ವಿಶೇಷ ಪೂಜೆಗಳೊಂದಿಗೆ ದ್ಯಾವಪ್ಪ ತಾತನ ಜಾತ್ರಾ ಉತ್ಸವ

ವಿಜಯ ದರ್ಪಣ ನ್ಯೂಸ್…. ವಿಶೇಷ ಪೂಜೆಗಳೊಂದಿಗೆ ದ್ಯಾವಪ್ಪ ತಾತನ ಜಾತ್ರಾ ಮಹೋತ್ಸವ ಶಿಡ್ಲಘಟ್ಟ ತಾಲ್ಲೂಕು ಚಿಕ್ಕಬಳ್ಳಾಪುರ ಜಿಲ್ಲೆ : ಪ್ರತಿವರ್ಷ ಯುಗಾದಿಯ ನಂತರ ಆರಂಭವಾಗುವ ಈ ಮಹೋತ್ಸವಕ್ಕೆ ಈ ಬಾರಿ ಕೂಡ ಚಿಕ್ಕಬಳ್ಳಾಪುರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕೋಲಾರ ಜಿಲ್ಲೆಯ ನಾನಾ ಭಾಗಗಳಿಂದ ಭಕ್ತರು ಆಗಮಿಸಿ ದ್ಯಾವಪ್ಪತಾತನ ಸಮಾಧಿಗೆ ಹಾಲು, ತುಪ್ಪದ ನೈವೇದ್ಯ ಅರ್ಪಿಸಿದರು. ಶಿಡ್ಲಘಟ್ಟ ತಾಲ್ಲೂಕಿನ ದಿಬ್ಬೂರಹಳ್ಳಿ ಮಾರ್ಗದ ದ್ಯಾವಪ್ಪನ ಗುಡಿ(ಜಯಂತಿ ಗ್ರಾಮ)ಯಲ್ಲಿನ ದ್ಯಾವಪ್ಪ ತಾತನ ಸಮಾಧಿ ಸನ್ನಿಧಿಯಲ್ಲಿ ಏ.7ರ ಸೋಮವಾರದಿಂದ 12ರ ವರೆಗೂ…

Read More

ಏಕಕಾಲಕ್ಕೆ ತೆರಿಗೆಯನ್ನು ಪಾವತಿಸಿದರೆ ರಿಯಾಯಿತಿ: ಪೌರಾಯುಕ್ತ ಮೋಹನ್ ಕುಮಾರ್

ವಿಜಯ ದರ್ಪಣ ನ್ಯೂಸ್…. ಏಕಕಾಲಕ್ಕೆ  ತೆರಿಗೆಯನ್ನು ಪಾವತಿಸಿದರೆ ರಿಯಾಯಿತಿ: ಪೌರಾಯುಕ್ತ ಮೋಹನ್ ಕುಮಾರ್ ಶಿಡ್ಲಘಟ್ಟ, ಚಿಕ್ಕಬಳ್ಳಾಪುರ ಜಿಲ್ಲೆ : ಏಪ್ಗರಿಲ್ ಳಾಂತ್ಯಕ್ಕೆ ಎಲ್ಲಾ ಆಸ್ತಿಗಳಿಗೆ ಸಂಬಂಧಿಸಿದ ತೆರಿಗೆಯನ್ನು ಏಕಕಾಲದಲ್ಲಿ ಪಾವತಿಸಿದರೆ ಶೇ.5 ರಷ್ಟು ರಿಯಾಯಿತಿ ನೀಡಲಾಗುವುದು ಎಂದು ನಗರಸಭೆ ಪೌರಾಯುಕ್ತ ವಿ. ಮೋಹನ್‌ ಕುಮಾರ್ ತಿಳಿಸಿದರು. ನಗರದ ನಗರಸಭೆ ಕಛೇರಿಯಲ್ಲಿ ಸುದ್ದಿಗಾರರೊಂದಿಗೆ  ಮಾತನಾಡಿದ ಅವರು 2025-26ನೇ ಸಾಲಿಗೆ ಖಾಲಿ ನಿವೇಶನ, ಮನೆ, ವಸತಿ ಹಾಗೂ ವಾಣಿಜ್ಯ ಸಂಕೀರ್ಣ ಸೇರಿ ಎಲ್ಲಾ ಆಸ್ತಿಗಳ ತೆರಿಗೆಯನ್ನು ಏಪ್ರಿಲ್ ತಿಂಗಳ ಅಂತ್ಯದೊಳಗೆ…

