ರಾಜ್ಯ ಗುಪ್ತವಾರ್ತೆ ನಿರ್ದೇಶಕ ಹೇಮಂತ್ ಎಂ ನಿಂಬಾಳ್ಕರ್‌ಗೆ ಮುಖ್ಯಮಂತ್ರಿಗಳ ಸ್ವರ್ಣಪದಕ ಪ್ರದಾನ

ವಿಜಯ ದರ್ಪಣ ನ್ಯೂಸ್…. ರಾಜ್ಯ ಗುಪ್ತವಾರ್ತೆ ನಿರ್ದೇಶಕ ಹೇಮಂತ್ ಎಂ ನಿಂಬಾಳ್ಕರ್‌ಗೆ ಮುಖ್ಯಮಂತ್ರಿಗಳ ಸ್ವರ್ಣಪದಕ ಪ್ರದಾನ ಬೆಂಗಳೂರು  ಏ.02: ರಾಜ್ಯದಲ್ಲಿ ನಕ್ಸಲ್ ಚಟುವಟಿಕೆಗಳನ್ನು “ಶೂನ್ಯ”ಗೊಳಿಸಲು ವಿಶೇಷ ಮುತುವರ್ಜಿಯಿಂದ ಪೊಲೀಸ್ ಕಾರ್ಯಾಚರಣೆಗೆ ಮುಂದಾಳತ್ವ ವಹಿಸಿ,ಮಾರ್ಗದರ್ಶನ ನೀಡುವ ಮೂಲಕ ಎಲ್ಲ ನಕ್ಸಲರನ್ನು ಶರಣಾಗುವಂತೆ ಮಾಡಿದ ರಾಜ್ಯ ಗುಪ್ತವಾರ್ತೆ ನಿರ್ದೇಶಕ ಹೇಮಂತ್ ಎಂ ನಿಂಬಾಳ್ಕರ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವರ್ಣಪದಕ ಪ್ರದಾನ ಮಾಡಿದರು. ಬೆಂಗಳೂರಿನ ಕೋರಮಂಗಲದ ಕರ್ನಾಟಕ ರಾಜ್ಯ ಮೀಸಲು ಪೋಲಿಸ್ ಪಡೆಯ ಪರೇಡ್ ಮೈದಾನದಲ್ಲಿ ಇಂದು ಬೆಳಿಗ್ಗೆ ಪೊಲೀಸ್…

Read More

ಯುದ್ದ ಮತ್ತು ಜೀವನ……

ವಿಜಯ ದರ್ಪಣ ನ್ಯೂಸ್… ಯುದ್ದ ಮತ್ತು ಜೀವನ…… ಬದುಕೊಂದು ಯುದ್ದ ಭೂಮಿ…………… ಗೆಲ್ಲಬಹುದು – ಸೋಲಬಹುದು – ಅನಿರೀಕ್ಷಿತವಾಗಿ ಸಾಯಬಹುದು……….. ರಣರಂಗದ ಎಲ್ಲಾ ಸಾಧ್ಯತೆಗಳು ಜೀವನದಲ್ಲೂ ಸಂಭವಿಸುವ ಅವಕಾಶ ಇದ್ದೇ ಇದೆ………‌ ಯುದ್ದದಲ್ಲಿ ಕತ್ತಿ, ಬಂದೂಕು, ಬಾಂಬು, ಗುಂಡುಗಳು ಯಾವ ಸಮಯದಲ್ಲಾದರೂ ನಮ್ಮನ್ನು ಗಾಯ ಮಾಡಬಹುದು ಅಥವಾ ಸಾಯಿಸಬಹುದು ಅಥವಾ ನಮ್ಮನ್ನು ಮುಟ್ಟದೇ ಹೋಗಬಹುದು….. ಯುದ್ದದಂತೆ ಬದುಕಿನಲ್ಲಿ ನಮ್ಮೊಂದಿಗೆ ಹಲವಾರು ಜನರಿರುತ್ತಾರೆ. ಕೆಲವೊಮ್ಮೆ ಮುಂದೆ, ಮತ್ತೆ ಕೆಲವರು ಹಿಂದೆ, ಹಲವರು ಆಗಾಗ ಜೊತೆಯಾಗುತ್ತಾರೆ ಅಥವಾ ಸಂದರ್ಭ ಸನ್ನಿವೇಶದ…

