ಛಾವಾ ( Chhaava ) ಸಿನಿಮಾ ಮತ್ತು ಔರಂಗಜೇಬ್ ಹಾಗೂ ಕೋಮುಗಲಭೆಗಳು…..

ವಿಜಯ ದರ್ಪಣ ನ್ಯೂಸ್….. ಛಾವಾ ( Chhaava ) ಸಿನಿಮಾ ಮತ್ತು ಔರಂಗಜೇಬ್ ಹಾಗೂ ಕೋಮುಗಲಭೆಗಳು….. ಇತಿಹಾಸವನ್ನು ಇತಿಹಾಸವಾಗಿ ನೋಡದೆ, ವರ್ತಮಾನದಲ್ಲಿ ತಮ್ಮ ಅನುಕೂಲಕ್ಕೆ ತಕ್ಕಂತೆ ವಿಮರ್ಶಗೊಳಪಡಿಸುತ್ತಾ, ಭವಿಷ್ಯವನ್ನು ಅದರ ಆಧಾರದ ಮೇಲೆ ಕಲ್ಪಿಸಿಕೊಳ್ಳುತ್ತಾ, ವಿಧ್ವಂಸಕ ಸಮಾಜವನ್ನು ನಿರ್ಮಿಸುವ ಮನಸ್ಥಿತಿಯೇ ಅತ್ಯಂತ ಮೂರ್ಖತನದ್ದು, ಧಾರುಣವಾದದ್ದು ಮತ್ತು ವಿಭಜಕ ಮನಸ್ಥಿತಿಯದು…. ಇತಿಹಾಸವನ್ನು ಇತಿಹಾಸವಾಗಿ ನೋಡುತ್ತಾ, ಅದರ ಅನುಭವದ ಆಧಾರದ ಮೇಲೆ, ಒಳ್ಳೆಯ ಅಂಶಗಳನ್ನು ಹೆಕ್ಕಿ ತೆಗೆದು, ಅದನ್ನು ವರ್ತಮಾನದಲ್ಲಿ ಅಳವಡಿಸಿಕೊಳ್ಳುತ್ತಾ, ಅದರ ನೆನಪುಗಳ ಮೇಲೆ ದೂರದೃಷ್ಟಿಯ ಉತ್ತಮ ಭವಿಷ್ಯವನ್ನು…

Read More

ಮತ್ತೆ ಸುದ್ದಿಯಲ್ಲಿ ಹನಿ ಟ್ರ್ಯಾಪ್……

ವಿಜಯ ದರ್ಪಣ ನ್ಯೂಸ್….. ಮತ್ತೆ ಸುದ್ದಿಯಲ್ಲಿ ಹನಿ ಟ್ರ್ಯಾಪ್…… ಅದೂ ವಿಧಾನಸಭಾ ಅಧಿವೇಶನದಲ್ಲಿ……. ರಾಜ್ಯದ ಉಷ್ಣಾಂಶ ಏರು ಗತಿಯಲ್ಲಿ ಸಾಗುತ್ತಿರಬೇಕಾದರೆ, ಜನರ ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿರಬೇಕಾದರೆ, ಅಗತ್ಯ ವಸ್ತುಗಳ ಬೆಲೆ ಏರು ಮುಖದಲ್ಲಿ ಇರಬೇಕಾದರೆ, ಭ್ರಷ್ಟಾಚಾರ ಆಕಾಶದೆತ್ತರಕ್ಕೆ ಸಾಗುತ್ತಿರಬೇಕಾದರೆ, ಅಧಿವೇಶನದಲ್ಲಿ ಹನಿ ಟ್ರ್ಯಾಪ್ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಅಷ್ಟು ದುರ್ಗತಿ ರಾಜಕೀಯ ಕಾರಣಕ್ಕಾಗಿ ರಾಜ್ಯಕ್ಕೆ ಬಂದಿದೆ……. ಎಲ್ಲಾ ಅಪರಾಧ ಮಾರ್ಗಗಳಂತೆ ಇದೂ ಸಹ ಒಂದು ಅಪರಾಧ. ಇಲ್ಲಿ ಚರ್ಚಿಸಬೇಕಾದ ಹೆಚ್ಚಿನ ಅಗತ್ಯವಿಲ್ಲ. ಅಪರಾಧಿಗಳನ್ನು ಬಂಧಿಸುವ ಧೈರ್ಯ, ದಕ್ಷತೆ…