Read More

ಕೃಷಿ ಭೂಮಿಯನ್ನು ಕೆಐಎಡಿಬಿಗೆ ನೀಡುವುದಿಲ್ಲ : ಉಸ್ತುವಾರಿ ಸಚಿವರಿಗೆ ರೈತ ಸಂಘ ಮನವಿ

ವಿಜಯ ದರ್ಪಣ ನ್ಯೂಸ್… ಕೃಷಿ ಭೂಮಿಯನ್ನು ಕೆಐಎಡಿಬಿಗೆ ನೀಡುವುದಿಲ್ಲ : ಉಸ್ತುವಾರಿ ಸಚಿವರಿಗೆ ರೈತ ಸಂಘ ಮನವಿ ಶಿಡ್ಲಘಟ್ಟ , ಚಿಕ್ಕಬಳ್ಳಾಪುರ ಜಿಲ್ಲೆ : ತಾಲ್ಲೂಕಿನ ಜಂಗಮಕೋಟೆ ಹೋಬಳಿಯಲ್ಲಿ ಕೈಗಾರಿಕಾ ವಿಸ್ತರಣೆ ಮಾಡಲು ಹೊರಟಿದ್ದು ಯಾವುದೇ ಕಾರಣಕ್ಕೂ ಫಲವತ್ತಾದ ಕೃಷಿ ಭೂಮಿಯನ್ನು ಕೆಐಎಡಿಬಿಗೆ ನೀಡುವುದಿಲ್ಲ ಎಂಬ ಉದ್ದೇಶದೊಂದಿಗೆ, ರೈತರ ನಿಯೋಗ ಹಾಗೂ ಹಸಿರು ಸೇನೆ ರೈತ ಸಂಘದ ಪದಾಧಿಕಾರಿಗಳು ಬೆಂಗಳೂರಿನ ಗೃಹ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕ‌ರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಕೈಗಾರಿಕಾ ಹೆಸರಿನಲ್ಲಿ…

Read More

ಸಡಗರ ಸಂಭ್ರಮದಿಂದ ನಡೆದ ಶ್ರೀರಾಮ ನವಮಿ ಆಚರಣೆ 

ವಿಜಯ ದರ್ಪಣ ನ್ಯೂಸ್… ಸಡಗರ ಸಂಭ್ರಮದಿಂದ ನಡೆದ ಶ್ರೀರಾಮ ನವಮಿ ಆಚರಣೆ  ಶಿಡ್ಲಘಟ್ಟ ,ಚಿಕ್ಕಬಳ್ಳಾಪುರ ಜಿಲ್ಲೆ : ತಾಲ್ಲೂಕಿನಾಧ್ಯಂತ ಸಡಗರ ಸಂಭ್ರಮ ಹಾಗೂ ಶ್ರದ್ಧಾಭಕ್ತಿಯಿಂದ ಶ್ರೀರಾಮ ನವಮಿಯನ್ನು ಆಚರಿಸಲಾಯಿತು,ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿನ ದೇವಾಲಯಗಳಲ್ಲಿ ಶ್ರೀರಾಮ ನವಮಿಯ ಪ್ರಯುಕ್ತ ವಿಶೇಷ ಪೂಜೆ ಮಾಡಿ ಮಹಾ ಮಂಗಳಾರತಿ ನೆರವೇರಿಸಿ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು. ಮುಖ್ಯವಾಗಿ ಹೆಸರು ಬೇಳೆ ಹಾಗೂ ಪಾನಕವನ್ನು ಪ್ರಸಾದವನ್ನಾಗಿ ಎಲ್ಲಾ ಕಡೆಯೂ ಭಕ್ತರಿಗೆ ಹಂಚಲಾಯಿತು. ಭಕ್ತರು ಟ್ರಾಕ್ಟರ್ ಹಾಗು ಟಿಲ್ಲರ್ ವಾಹನಗಳಲ್ಲಿ ದೊಡ್ಡ ದೊಡ್ಡ ಕೊಳಗಗಳ…