Read More

ದೇವರ ದಾಸಿಮಯ್ಯ ಜಯಂತಿ ಆಚರಣೆ

ವಿಜಯ ದರ್ಪಣ ನ್ಯೂಸ್…..  ದೇವರ ದಾಸಿಮಯ್ಯ ಜಯಂತಿ ಆಚರಣೆ ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ  ಏಪ್ರಿಲ್.02 : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ‘ದೇವರ ದಾಸಿಮಯ್ಯ’ ಜಯಂತಿಯನ್ನು ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಆಚರಿಸಲಾಯಿತು. ನೂತನ ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ ಅವರು ‘ದೇವರ ದಾಸಿಮಯ್ಯ’ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಗೌರವ ನಮನ ಸಲ್ಲಿಸಿದರು. ವೃತ್ತಿಯಲ್ಲಿ…

Read More

ಆಗದಿರಲಿ ಪ್ರೀತಿಯ ಒರತೆಗೆ ಕೊರತೆ

ವಿಜಯ ದರ್ಪಣ ನ್ಯೂಸ್… ಆಗದಿರಲಿ ಪ್ರೀತಿಯ ಒರತೆಗೆ ಕೊರತೆ ಬದುಕು ಬದಲಾಗುತ್ತಲೇ ಇರುತ್ತದೆ ನಿನ್ನೆಯಂತೆ ಇಂದು ಇಲ್ಲ. ಇಂದಿನಂತೆ ನಾಳೆ ಇರುವುದಿಲ್ಲ. ನಮಗೆ ಇಷ್ಟವಿರಲಿ ಬಿಡಲಿ ಅದು ಬದಲಾಗುತ್ತಲೇ ಇರುತ್ತದೆ. ನಮ್ಮ ಭಾವ ಬಂಧ ಸಂಬಂಧಗಳು ಬದಲಾಗುತ್ತಲೇ ಇರುತ್ತವೆ. ಬದುಕಲು ಬೇಕಾಗಿರುವುದು ಉತ್ತಮ ಆರೋಗ್ಯ, ತಲೆ ಮೇಲೊಂದು ಸೂರು, ತುಂಬಿದ ಜೇಬು. ಇವೆಲ್ಲ ಇದ್ದರೂ ಒಂದಿಷ್ಟು ಪ್ರೀತಿ ತುಂಬುವ ಜೀವವೊಂದು ಜತೆಗೆ ಇರದಿದ್ದರೆ, ಇವೆಲ್ಲವು ಇದ್ದೂ ಉಪಯೋಗವಿಲ್ಲ. ಕೋಟಿ ಕೋಟಿ ರೂಪಾಯಿ, ಅಪರೂಪದ ರೂಪ ಕೊಡದ ಆನಂದ…

Read More

ಒಳ ಮೀಸಲಾತಿ ಒಡೆದ ಮೀಸಲಾತಿ ಆಗುವ ಮುನ್ನ ಎಚ್ಚರವಹಿಸಿ……..

