೆ. ಬೆಂಗಳೂರು: ಜನವರಿ 17, 2025: ಸುಸ್ಥಿರ ಮತ್ತು ಕೈಗೆಟುಕುವ ಪ್ರಯಾಣ ಆಯ್ಕೆಗಳನ್ನು ಒದಗಿಸುವ ಜಾಗತಿಕ ಪ್ರಯಾಣ ಸ್ನೇಹಿ ತಂತ್ರಜ್ಞಾನದ ನಾಯಕ ಫ್ಲಿಕ್ಸ್‌ಬಸ್, ಜನವರಿ 17, 2025…

Read More

ಅಭಿವೃದ್ಧಿ ಹೊಂದುತ್ತಿರುವ ಭಾರತೀಯ ಸಹಕಾರಿ ಹಾಲು ಉತ್ಪಾದಕ ಸಂಘಗಳು

ವಿಜಯ ದರ್ಪಣ ನ್ಯೂಸ್…. ಅಭಿವೃದ್ಧಿ ಹೊಂದುತ್ತಿರುವ ಭಾರತೀಯ ಸಹಕಾರಿ ಹಾಲು ಉತ್ಪಾದಕ ಸಂಘಗಳು ರಾಷ್ಟ್ರೀಯ  ಡೈರಿ ವಿಕಾಸ ಬೋರ್ಡು (ಎನ್.ಡಿ.ಡಿ.ಬಿ.) ಇತ್ತೀಚಿಗಷ್ಟೇ ತನ್ನ ಗೋಲ್ಡನ್ ಜೂಬಲೀ ಸಮಾರಂಭವನ್ನು ಆಚರಿಸಿಕೊಂಡಿತು, ಇದರಲ್ಲಿ ಕಳೆದ ಐದು ದಶಕಗಳಲ್ಲಿ ಭಾರತದಲ್ಲಿ ಡೈರಿ ಸಹಕಾರಿ ಸಂಘದ ಸಾಧನೆಗಳನ್ನು ಪ್ರಮುಖವಾಗಿ ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ ಶಾ, 300 ಕೋಟಿ ರೂ. ಮೌಲ್ಯದ ಹಲವಾರು ಕಲ್ಯಾಣ ಯೋಜನೆಗಳಿಗೆ ಚಾಲನೆ ನೀಡಿದರು. ಕೇಂದ್ರ ಸಚಿವರು ಪ್ರಾರಂಭಿಸಿದ ಯೋಜನೆಗಳನ್ನು ಹೈನುಗಾರರು,…

Read More

ಅರದೇಶನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆ: ಜೆಡಿಎಸ್-ಬಿಜೆಪಿ ಜಯಭೇರಿ

ವಿಜಯ ದರ್ಪಣ ನ್ಯೂಸ್… ಅರದೇಶನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆ: ಜೆಡಿಎಸ್-ಬಿಜೆಪಿ ಜಯಭೇರಿ   ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ: ತಾಲೂಕಿನ ಅರದೇಶನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಯ ಐದು ವರ್ಷಗಳ ಅವಧಿಗೆ ಚುನಾವಣೆ ನಡೆಯಿತು. ಚುನಾವಣೆಯಲ್ಲಿ 12 ಸ್ಥಾನದ ಪೈಕಿ 1 ಸ್ಥಾನ ಅವಿರೋಧವಾಗಿ  ಆಯ್ಕೆಗೊಂಡಿದ್ದು , ಉಳಿದ 11 ಸ್ಥಾನಕ್ಕೆ ಚುನಾವಣೆ ನಡೆಯಿತು . ಚುನಾವಣೆಯಲ್ಲಿ ಸಾಮಾನ್ಯ ಮೀಸಲು ಕ್ಷೇತ್ರದಿಂದ ಚನ್ನಪ್ಪ.ಕೆ (35), ದೇವರಾಜು.ಕೆ (35),  ಪ್ರತಾಪ್.ಪಿ,(34) ,…

Read More

ಆಹಾರ – ಆರೋಗ್ಯ – ಆಯಸ್ಸು – ಅನುಭವ – ಅಭಿಪ್ರಾಯ………..

ವಿಜಯ ದರ್ಪಣ ನ್ಯೂಸ್… ಆಹಾರ – ಆರೋಗ್ಯ – ಆಯಸ್ಸು – ಅನುಭವ – ಅಭಿಪ್ರಾಯ……….. ದಿನನಿತ್ಯದ ಬದುಕಿನಲ್ಲಿ ಒಂದಷ್ಟು ಸಾಮಾನ್ಯ ಆರೋಗ್ಯ ಕಾಪಾಡಿಕೊಳ್ಳಬೇಕಾದರೆ ಕೆಲವು ಆಹಾರದ ಕ್ರಮಗಳನ್ನು ಅನುಸರಿಸುವ ಅಗತ್ಯವಿದೆ. ಈಗಾಗಲೇ ಇದರಲ್ಲಿ ‌ಸಾಕಷ್ಟು ಪ್ರಯೋಗಗಳು ಆಗಿವೆ. ಮಾಹಿತಿಯೂ ಲಭ್ಯವಿದೆ….. ಆದರೂ ವೈಯಕ್ತಿಕವಾಗಿ ನನ್ನ ಕೆಲವು ಅನುಭವದ ಸಲಹೆಗಳು…… ನಿಮ್ಮ ಆರ್ಥಿಕ ಪರಿಸ್ಥಿತಿ ತಕ್ಕಮಟ್ಟಿಗೆ ಉತ್ತಮವಾಗಿದ್ದರೆ ದಯವಿಟ್ಟು ಸಾಧ್ಯವಾದಷ್ಟು ನಿಮ್ಮ ಆಹಾರ ಕ್ರಮದಲ್ಲಿ ಇದನ್ನು ದಿನನಿತ್ಯ ಅಳವಡಿಸಿಕೊಳ್ಳಿ. ೧) ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಒಂದು…

Read More