Read More

ಯುವಕರು ಹೈನೋಧ್ಯಮದಲ್ಲಿ  ತೊಡಗಿಸಿಕೊಳ್ಳಬೇಕು: ಶಾಸಕ ಬಿ. ಎನ್. ರವಿಕುಮಾರ್

ವಿಜಯ ದರ್ಪಣ ನ್ಯೂಸ್…. ಯುವಕರು ಹೈನೋಧ್ಯಮದಲ್ಲಿ  ತೊಡಗಿಸಿಕೊಳ್ಳಬೇಕು: ಶಾಸಕ ಬಿ. ಎನ್. ರವಿಕುಮಾರ್ ಶಿಡ್ಲಘಟ್ಟ  ಚಿಕ್ಕಬಳ್ಳಾಪುರ ಜಿಲ್ಲೆ : ಯುವಕರು ಆಸಕ್ತಿ ವಹಿಸಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಬೇಕೆಂದರೆ ಹಾಲಿಗೆ ಉತ್ತಮ ಬೆಲೆ ಸಿಗಬೇಕು, ಹೈನುಗಾರರಿಗೆ ಉತ್ತೇಜನ ನೀಡುವ ಅವರ ಬೆಳವಣಿಗೆಗೆ ಪೂರಕವಾದ ನೆರವನ್ನು ಕಲ್ಪಿಸಿಕೊಡಬೇಕು ಎಂದು ಶಾಸಕ ಬಿ.ಎನ್.ರವಿಕುಮಾ‌ರ್ ತಿಳಿಸಿದರು. ತಾಲ್ಲೂಕಿನ ಚೀಮಂಗಲ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾರಾಯಣದಾಸರಹಳ್ಳಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ, ಶುದ್ಧ ನೀರಿನ ಘಟಕ ಉದ್ಘಾಟನೆ ಮತ್ತು ಸುಮಾರು 75…

Read More

ಬಳ್ಳಿ ಆಲೂಗಡ್ಡೆಯನ್ನು ಬೆಳೆದು ಯಶಸ್ಸು ಕಂಡಿರುವ ಅಪ್ಪೇಗೌಡನಹಳ್ಳಿ ರೈತ ತ್ಯಾಗರಾಜ್

ವಿಜಯ ದರ್ಪಣ ನ್ಯೂಸ್… ಬಳ್ಳಿ ಆಲೂಗಡ್ಡೆಯನ್ನು ಬೆಳೆದು ಯಶಸ್ಸು ಕಂಡಿರುವ ಅಪ್ಪೇಗೌಡನಹಳ್ಳಿ ರೈತ ತ್ಯಾಗರಾಜ್ ಶಿಡ್ಲಘಟ್ಟ ತಾಲ್ಲೂಕು ಚಿಕ್ಕಬಳ್ಳಾಪುರ ಜಿಲ್ಲೆ : ತಾಲ್ಲೂಕಿನ ಅಪ್ಪೇಗೌಡನಹಳ್ಳಿ ರೈತ ಎ.ಎಂ.ತ್ಯಾಗರಾಜ್, ಬಳ್ಳಿ ಆಲೂಗಡ್ಡೆಗಳನ್ನು ಕಳೆದ ನಾಲ್ಕು ವರ್ಷಗಳಿಂದ ಬೆಳೆಯುತ್ತಿದ್ದು, ಇದರ ಗಡ್ಡೆಗಳನ್ನು ರಾಜ್ಯ, ಹೊರ ರಾಜ್ಯಗಳ ರೈತರಿಗೆ ಮತ್ತು ಆನ್ ಲೈನ್ ಮೂಲಕ ಆರ್ಡರ್ ಮಾಡಿದವರಿಗೂ  ಕೂಡ ನೀಡುತ್ತಾ ಬಂದಿದ್ದಾರೆ. ಇವರು ಬೆಳೆಯುವ ಬಳ್ಳಿ ಆಲೂಗಡ್ಡೆ ಬಗ್ಗೆ ದೂರದ ಅಮೆರಿಕಯಲ್ಲಿ ನೆಲೆಸಿದ್ದವರೂ ಇದೀಗ ಆಕರ್ಷಿತರಾಗಿದ್ದಾರೆ. ಅಮೆರಿಕದಲ್ಲಿ ಸುಮಾರು 45 ವರ್ಷಗಳಿಂದ…