Read More

ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ

ವಿಜಯ ದರ್ಪಣ ನ್ಯೂಸ್ ……. ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಮಡಿಕೇರಿ ಮಾ.20:-ಕೊಡಗು ಜಿಲ್ಲೆಯಲ್ಲಿ ಮಾರ್ಚ್, 21 ರಿಂದ ಏಪ್ರಿಲ್, 04 ರವರೆಗೆ ನಡೆಯುವ ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ಯಾವುದೇ ಅವ್ಯವಹಾರಗಳಿಲ್ಲದಂತೆ ಸುಗಮವಾಗಿ ನಡೆಸುವ ಸಲುವಾಗಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023ರ ಕಲಂ 163 ರಡಿ ದತ್ತವಾದ ಅಧಿಕಾರದಂತೆ ಪರೀಕ್ಷಾ ಕೇಂದ್ರ ಸೇರಿದಂತೆ ಕೇಂದ್ರಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿನ ಪ್ರದೇಶವನ್ನು ನಿರ್ಬಂಧಿತ ಪ್ರದೇಶ ಎಂದು ಘೋಷಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ವೆಂಕಟ್ ರಾಜಾ ಅವರು…

Read More

ಫ್ಯಾಷನ್ ಹೆಸರಿನಲ್ಲಿ ದುಶ್ಚಟಗಳಿಗೆ ಬಲಿಯಾಗದಿರಿ:ಮಂಜಯ್ಯ

ವಿಜಯ ದರ್ಪಣ ನ್ಯೂಸ್….. ಫ್ಯಾಷನ್ ಹೆಸರಿನಲ್ಲಿ ದುಶ್ಚಟಗಳಿಗೆ ಬಲಿಯಾಗದಿರಿ:ಮಂಜಯ್ಯ ದೇವನಹಳ್ಳಿ , ಬೆಂಗಳೂರು ಗ್ರಾಮಾಂತರ ಜಿಲ್ಲೆ .ಮಾರ್ಚ್20: ಮಾದಕ ವಸ್ತುಗಳ ವ್ಯಸನ ಮಾನಸಿಕ ಹಾಗೂ ದೈಹಿಕ ಕಾಯಿಲೆಯಾಗಿದ್ದು, ಮಾದಕ ವಸ್ತುಗಳ ಸೇವನೆಗೆ ಒಳಗಾದರೆ ಅದರಿಂದ ಹೊರಬರುವುದು ಕಷ್ಟ. ಇದು ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಇದರ ವಿರುದ್ಧ ಯುವಜನರಲ್ಲಿ ಅರಿವು ಮೂಡಿಸುವುದು ಅಗತ್ಯವಿದೆ ಎಂದು ದೇವನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಮಂಜಯ್ಯ ಅವರು ತಿಳಿಸಿದರು. ದೇವನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾಡಳಿತ,…

