ಬುದ್ಧ ಪೂರ್ಣಿಮೆಯ ಬೆಳಕಿನಲ್ಲಿ, ಯುದ್ಧ ಕಾಶ್ಮೀರದ ಕತ್ತಲಿನಲ್ಲಿ…….
ವಿಜಯ ದರ್ಪಣ ನ್ಯೂಸ್….. ಬುದ್ಧ ಪೂರ್ಣಿಮೆಯ ಬೆಳಕಿನಲ್ಲಿ, ಯುದ್ಧ ಕಾಶ್ಮೀರದ ಕತ್ತಲಿನಲ್ಲಿ……. .….ಶಾಂತಿ, ಅಹಿಂಸೆ, ಜ್ಞಾನ, ನೆಮ್ಮದಿಯನ್ನು ಹುಡುಕುತ್ತಾ…… ಸಿಗ್ಮಂಡ್ ಫ್ರಾಯ್ಡ್ ಎಂಬುವವನನ್ನು ಪ್ರಖ್ಯಾತ ಮನಶಾಸ್ತ್ರಜ್ಞ ಎಂದು ಕರೆಯಲಾಗುತ್ತದೆ. ಪಾಶ್ಚಾತ್ಯ ಸಂಸ್ಕೃತಿಯ ಹಿನ್ನಲೆಯ ಆತನ ವಿಚಾರಗಳು ವಿಶ್ವವ್ಯಾಪಿ ಮನ್ನಣೆ ಪಡೆದಿವೆ….. ಆದರೆ, ಭಾರತದ ಸಂಸ್ಕೃತಿಯ ಹಿನ್ನೆಲೆಯಲ್ಲಿ ಖ್ಯಾತ ಮನಃಶಾಸ್ತ್ರಜ್ಞ ಯಾರಿರಬಹುದು ? ನನ್ನ ದೃಷ್ಟಿಯಲ್ಲಿ ಅದು ಸಿದ್ದಾರ್ಥನೆಂಬ ಗೌತಮ ಬುದ್ಧ…………… ಜನಸಂಖ್ಯೆಯೇ ಅತಿ ವಿರಳವಾಗಿದ್ದ, ಸಂಪರ್ಕ ಸಂವಹನಗಳು ಅತ್ಯಂತ ಕಡಿಮೆ ಪ್ರಮಾಣದಲ್ಲಿದ್ದ, ಆಧುನಿಕ ತಂತ್ರಜ್ಞಾನದ ಯಾವ ಲಕ್ಷಣಗಳೂ…