Read More

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಶಾಸಕ ಎಸ್.ಎಂ.ಮುನಿಯಪ್ಪ ರಾಜೀನಾಮೆ.

ವಿಜಯ ದರ್ಪಣ ನ್ಯೂಸ್….  ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಶಾಸಕ ಎಸ್.ಎಂ.ಮುನಿಯಪ್ಪ ರಾಜೀನಾಮೆ.  ಚಿಕ್ಕಬಳ್ಳಾಪುರ: ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಶಾಸಕ ಎಸ್.ಎಂ.ಮುನಿಯಪ್ಪ ರಾಜೀನಾಮೆ ನೀಡಿರುವುದು ಜಿಲ್ಲೆಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.ಮುನಿಯಪ್ಪ ರಾಜೀನಾಮೆಗೆ ಶಾಸಕ ಪ್ರದೀಪ್ ಈಶ್ವರ್ ನಡೆ ಕುರಿತ ಅಸಮಾಧಾನವೇ ಕಾರಣ ಎಂಬ ಮಾತು ಕೇಳಿ ಬರುತ್ತಿವೆ. ರಾಜ್ಯ ಸರ್ಕಾರ ಜಾರಿಗೊಳಿಸುತ್ತಿರುವ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಮುನಿಯಪ್ಪ ಅವರನ್ನು ಜಿಲ್ಲಾ…

Read More

ಸಿದ್ದರಾಮಯ್ಯ ಸರ್ಕಾರದಲ್ಲಿ ‘ಎಣ್ಣೆ’ ಅಂಗಡಿ ನೋಡಿದರೂ ಕಿಕ್ ಹೊಡೆಯತ್ತೆ: ಅಶೋಕ ವ್ಯಂಗ್ಯ

ವಿಜಯ ದರ್ಪಣ ನ್ಯೂಸ್… ಸಿದ್ದರಾಮಯ್ಯ ಸರ್ಕಾರದಲ್ಲಿ ‘ಎಣ್ಣೆ’ ಅಂಗಡಿ ನೋಡಿದರೂ ಕಿಕ್ ಹೊಡೆಯತ್ತೆ: ಅಶೋಕ ವ್ಯಂಗ್ಯ ಚಿಕ್ಕಬಳ್ಳಾಪುರ: ನೂತನ ಸಂಸದ ಡಾ.ಕೆ.ಸುಧಾಕರ್‌ಗೆ ನಗರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಶನಿವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಎರಡೂ ಪಕ್ಷಗಳ ರಾಜ್ಯ ನಾಯಕರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ವಿಧಾನಸಭೆ ವಿರೋಧ ಪಕ್ಷದ ನಾಯಕ ಆ‌ರ್.ಅಶೋಕ ಮಾತನಾಡಿ, ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ತೈಲ ಬೆಲೆಯನ್ನು ಲೀಟರ್‌ಗೆ ₹1 ಹೆಚ್ಚಿಸಿದೆವು. ಆಗ ಬೈಕ್‌ಗಳನ್ನು…