ವಿಜಯ ದರ್ಪಣ ನ್ಯೂಸ್…. ಒಳ ಮೀಸಲಾತಿ ಒಡೆದ ಮೀಸಲಾತಿ ಆಗುವ ಮುನ್ನ ಎಚ್ಚರವಹಿಸಿ…….. ಈ ಕ್ಷಣದ ಎಲ್ಲಾ ಶೋಷಿತ ಸಮುದಾಯಗಳ ನಾಯಕರು ದಯವಿಟ್ಟು ಗಂಭೀರವಾಗಿ ಯೋಚಿಸಿ. ಒಳ ಮೀಸಲಾತಿ ಖಂಡಿತವಾಗಲೂ ನ್ಯಾಯಯುತವಾದ ಬೇಡಿಕೆ. ಇಂದಲ್ಲ ನಾಳೆ ಬಹುಶಃ ಇನ್ನೇನು ಕೆಲವೇ ತಿಂಗಳುಗಳಲ್ಲಿ ಅದು ಜಾರಿಯಾಗಬಹುದು. ಅದಕ್ಕಾಗಿ ಹೋರಾಟ ನಿರಂತರವಾಗಿರಲಿ….. ಅದರಿಂದ ಅಂತಹ ಬಹುದೊಡ್ಡ ಕ್ರಾಂತಿಕಾರಕ ಬದಲಾವಣೆ ಏನು ಸಾಧ್ಯವಾಗುವುದಿಲ್ಲ. ಒಂದಷ್ಟು ಜನರಿಗೆ ಅದರಲ್ಲೂ ಇಲ್ಲಿಯವರೆಗೂ ಮೀಸಲಾತಿ ಮುಟ್ಟಲಾಗದ ಅರ್ಹರಿಗೆ ಸ್ವಲ್ಪಮಟ್ಟಿಗೆ ತಲುಪಬಹುದು. ಈಗಾಗಲೇ ಖಾಸಗಿಕರಣ ಮತ್ತು ಕಾರ್ಪೊರೇಟ್…

Read More

ಹಿಂದೂ ಮುಸ್ಲಿಂ ಬಾಂಧವರಿಗೆ ಹಬ್ಬಗಳು ಉತ್ತಮ ಬಾಂಧವ್ಯವನ್ನು ಬೆಸೆಯುವ ಹಬ್ಬಗಳಂತಾಗಲಿ: ಸಚಿವ ಕೆಹೆಚ್. ಮುನಿಯಪ್ಪ

ವಿಜಯ ದರ್ಪಣ ನ್ಯೂಸ್…. ಹಿಂದೂ ಮುಸ್ಲಿಂ ಬಾಂಧವರಿಗೆ ಹಬ್ಬಗಳು ಉತ್ತಮ ಬಾಂಧವ್ಯವನ್ನು ಬೆಸೆಯುವ ಹಬ್ಬಗಳಂತಾಗಲಿ: ಸಚಿವ ಕೆಹೆಚ್. ಮುನಿಯಪ್ಪ ದೇವನಹಳ್ಳಿ ಮಾರ್ಚ್31: ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆಹೆಚ್ ಮುನಿಯಪ್ಪ ನವರು ಇಂದು ದೇವನಹಳ್ಳಿಯ ಈದ್ಗಾ ಮೈದಾನ ಕ್ಕೆ ಬೇಟಿ ನೀಡಿ ರಂಜಾನ್ ಹಬ್ಬದ ಪ್ರಯುಕ್ತ ಮುಸಲ್ಮಾನ ಬಾಂದವರೊಂದಿಗೆ ಪ್ರಾರ್ಥನೆಯಲ್ಲಿ ಭಾಗವಹಿಸಿದರು. ನಂತರ ಮಾತನಾಡಿದ ಅವರು ಕ್ಷೇತ್ರದಲ್ಲಿ ಶಾಸಕನಾಗಿ ಎರಡು ವರ್ಷ ಕಳೆದಿದ್ದು  ಕ್ಷೇತ್ರದ ಅಭಿವೃದ್ಧಿ ಪ್ರಮುಖ ಪಾತ್ರ ವಹಿಸಲಾಗುತ್ತಿದೆ ಮುಸಲ್ಮಾನರ…

Read More

ರಂಜಾನ್, ಶಾಂತಿ, ಭಾವೈಕ್ಯತೆ, ಹಿಂಸೆ ಇತ್ಯಾದಿ ಆರೋಪಗಳ ಸುತ್ತಾ…….