Read More

ವಿದ್ಯಾರ್ಥಿಗಳಿಗೆ ಹೂಗುಚ್ಚ ಸಿಹಿ ಹಂಚಿ ಪರೀಕ್ಷಾ ಕೇಂದ್ರಕ್ಕೆ ಬರಮಾಡಿಕೊಂಡ ಶಿಕ್ಷಕರು

ವಿಜಯ ದರ್ಪಣ ನ್ಯೂಸ್…. ವಿದ್ಯಾರ್ಥಿಗಳಿಗೆ ಹೂಗುಚ್ಚ ಸಿಹಿ ಹಂಚಿ ಪರೀಕ್ಷಾ ಕೇಂದ್ರಕ್ಕೆ ಬರಮಾಡಿಕೊಂಡ ಶಿಕ್ಷಕರು ತಾಂಡವಪುರ ಮಾರ್ಚ್ 21 : ಮೈಸೂರು ತಾಲೂಕು ಕಡಕೋಳ ಕ್ಲಸ್ಟರ್ ಮಠದ ಏಳು ಶಾಲೆಯ ವಿದ್ಯಾರ್ಥಿಗಳನ್ನು ಕಡಕೋಳ ಬಿಕೆಟಿ ಪಬ್ಲಿಕ್ ಶಾಲೆಯ ಎಸ್ ಎಸ್ ಎಲ್ ಸಿ ಪರೀಕ್ಷೆ ಕೇಂದ್ರಕ್ಕೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಬಿಕೆಟಿ ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕ ಕುಮಾರಸ್ವಾಮಿ ಅವರು ವಿದ್ಯಾರ್ಥಿಗಳಿಗೆ ಹೂಗುಚ್ಛ ನೀಡಿ ಸಿಹಿ ವಿತರಿಸಿ ಅದ್ದೂರಿಯಾಗಿ ಸ್ವಾಗತ ಕೋರಿ ಪರೀಕ್ಷೆ ಕೇಂದ್ರಕ್ಕೆ ಬರಮಾಡಿಕೊಂಡರು…

Read More

ಮಾರ್ಚ್ 22 ರಂದು ಜಿಲ್ಲಾಧಿಕಾರಿಗಳಿಂದ ಕಲ್ಯಾಣಿ ಸ್ವಚ್ಛತಾ ಕಾರ್ಯ

ವಿಜಯ ದರ್ಪಣ ನ್ಯೂಸ್….. ಮಾರ್ಚ್ 22 ರಂದು ಜಿಲ್ಲಾಧಿಕಾರಿಗಳಿಂದ ಕಲ್ಯಾಣಿ ಸ್ವಚ್ಛತಾ ಕಾರ್ಯ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮಾ.20: ವಿಶ್ವ ಜಲ ದಿನದ ಅಂಗವಾಗಿ ಮಾರ್ಚ್ 22 ರಂದು ಬೆಳಿಗ್ಗೆ 06 ಗಂಟೆಗೆ ದೊಡ್ಡಬಳ್ಳಾಪುರ ನಗರದ ಸೋಮೇಶ್ವರ ದೇವಸ್ಥಾನದ ಕಲ್ಯಾಣಿಯನ್ನು ಸ್ವಚ್ಛಗೊಳಿಸಿ, ಪುನಶ್ಚೇತನ ಗೊಳಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಈ ಸ್ವಚ್ಚತಾ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಜಿಲ್ಲಾಧಿಕಾರಿ ಎ.ಬಿ ಬಸವರಾಜು ಅವರು ಕೋರಿದ್ದಾರೆ. ಪ್ರತಿ ವರ್ಷ ಮಾರ್ಚ್ 22 ರಂದು ವಿಶ್ವ ಜಲ ದಿನಾಚರಣೆ ಆಚರಿಸಲಾಗುತ್ತಿದ್ದು,…

Read More

” ಹೃದಯ ವಿಶಾಲವಾಗಿದ್ದರೆ ಮಾತ್ರ ಅಲ್ಲಿ ನಿಜವಾದ ಜ್ಞಾನ ಹೊಮ್ಮುತ್ತದೆ ” ಸ್ವಾಮಿ ವಿವೇಕಾನಂದ…….