Read More

ಅಂತರರಾಷ್ಟ್ರೀಯ ಯೋಗ ದಿನ 2024: ಸದ್ಗುರು ಆದಿಯೋಗಿ ಸನ್ನಿಧಿಯಲ್ಲಿ ಯೋಗ ದಿನಾಚರಣೆ ಆಚರಣೆ

ವಿಜಯ ದರ್ಪಣ ನ್ಯೂಸ್… ಸದ್ಗುರುಆದಿಯೋಗೀ ಕ್ಷೇತ್ರ  ಚಿಕ್ಕಬಳ್ಳಾಪುರ ಜೂನ್ 21: ಅಂತರರಾಷ್ಟ್ರೀಯ ಯೋಗ ದಿನ 2024: ಸದ್ಗುರು ಸನ್ನಿಧಿ ಚಿಕ್ಕಬಳ್ಳಾಪುರದ ಆದಿಯೋಗಿ ಸಮ್ಮುಖದಲ್ಲಿ ಸುಮಾರು 1,000 ಎನ್‌ಸಿಸಿ ಕೆಡೆಟ್‌ಗಳು, ಸೈನಿಕರು, ಮದ್ರಾಸ್ ಸ್ಯಾಪರ್ಸ್, ಬಿಎಸ್‌ಎಫ್, ಸ್ಥಳೀಯ ಗ್ರಾಮಸ್ಥರು ಯೋಗಾಭ್ಯಾಸ ಮಾಡಿದರು 21 ಜೂನ್ 2024: ಸದ್ಗುರು ಸನ್ನಿಧಿ ಚಿಕ್ಕಬಳ್ಳಾಪುರದ ಆದಿಯೋಗಿಯ ಸಮ್ಮುಖದಲ್ಲಿ ಜೂನ್ 21 ರಂದು 10ನೇ ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಬೃಹತ್ ಯೋಗ ಕಾರ್ಯಕ್ರಮ ನಡೆಯಿತು. ಏರ್ ಕಮೋಡೋರ್ ಎಸ್.ಬಿ.ಅರುಣ್ ಕುಮಾರ್ ವಿಎಸ್‌ಎಂ, ಡೆಪ್ಯುಟಿ…

Read More

ಮನಸು ಮನಸುಗಳ ಬೆಸುಗೆಯಲ್ಲಿ ಅಡಗಿದೆ ಇಂದಿನ ಭಾರತದ ಭವಿಷ್ಯ: ಎಸ್.ರಾಜೇಂದ್ರ ಬಾಬು.

ವಿಜಯ ದರ್ಪಣ ನ್ಯೂಸ್.  ಚಿಕ್ಕಬಳ್ಳಾಪುರ ಜಿಲ್ಲೆ. ಆಗಸ್ಟ್ 15  ನಾವು ಈ ದಿನ 77ನೇ ಸ್ವಾತಂತ್ರ್ಯೋತ್ಸವದ  ಸಂಭ್ರಮ ಆಚರಿಸುತ್ತಾ ಇದ್ದೇವೆ. ಸರ್ವ ಧರ್ಮ ಶಾಂತಿಯ ತೋಟ ಎಂದು ನಮ್ಮ ರಾಷ್ಟçಕವಿ ಕುವೆಂಪು ನಮ್ಮ ಭಾರತ ದೇಶವನ್ನು ಬಣ್ಣಿಸಿದ್ದಾರೆ. ಈ ನೆಲದಲ್ಲಿ ಹಿಂದು, ಕ್ರೈಸ್ತ . ಮುಸಲ್ಮಾನ, ಸಿಖ್, ಜೈನ, ಪಾರ್ಸಿ ಹೀಗೆ ವಿವಿಧ ಧರ್ಮದ ಜನರು ತಮ್ಮದೇ ಆಚಾರ ವಿಚಾರಗಳಿಂದ ವಿವಿಧತೆ ತೋರಿದರೂ ನಾವೆಲ್ಲರೂ ಒಂದೇ, ಕುಲವೊಂದೇ, ಮತ ಒಂದೇ. ನಾವು ಮನುಜರು ಎಂಬ ಜಿ.ಎಸ್. ಶಿವರುದ್ರಪ್ಪನವರ…

Read More