ವಿಜಯ ದರ್ಪಣ ನ್ಯೂಸ್….. ರಂಜಾನ್, ಶಾಂತಿ, ಭಾವೈಕ್ಯತೆ, ಹಿಂಸೆ ಇತ್ಯಾದಿ ಆರೋಪಗಳ ಸುತ್ತಾ……. ಜಗತ್ತಿನ ಎರಡನೆಯ ಅತಿ ದೊಡ್ಡ ಜನಸಂಖ್ಯೆ ಹೊಂದಿರುವ ಸಮುದಾಯ ಮುಸ್ಲಿಮರದು. ಸ್ವಲ್ಪ ಯುರೋಪ್ ಮತ್ತು ಹೆಚ್ಚಾಗಿ ಏಷ್ಯಾದ ಮಧ್ಯಪ್ರಾಚ್ಯದಲ್ಲಿ ನೆಲೆಸಿರುವ ಮೂಲ ನಿವಾಸಿಗಳು, ಸೌದಿ ಅರೇಬಿಯಾದ ಮೆಕ್ಕಾವನ್ನು ಧಾರ್ಮಿಕ ಕೇಂದ್ರವಾಗಿ ಇಡೀ ಜಗತ್ತಿನಾದ್ಯಂತ ಪ್ರಸರಿಸಿದ್ದಾರೆ. ಕ್ರಿಶ್ಚಿಯನ್, ಮುಸ್ಲಿಂ, ಬೌದ್ಧ, ಹಿಂದೂಗಳು ಜನಸಂಖ್ಯೆಯ ಆಧಾರದ ಮೇಲೆ ಅತಿ ಹೆಚ್ಚು ಸಂಖ್ಯೆಯಲ್ಲಿ ಈ ಭೂಮಿಯ ಮೇಲೆ ವಾಸಿಸುತ್ತಿದ್ದಾರೆ. ಮುಸ್ಲಿಂ ಸಮುದಾಯದ ಅತ್ಯಂತ ಮಹತ್ವದ ಹಬ್ಬ ರಂಜಾನ್….

Read More

ಶ್ರೀ ಪ್ರಸನ್ನ ನಂಜುಂಡೇಶ್ವರ ದೇವಾಲಯದಲ್ಲಿ ಯುಗಾದಿ ಹೋಕುಳಿ ಉತ್ಸವ

ವಿಜಯ ದರ್ಪಣ ನ್ಯೂಸ್…  ಶ್ರೀ ಪ್ರಸನ್ನ ನಂಜುಂಡೇಶ್ವರ ದೇವಾಲಯದಲ್ಲಿ ಯುಗಾದಿ ಹೋಕುಳಿ ಉತ್ಸವ ತಾಂಡವಪುರ ಮಾರ್ಚ್ 30 ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ತಾಂಡವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಚಿಕ್ಕಯ್ಯನ ಛತ್ರ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧಿ ಉಳ್ಳ ಹಳೆ ಶ್ರೀ ಪ್ರಸನ್ನ ನಂಜುಂಡೇಶ್ವರ ದೇವಾಲಯದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಯುಗಾದಿ ಹೋಬಳಿ ಉತ್ಸವವು ಬಹಳ ವಿಜೃಂಭಣೆ ಜರುಗಿತು. ಯುಗಾದಿ ಹಬ್ಬದ ಪ್ರಯುಕ್ತ ಇಂದು ಬೆಳಿಗ್ಗೆಯಿಂದಲೂ  ದೇವಾಲಯದಲ್ಲಿ…

Read More

ತಲೆ ಗಟ್ಟಿಗಿದೆ ಅಂತ ಕಲ್ ಬೆಟ್ಟಕ್ಕೆ ಡಿಚ್ಚಿ ಹೊಡೆಯಕ್ ಆಯ್ತದ…?