ವಿಜಯ ದರ್ಪಣ ನ್ಯೂಸ್……. ” ಹೃದಯ ವಿಶಾಲವಾಗಿದ್ದರೆ ಮಾತ್ರ ಅಲ್ಲಿ ನಿಜವಾದ ಜ್ಞಾನ ಹೊಮ್ಮುತ್ತದೆ ” ಸ್ವಾಮಿ ವಿವೇಕಾನಂದ…….   ಜೊತೆಗೆ ಹೃದಯ ಅಥವಾ ಮನಸ್ಸು ಶುದ್ದವಾಗಿದ್ದರೆ ಜ್ಞಾನ ಅಲ್ಲಿ ಶಾಶ್ವತವಾಗಿ ನೆಲೆಸುತ್ತದೆ….. ಎಷ್ಟೊಂದು ಅರ್ಥಪೂರ್ಣ ಮತ್ತು ಅನುಭವದ ಮಾತು. ಇದು ಅಕ್ಷರಶಃ ಸತ್ಯವಾದ ಮಾತು…… ನೀವು ಯಾವುದೇ ಕ್ಷೇತ್ರದಲ್ಲಿರಲಿ, ಎಷ್ಟೇ ಪ್ರತಿಭಾವಂತರಾಗಿರಿ, ನಿಮ್ಮ ಹೃದಯ ವಿಶಾಲ ಮತ್ತು ಶುದ್ದವಾಗಿಲ್ಲದಿದ್ದರೆ ನೀವು ಎಷ್ಟೇ ಜನಪ್ರಿಯರಾಗಿರಿ, ಎಷ್ಟೇ ಶ್ರೀಮಂತರಾಗಿರಿ, ಎಷ್ಟೇ ದೊಡ್ಡ ಹುದ್ದೆಯಲ್ಲಿರಿ ನಿಮ್ಮ ಜ್ಞಾನ ಒಂದು ಮಿತಿಗೆ…

Read More

ಕಾವೇರಿ ಆರತಿ……. ಮಾರ್ಚ್ 21, ಬೆಂಗಳೂರಿನ ಸ್ಯಾಂಕಿಕೆರೆಯಲ್ಲಿ….

ವಿಜಯ ದರ್ಪಣ ನ್ಯೂಸ್….. ಕಾವೇರಿ ಆರತಿ……. ಮಾರ್ಚ್ 21, ಬೆಂಗಳೂರಿನ ಸ್ಯಾಂಕಿಕೆರೆಯಲ್ಲಿ…. ಉತ್ತರ ಪ್ರದೇಶದಗಂಗಾ ಆರತಿಯಂತೆ ಕರ್ನಾಟಕ ಸರ್ಕಾರದ ಅಂಗ ಸಂಸ್ಥೆ ಬೆಂಗಳೂರು ಜಲ ಮಂಡಳಿ ಇದೇ 21ನೇ ತಾರೀಕು ಬೆಂಗಳೂರಿನ ಪ್ರತಿಷ್ಠಿತ ಬಡಾವಣೆ ಸದಾಶಿವನಗರದ ಬಳಿ ಇರುವ ಸ್ಯಾಂಕಿ ಕೆರೆಗೆ ಕಾವೇರಿ ಆರತಿ ಕಾರ್ಯಕ್ರಮ ಮಾಡುತ್ತಿದೆ. ನನ್ನ ವೈಯಕ್ತಿಕ ಅಂದಾಜಿನಂತೆ ಎಲ್ಲಾ ಪ್ರೋಟೋಕಾಲ್ ಮತ್ತು ಇತರ ಖರ್ಚುಗಳ ಸೇರಿ ಸುಮಾರು ಒಂದು ಕೋಟಿಗೂ ಹೆಚ್ಚು ಹಣ ಖರ್ಚಾಗಬಹುದು. ಇಲ್ಲಿಯವರೆಗೂ ಸುಮಾರು 60 ವರ್ಷಗಳಿಂದ ಬೆಂಗಳೂರು ಜಲ…

Read More

ನಿಮ್ಮ ಅಭಿಮಾನಕ್ಕೆ ಸದಾ ಚಿರಋಣಿ : ಡಾ. ಯತೀಂದ್ರ ಸಿದ್ದರಾಮಯ್ಯ

 ವಿಜಯ ದರ್ಪಣ ನ್ಯೂಸ್…. ನಿಮ್ಮ  ಅಭಿಮಾನಕ್ಕೆ ಸದಾ ಚಿರಋಣಿ : ಡಾ. ಯತೀಂದ್ರ ಸಿದ್ದರಾಮಯ್ಯ ತಾಂಡವಪುರ ಮಾರ್ಚ್ 19: ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ನಂದಗುಂದಾಪುರ ಗ್ರಾಮದಲ್ಲಿ ಗ್ರಾಮಸ್ಥರು ವಿಧಾನಪರಿಷತ್ ಸದಸ್ಯ ಹಾಗೂ ವರುಣ ವಿಧಾನಸಭಾ ಕ್ಷೇತ್ರದ ಆಶ್ರಯ ಸಮಿತಿ ಅಧ್ಯಕ್ಷ ಡಾ. ಯತೀಂದ್ರ ಸಿದ್ದರಾಮಯ್ಯ ಅವರನ್ನು ಅದ್ದೂರಿಯಾಗಿ ಸ್ವಾಗತಿಸಿ  ಗೌರವಿಸಿದರು. ಗ್ರಾಮದಲ್ಲಿ ದಿವಂಗತ ರಾಕೇಶ್ ಸಿದ್ರಾಮಯ್ಯನವರ ಹೆಸರಿನಲ್ಲಿ ಸುಮಾರು ಎರಡು ಎಕರೆ ಆರು ಗಂಟೆ ಜಮೀನನ್ನು…

Read More

ಡಿಜಿಟಲ್ ಡಿಟಾಕ್ಸ್ ಸೆಂಟರ್ ಬಿಯಾಂಡ್ ಸ್ಕ್ರೀನ್ಸ್ ಉದ್ಘಾಟನೆ

ವಿಜಯ ದರ್ಪಣ ನ್ಯೂಸ್…. ಕರ್ನಾಟಕ ಸರ್ಕಾರ ಮತ್ತು AIGF ಸಹಭಾಗಿತ್ವದಲ್ಲಿ ಭಾರತದಲ್ಲೇ ಪ್ರಥಮ ಉದ್ಯಮ ನೇತೃತ್ವದ ಡಿಜಿಟಲ್ ಡಿಟಾಕ್ಸ್ ಸೆಂಟರ್ ಬಿಯಾಂಡ್ ಸ್ಕ್ರೀನ್ಸ್ ಉದ್ಘಾಟನೆ ಬೆಂಗಳೂರು, 19 ಮಾರ್ಚ್ 2025: ಜವಾಬ್ದಾರಿಯುತವಾಗಿ ಡಿಜಿಟಲ್ ಸಾಧನಗಳನ್ನು ಬಳಸುವುದು ಮತ್ತು ಯೋಗಕ್ಷೇಮವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಮತ್ತು ಆಲ್ ಇಂಡಿಯಾ ಗೇಮಿಂಗ್ ಫೆಡರೇಶನ್ (AIGF) ಒಂದು ಮಹತ್ವದ ಹೆಜ್ಜೆ ಇಟ್ಟಿದ್ದು, ಡಿಜಿಟಲ್ ಡಿಟಾಕ್ಸ್ ಕಾರ್ಯಕ್ರಮ ಬಿಯಾಂಡ್ ಸ್ಕ್ರೀನ್ಸ್ ಅನ್ನು ಸ್ಥಾಪಿಸಿದೆ. ಈ ತಿಂಗಳು ಆರಂಭಗೊಂಡ ಈ ಕಾರ್ಯಕ್ರಮವು ಭಾರತದಲ್ಲೇ…

Read More