ವಿಜಯ ದರ್ಪಣ ನ್ಯೂಸ್…. ತಲೆ ಗಟ್ಟಿಗಿದೆ ಅಂತ ಕಲ್ ಬೆಟ್ಟಕ್ಕೆ ಡಿಚ್ಚಿ ಹೊಡೆಯಕ್ ಆಯ್ತದ…? ತಲೆಗಟ್ಟಿಗೈತೆ ಅಂತಾ ಕಲ್ಲು ಬಂಡೆ ಇರೋ ಬೆಟ್ಟಕ್ಕೆ ಡಿಚ್ಚಿ ಹೊಡೆಯೋಕೋದ ವಿರೋಧಪಕ್ಷದ ನಾಯಕ ಯತ್ನಾಳ್ ಯಡವಟ್ಟಪ್ಪನ ಬೇಬಿ ವಿಜಯೇಂದ್ರನನ್ನೇ ಕೆಳಗಿಳಿಸೋ ಯತ್ನ ಮಾಡಿದ್ದ ಇವರನ್ನು ಪಕ್ಷದಿಂದಾನೇ ಉಚ್ಛಾಟನೆ ಮಾಡಿಸಿದ ವಿಜಯೇಂದ್ರನ ಅಪ್ಪ ಯಡಿಯೂರಪ್ಪ. ತನ್ನ ಸ್ವಪಕ್ಷದಿಂದ ಸ್ವಪಕ್ಷೀ ಯರಿಂದ ಏನೂ ಮಾಡಲಿ ಕ್ಕಾಗದ ಪರಿಸ್ಥಿತಿಗೆ ಬಂದಾಲಾಗಾಯ್ತು, ಮತ್ತೊಮ್ಮೆ ಮಗದೊಮ್ಮೆ ಕರ್ನಾಟಕದ ಭಾರತೀಯ ಜನತಾ ಪಕ್ಷಕ್ಕೆ ಯಡ್ಡೀನೇ ಗತಿ ಅಂತ ಬಿಜೆಪಿಯ ಹೈಕಮಾಂಡ್…

Read More

ನಿಮ್ಮ ವಾರ್ಷಿಕ ಭವಿಷ್ಯ……

ವಿಜಯ ದರ್ಪಣ ನ್ಯೂಸ್… ನಿಮ್ಮ ವಾರ್ಷಿಕ ಭವಿಷ್ಯ…… ಯಾವುದೇ ರಾಶಿಯವರಾಗಿದ್ದರೂ, ಮನುಷ್ಯರಾಗಿರುವವರಿಗೆ ಮಾತ್ರ…….. ಇಂದು ಮಾರ್ಚ್ 30, 2025/2026 ರವರೆಗೆ ಇಂದಿನ ಯುಗಾದಿಯಿಂದ ಪ್ರಾರಂಭವಾಗುವ ಹೊಸ ಸಂವತ್ಸರದ ವಾರ್ಷಿಕ ಭವಿಷ್ಯ… ಇದು ಎಲ್ಲಾ ಭಾರತೀಯರಿಗೂ, ಜಾತಿ ಮತ ಧರ್ಮ ಭಾಷೆ ಎಲ್ಲವೂ ಮೀರಿ ಅನ್ವಯವಾಗುತ್ತದೆ… ಮಾಧ್ಯಮಗಳಲ್ಲಿ ಅದರಲ್ಲೂ ಟೆಲಿವಿಷನ್ ಮತ್ತು ಪತ್ರಿಕಾ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರಾಶಿಯ ಜನರು ಮುಖ್ಯವಾಗಿ ತುಂಬಾ ಜ್ಯೋತಿಷ್ಯ ಶಾಸ್ತ್ರದ ನಂಬಿಕೆಯ ಹೆಣ್ಣು ಮಕ್ಕಳು ತೀವ್ರ ಕುತೂಹಲದಿಂದ ತಮ್ಮ ತಮ್ಮ…

Read More